60 ಸಾವಿರಕ್ಕಾಗಿ ಬೀಸಿದ್ರು ಮಚ್ಚು! ದನ ಮೇಯಿಸ್ತಿದ್ದಾಗ ತಾಳಿ ಸರ ಕದ್ರು! ಮೋರಿ ವಿಚಾರಕ್ಕೆ ಫೈಟ್ ! ತೀರ್ಥಹಳ್ಳಿ ಕಾರು ಆಕ್ಸಿಡೆಂಟ್! ಮೆಗ್ಗಾನ್​ನಲ್ಲಿ ಕಿರಿಕ್, ಇನ್ನಷ್ಟು ಸುದ್ದಿಗಳು TODAY @CRIME

Crime news that took place in various taluks of Shimoga district

60 ಸಾವಿರಕ್ಕಾಗಿ ಬೀಸಿದ್ರು ಮಚ್ಚು! ದನ ಮೇಯಿಸ್ತಿದ್ದಾಗ ತಾಳಿ ಸರ ಕದ್ರು!  ಮೋರಿ ವಿಚಾರಕ್ಕೆ ಫೈಟ್ ! ತೀರ್ಥಹಳ್ಳಿ ಕಾರು ಆಕ್ಸಿಡೆಂಟ್! ಮೆಗ್ಗಾನ್​ನಲ್ಲಿ ಕಿರಿಕ್,  ಇನ್ನಷ್ಟು ಸುದ್ದಿಗಳು TODAY @CRIME

KARNATAKA NEWS/ ONLINE / Malenadu today/ Jul 12, 2023 SHIVAMOGGA NEWS 

60 ಸಾವಿರಕ್ಕಾಗಿ ಮಚ್ಚು ಬೀಸಿದ ದುಷ್ಕರ್ಮಿಗಳು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ. ಭದ್ರಾಕಾಲೋನಿ ಬಸ್‌ ನಿಲ್ದಾಣದ ಬಳಿ ನಡೆದ ಘಟನೆಯಲ್ಲಿ ಇಬ್ಬರು ಆರೋಪಿಗಳು ಸಂತ್ರಸ್ತನಿಗೆ ಕೊಟ್ಟ  60000 ಹಣವನ್ನು ವಾಪಸ್​ ಕೊಡುವಂತೆ ಕೇಳಿದ್ದಾರೆ. ಅಲ್ಲದೆ ಇದೇ ವಿಚಾರಕ್ಕೆ ಹಿಡಿದು ಹಲ್ಲೆ ಮಾಡಿ ಮಚ್ಚಿನ್ನು ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿದ ಸಂತ್ರಸ್ತರು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. 

ದನ ಮೇಯಿಸುತ್ತಿದ್ದಾಗ ಸರ ಕದ್ದ ಕಳ್ಳರು

ಅತ್ತ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ  ಕಮಲಾಕ್ಷಮ್ಮ ಎಂಬವರು  ಅರದೊಟ್ಟು ಬಸ್ ನಿಲ್ದಾಣದ ಹಸುವನ್ನು ಮೇಯಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೈಕ್​ನಲ್ಲಿ ಬಂದಿದ್ದ ಮೂವರ ಪೈಕಿ ಓರ್ವ ಕೆಳಕ್ಕೆ ಇಳಿದು ಮಹಿಳೆಯ ಹಿಂಬದಿಯಿಂಧ ಬಂದು ಅವರ ಕತ್ತಲ್ಲಿದ್ದ ಸರ ಕದ್ದಿದ್ದಾನೆ. ಬಳಿಕ ಮೂವರು ಬೈಕ್​ನಲ್ಲಿ ಭದ್ರಾವತಿ ಕಡೆಗೆ ತೆರಳಿದ್ದಾರೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.  

ಮೋರಿ ಮುಚ್ಚಿದ್ದಕ್ಕೆ ಬಡಿದಾಟ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ಮೋರಿ ವಿಚಾರಕ್ಕೆ ಜಗಳವಾಗಿ ಹೊಡೆದಾಟವಾಗಿದ್ದು, ಪ್ರಕರಣ ಸೊರಬಪೊಲೀಸ್ ಸ್ಟೇಷನ್​ ಮೆಟ್ಟಿಲೇರಿದೆ. ಬಾಕ್ಸ್​ ಚರಂಡಿಯನ್ನು ಇಲ್ಲಿನ ನಿವಾಸಿಯೊಬ್ಬರು ಮುಚ್ಚಿದ್ದರಂತೆ. ಅದರಿಂದ ಮಳೆ ನೀರು ತಮ್ಮ ಮನೆಯೊಳಗೆ ಬರುತ್ತದೆ ಎಂದು , ಚರಂಡಿ ಕ್ಲೀನ್​ ಮಾಡಲು ಮುಂದಾಗಿದ್ದಾರೆ. ಈ ವಿಚಾರಕ್ಕೆ ಎರಡು ಮನೆಯವರ ನಡುವೆ ಜಗಳ ಬೆಳೆದು, ಕೊನೆಗೆ ಹೊಡೆದಾಟವಾಗಿದ್ದು ವಿಚಾರ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಿದೆ 

ಕಟ್ಟೆಹಕ್ಲು ಬಳಿ ಕಾರುಗಳ ನಡುವೆ ಆಕ್ಸಿಡೆಂಟ್​

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ   ಕಟ್ಟೆಹಕ್ಲು ಗ್ರಾಮದ ಬಳಿ ಎರಡು ಕಾರುಗಳು ನಡುವೆ ಆಕ್ಸಿಡೆಂಟ್ ಆದ ಬಗ್ಗೆ ವರದಿಯಾಗಿದೆ. ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್​ ಎರಡು ಕಾರಿನಲ್ಲಿದ್ದವರು ಹೆಚ್ಚಿಗೆ ಪೆಟ್ಟಾಗಿಲ್ಲ. ಇನ್ನೂ ಪ್ರಕರಣ ರಾಜಿಯಾಗಿದ್ದು, ಪೊಲೀಸರು ದೂರು ಇತ್ಯರ್ಥ ಮಾಡಿದ್ದಾರೆ. 

ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕಿರಿಕ್​

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಗಾಗ ವಿವಾದಕ್ಕೆ ಒಳಗಾಗುತ್ತಲೇ ಇರುತ್ತದೆ. ಇದೀಗ ಇದೇ ವಿಚಾರ ಪೊಲೀಸರು ಎಂಟ್ರಿಕೊಡುವ ಮಟ್ಟಕ್ಕೆ ಹೋಗಿತ್ತು. ಆಸ್ಪತ್ರೆಯಲ್ಲಿನ ರೋಗಿಗಳನ್ನು ನೋಡಿಕೊಳ್ಳುವ ವಿಚಾರಕ್ಕೆ ಸಿಬ್ಬಂಧಿ ತಗಾದೆ ತೆಗೆದಿದ್ದು ಇದೇ ವಿಚಾರಕ್ಕೆ ರೋಗಿಗಳ ಕಡೆಯವರು ಹಾಗೂ ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಈ ಮಧ್ಯೆ ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರು ಎಚ್ಚರಿಕೆ ನೀಡಿ, ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.

 

ಮರಕ್ಕೆ ಗುದ್ದಿ ಬೈಕ್​ ಆಕ್ಸಿಡೆಂಟ್

ಶಿವಮೊಗ್ಗದ ಕುವೆಂಪು ನಗರದ ಬಳಿಯಲ್ಲಿ ಮರಕ್ಕೆ ಬೈಕ್​ ಗುದ್ದಿ ಅಪಘಾತವಾದ ಬಗ್ಗೆ ತಡವಾಗಿ ವರದಿಯಾಗಿದೆ. ಘಟನೆಯಲ್ಲಿ ಬೈಕ್​ ಚಾಲಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.ಈ ಬಗ್ಗೆ ಸಂಚಾರಿ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ದಾಖಲಾಗಿದೆ. 

 


ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ