ಸಿಟಿ ರೌಂಡ್ಸ್​ ಜೊತೆ ಸರ್ಕಲ್​ನಲ್ಲಿ ಎಸ್​ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!

Shivamogga SP Mithun Kumar launched an operation against half helmets. ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹಾಫ್ ಹೆಲ್ಮೆಟ್ ವಿರುದ್ದ ಕಾರ್ಯಾಚರಣೆ ನಡೆಸಿದ್ರು!

ಸಿಟಿ ರೌಂಡ್ಸ್​ ಜೊತೆ ಸರ್ಕಲ್​ನಲ್ಲಿ ಎಸ್​ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS   

ಕೆಲದಿನಗಳಿಂದ ಹಾಫ್ ಹೆಲ್ಮೆಟ್ ವಿರುದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಭಿಯಾನ ನಡೆಸ್ತಿದ್ದು, ಹಾಫ್ ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡುವವರಿಗೆ ಎಚ್ಚರಿಕೆ ನೀಡುತ್ತಿತ್ತು ಅಲ್ಲದೆ ಹಾಫ್ ಹೆಲ್ಮೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ನಿನ್ನೆ ಅಂದರೆ,  ದಿನಾಂಕಃ 18-08-2023  ರಂದು ಸ್ವತಃ ಶಿವಮೊಗ್ಗ ಎಸ್​ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರು ಹಾಫ್ ಹೆಲ್ಮೆಟ್ ವಿಚಾರವಾಗಿ ಫೀಲ್ಡ್​ಗೆ ಇಳಿದಿದ್ದರು.  

ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಐಎಸ್ಐ ಪ್ರಮಾಣಿತವಲ್ಲದ Half Helmet ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ  ವಾಹನ ಸವಾರರನ್ನು ತಡೆದು, ಒಟ್ಟು 500 ಕ್ಕೂ ಹೆಚ್ಚು  ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ವಶಪಡಿಸಿಕೊಂಡು,  ವಾಹನ ಸವಾರರಿಗೆ ಐಎಸ್ಐ ಪ್ರಮಾಣಿತವಲ್ಲದ Half Helmet ಧರಿಸುವದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಐಎಸ್ಐ ಪ್ರಮಾಣಿತ ಹೆಲ್ಮೆಟ್ ಗಳನ್ನು ಧರಿಸುವುದರಿಂದಾಗುವ ಉಪಯೋಗಗಳ ಕುರಿತಂತೆ ಜಾಗೃತಿ ಮೂಡಿಸಿದರು.

ಶಿರಾಳಕೊಪ್ಪದ ಬಳಿ ನಿಯಂತ್ರಣ ತಪ್ಪಿದ ಕಾರು! ಸ್ಥಳದಲ್ಲಿಯೇ ಓರ್ವನ ಸಾವು!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ಸಮೀಪ ಆಕ್ಸಿಡೆಂಟ್ ಸಂಭವಿಸಿದ್ದು ಓರ್ವರು ಮೃತಪಟ್ಟಿದ್ದಾರೆ. 

ನಡೆದಿದ್ದೇನು?

ದಿ:18.08.2023 ರಂದು ಶಿರಾಳಕೊಪ್ಪದ ಉಡುಗಣಿ ಹತ್ತಿರ ಈ ಅಪಘಾತ ಸಂಭವಿಸಿದೆ. ಈ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಆಕ್ಸಿಡೆಂಟ್ ಆಗಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಶಿಕಾರಿಪುರ ಆಸ್ಙತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಕಾರನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿದ್ದಾರೆ..  

ಪ್ರಧಾನಿ ಮೋದಿ ವಿಚಾರದಲ್ಲಿ ವಕೀಲ ನಾಗರಾಜ್ ಕುಡುಪಲಿ ವಿರುದ್ಧ ವಕೀಲರಿಂದ ದಾಖಲಾಯ್ತು ದೂರು!

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು