ಮಂಗಳೂರು ಕುಕ್ಕರ್ ಸ್ಫೋಟ & ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ನಡುವೆ ಇರುವ ಸಂಬಂಧ ಏನು ಗೊತ್ತಾ? ತುಂಗಾ ತೀರದಲ್ಲಿ NIA ಚಾರ್ಜ್ ಶೀಟ್!
Do you know the connection between Mangaluru cooker blast case and Shivamogga trial blast case? On the banks of tunga. NIA chargesheet!
SHIVAMOGGA | Dec 25, 2023 | ಮಂಗಳೂರು ನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಸಂಬಂಧ ಎನ್ಐಎ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ಶೀಟ್ ನಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಗೂ ಇರುವ ಸಂಬಂಧದ ವಿವರಿಸಲಾಗಿದೆ. ಮತ್ತು ಈ ವಿವರದ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಕಂಕನಾಡಿ ಪೊಲೀಸ್ ಸ್ಟೇಷನ್
ಆ ವರದಿಯ ಪ್ರಕಾರ, ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ 19, 2022 ರಂದು ಸಂಜೆ 4.40 ಕ್ಕೆ ಆಟೋರಿಕ್ಷಾದಲ್ಲಿ ಸ್ಫೋಟಗೊಂಡ ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ (Mangaluru cooker bomb blast case) ಹಾಗೂ ಈ ಘಟನೆಗೂ ಮೊದಲು ಶಿವಮೊಗ್ಗದಲ್ಲಿ ಆಗಸ್ಟ್ 15 ರಂದು ನಡೆದಿದ್ದ ಫ್ರೇಮ್ಸಿಂಗ್ಗೆ ಇರಿತ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಮತ್ತು ಆರೋಪಿಗಳ ತನಿಖೆಯ ಬಯಲಾಗಿದ್ದ ಐಎಸ್ಐಎಸ್ ನಂಟಿನ ಪ್ರಕರಣದಲ್ಲಿ ಹೊರಬಿದ್ದ ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೂ ಲಿಂಕ್ ಇದೆ ಎನ್ನಲಾಗಿದೆ.
2023 ರ ನವೆಂಬರ್ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ಮೂಲ ಶಿವಮೊಗ್ಗದಲ್ಲಿ ಬ್ಲಿಂಕ್ ಆಗಿದೆ..
ಆರೋಪಿಗಳ ಜಾಡು
ಆಗಸ್ಟ್ 15, 2022 ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಚಾಕುವಿನಿಂದ ಇರಿದ ಪ್ರಕರಣ ಸಂಭವಿಸಿತ್ತು. ಮೇಜರ್ ಆಗಿದ್ದ ಕೇಸ್ ನಲ್ಲಿ ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ ವಿಶೇಷ ತಂಡ ರಚಿಸಿ ಜಬೀವುಲ್ಲಾ ಮತ್ತಿತರನ್ನ ಅರೆಸ್ಟ್ ಮಾಡಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಈ ಕೇಸ್ನ ಬೆನ್ನಲ್ಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಬಿಗ್ ಬ್ಲಾಸ್ಟ್ ಎನ್ನುವಂತಹ ಸುದ್ದಿ ಹೊಂದಿದ್ದ ಕೇಸ್ ರಿಜಿಸ್ಟರ್ ಆಗಿತ್ತು. ಅಂದಿನ ಬೆಂಗಳೂರು ಮಾಧ್ಯಮಗಳು ಈ ವರದಿಯನ್ನ ಬ್ರೇಕ್ ಮಾಡಿದ್ದವು.
ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್
ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ & ಟೀಂ ಜಬಿವುಲ್ಲಾನ ಪೂರ್ವಪರ ಹಾಗೂ ಆತನ ಮೊಬೈಲ್ನ ಡೇಟಾಗಳನ್ನ ಪರಿಶೀಲಿಸಿದ ಬಳಿಕ ಇಡೀ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿತ್ತು. ಕೇವಲ ದ್ವೇಷದ ಕಾರಣಕ್ಕೆ ಪ್ರೇಮ್ ಸಿಂಗ್ಗೆ ಇರಿಯಲಾಗಿರಲಿಲ್ಲ ಎಂದು ನಂಬಿದ್ದ ಪೊಲೀಸರಿಗೆ ತನಿಖೆಯಲ್ಲಿ ಐಸಿಸ್ ಲಿಂಕ್ನ ವಿಚಾರ ಸ್ಪಷ್ಟವಾಗಿತ್ತು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್
ಸದ್ಯ ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಅಂದಿನ ಘಟನೆಯಲ್ಲಿಯು (ಇರಿತ ಪ್ರಕರಣ) ಮೊಹಮ್ಮದ್ ಶಾರೀಖ್ನ ಪಾತ್ರವಿತ್ತು. ಈ ಘಟನೆಯ ನಂತರ ಶಾರೀಖ್ ಮಂಗಳೂರು Ulaibettu ಎಂಬಲ್ಲಿಗೆ ತೆರಳಿ ತಲೆಮರೆಸಿಕೊಂಡಿದ್ದ ಅಲ್ಲ ಅನ್ಸರ್ ಎಂಬವನ ಜೊತೆಗಿದ್ದ ಶಾರೀ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ನ ಪ್ರಮುಖ ಆರೋಪಿ ಸಯ್ಯದ್ ಯಾಸೀನ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಮಂಗಳೂರು ಗೋಡೆ ಪ್ರಕರಣ
ಮಂಗಳೂರು ಗೋಡೆ ಪ್ರಕರಣದ ಆರೋಪಿ ಜೊತೆಗಿದ್ದ ಶಾರೀಖ್ ಆನಂತರ ಐಸಿಸ್ ಹ್ಯಾಂಡ್ಲರ್ನ ಅಣತಿಯಂತೆ ಕೆಲಸ ಮಾಡುತ್ತಿದ್ದ. ವಿವಿಧ ಆ್ಯಪ್ ಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದ ಆರೋಪಿಗಳು ಹಾಗೂ ಶಾರೀಖ್ ಆಗಸ್ಟ್ 20 ಕ್ಕೆ ತೀರ್ಥಹಳ್ಳಿಗೆ ವಾಪಸ್ ಬಂದಿದ್ದ. ಅಲ್ಲಿಂದ ಬೆಂಕಿ ಪೊಟ್ಟಣಗಳನ್ನ ಪ್ರಾಸ್ಪರಸ್ (phosphorus) ಗಾಗಿ ಸಂಗ್ರಹಿಸಲು ಆರಂಭಿಸಿದ್ದ ಎಂದು ಹೇಳಲಾಗಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಯಾಸೀನ್ಗೂ ಬೆಂಕಿಪೊಟ್ಟಣ್ಣಗಳನ್ನ ಸಂಗ್ರಹಿಸಲು ತಿಳಿಸಿದ್ದಾನೆ. ರಾಷ್ಟ್ರೀಯ ಮಾಧ್ಯಮದ ವರದಿ ಪ್ರಕಾರ, ಹೀಗೆ ಎನ್ಐಎ ಆರೋಪಿಗಳ ಜಾಡ್ನ್ನ ರಿವರ್ಸ್ ಇನ್ವೆಸ್ಟಿಗೇಷನ್ನ ಮೂಲಕ ಪತ್ತೆ ಮಾಡುತ್ತಾ ಚಾರ್ಜ್ಶೀಟ್ನಲ್ಲಿ ಹಲವು ಅಂಶಗಳನ್ನು ನಮೂದಿಸಿದೆ.
ಪ್ರೇಮ್ ಇಂಗ್ಗೆ ಇರಿತ ಪ್ರಕರಣ
ಚಾರ್ಜ್ಶೀಟ್ನಲ್ಲಿ ಮುಂದುವರಿದಂತೆ, ಪ್ರೇಮ್ ಸಿಂಗ್ ಪ್ರಕರಣವನ್ನು ಮುಖ್ಯವಾಗಿ ಪರಿಗಣಿಸಿದ ಎಸ್ಪಿ ಲಕ್ಷ್ಮೀಪ್ರಸಾದ್ ಆ್ಯಡ್ ಟೀಂ ಜಬಿವುಲ್ಲನ ಬಳಿ ಇಸ್ಲಾಮಿಕ್ ಸ್ಟೇಟ್ಸ್ಗೆ ಸಂಬಂಧಿಸಿದ ವಿಷಯಗಳು ಸಿಕ್ಕ ಬಳಗಿ ಮತ್ತಷ್ಟು ಅಲರ್ಟ್ ಆಗುತ್ತದೆ. ಈ ವಿಚಾರ ಆಗಸ್ಟ್ 28 ಕ್ಕೆ ಶಾರೀಖ್ಗೆ ಗೊತ್ತಾಗುತ್ತದೆ. ತನ್ನ ತಂಡದ ಮುಖ್ಯಸ್ಥನಿಗೆ ಇದರ ಮಾಹಿತಿ ನೀಡಿದ ಆತ ತೀರ್ಥಹಳ್ಳಿ ಬಿಟ್ಟು ಎಸ್ಕೇಪ್ ಆಗಲು ರೆಡಿಯಾಗುತ್ತಾನೆ.
ತೀರ್ಥಹಳ್ಳಿ ಹೊಳೆ
ಇದಕ್ಕೂ ಮೊದಲು ಸೈಯ್ಯದ್ ಯಾಸೀನ್ನನ್ನ ತೀರ್ಥಹಳ್ಳಿಯ ನಾಡ್ತಿ ಹೊಳೆಯ ಬಳಿಯಲ್ಲಿ ಭೇಟಿಯಾಗುತ್ತಾನೆ. ಅಲ್ಲಿ ಯಾಸಿನ್ ಗೆ ಶಾರೀಖ್ ಪ್ರಾಸ್ಪರಸ್ ಪೌಡರ್ ನೀಡುತ್ತಾನೆ. ಇದಕ್ಕೆ ಬದಲಾಗಿ ಯಾಸೀನ್ ಟೈಂ ರಿಲೇ ಸರ್ಕಿಟ್ವೊಂದನ್ನ ಶಾರೀಖ್ಗೆ ನೀಡುತ್ತಾನೆ. ಇದಾದ ಬಳಿಕ ಶಾರೀಖ್ ಬೆಂಗಳೂರುಗೆ ತೆರಳಿದ್ದ ಇನ್ನೂ ಇವೆಲ್ಲದರ ನಡುವೆ ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆದಿತ್ತು. ಇದು ಸಹ ಶಾರೀಖ್ ತಂಡದ ಮುಖ್ಯಸ್ಥ ಹೇಳಿದ್ದ ಕಾರಣಕ್ಕೆ . ಈ ಟ್ರಯಲ್ನಲ್ಲಿ ಐಇಡಿಯನ್ನ ಬಳಸಲಾಗಿತ್ತು. ಈ ಟ್ರಯಲ್ ಬ್ಲಾಸ್ಟ್ ಗೆ ಕಾರಣಗಳು ಇದ್ದವು.
ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್
ಕಾರಣ 1: ಆರೋಪಿಗಳೇ ತಯಾರಿಸಿದ ಐಇಡಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆಯಾ ಎಂದು ನೋಡುವ ಸಲುವಾಗಿ ಬ್ಲಾಸ್ಟ್ ಮಾಡಿದ್ದರು. ಟ್ರಯಲ್ ಬ್ಲಾಸ್ಟ್ ಮೂಲಕ ಐಇಡಿಯ ಸಾಮರ್ಥ್ಯವನ್ನ ಪರೀಕ್ಷಿಸಿದ್ದರು.
ಕಾರಣ 2 : ಈ ಟ್ರಯಲ್ ಬ್ಲಾಸ್ಟ್ ನ ಮೂಲಕ ಈ ಆರೋಪಿಗಳ ತಂಡ ಸೇರಿದ್ದವರನ್ನ ತಮ್ಮ ವಿಚಾರದಲ್ಲಿ ಇನ್ನಷ್ಟು ಕಾನ್ಫಿಡೆನ್ಸ್ ತುಂಬಲು ಪ್ರಯತ್ನಿಸಿದ್ದರು. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾ ಮೂಲಕ ಅಪ್ಲೋಡ್ ಮಾಡುವ ಮೂಲಕ ತಮ್ಮ ಕೃತ್ಯದ ಬಗ್ಗೆ ಸಾರಲು ಮುಂದಾಗಿದ್ದರು.
ಕಾರಣ 3 : ವಿಐಪಿ ಹಾಗೂ ವಿವಿಐಪಿಗಳ ಮೇಲೆ ತೋಳದ ದಾಳಿ(ಏಕಾಂಗಿಯಾಗಿ ಇರುವ ವಸ್ತುಗಳು ವಾಹನಗಳನ್ನ ಬಳಸಿ ದಾಳಿ ನಡೆಸುವ ಭಯೋತ್ಪಾದನಾ ಕೃತ್ಯ!) ನಡೆಸುವ ಉದ್ದೇಶಕ್ಕೆ ತಯಾರಿ ನಡೆಸಲು ಮುಂದಾಗಿದ್ದರು.
ತೋಳದ ದಾಳಿ
ಎನ್ಐಎ ತನ್ನ ಚಾರ್ಜ್ಶೀಟ್ ನಲ್ಲಿ ಟ್ರಯಲ್ ಬಾಸ್ಟ್ ನಡೆಸಲು ಆರೋಪಿಗಳು ಉದ್ದೇಶಿಸಿದ ಈ ಮೂರು ಕಾರಣಗಳನ್ನ ತಿಳಿಸಿರುವುದರ ಜೊತೆ ಜೊತೆಗೆ ತೋಳದ ದಾಳಿ ಮಾದರಿ ಅಟ್ಯಾಕ್ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದೆ. ಇದು ಆತಂಕಕಾರಿ ಸಂಗತಿಯಾಗಿದೆ.
ಇನ್ನೂ ಶಿವಮೊಗ್ಗದಲ್ಲಿ ನಡೆದಿದ್ದ ಟ್ರಯಲ್ ಬ್ಲಾಸ್ಟ್ಗೆ ಶಾರೀಖ್ ರಾ ಮೆಟಿರಿಯಲ್ ಸಪ್ಲೆ ಮಾಡಿದ್ದರೆ, ಯಾಸಿನ್ ಬಾಂಬ್ನ್ನ ಅಸಂಬಲ್ ಮಾಡಿದ್ದ , ಅಲ್ಲದೆ ಅದಕ್ಕೆ ಟೈಮರ್ ಫಿಕ್ಸ್ ಮಾಡಿದ್ದ. ಈತನ ಬಂಧನದ ಬೆನ್ನಲ್ಲೆ ಶಾರೀಖ್ ಅಂಡರ್ ಗ್ರೌಂಡ್ಗೆ ತೆರಳಿದ್ದ
ಪ್ರಕರಣದಲ್ಲಿ ಯಾಸೀನ್ ಪೊಲೀಸರಿಗೆ ಇಡೀ ಕೃತ್ಯದ ರೂಪುರೇಷೆ, ಕಾರಣ ಹಾಗೂ ಉದ್ದೇಶಗಳನ್ನ ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೆ 2047 ರಲ್ಲಿ Islamic Caliphate ನ್ನ ಸ್ಥಾಪಿಸುವ ಗುರಿ ಹೊಂದಿದ್ದ.
ಮೈಸೂರು ಜಿಲ್ಲೆ
ಆಗಸ್ಟ್ ಕೊನೆವಾರದಲ್ಲಿ ಎಸ್ಕೇಪ್ ಆಧ ಶಾರೀಖ್ ಮೈಸೂರಿಗೆ ಹೋಗಿ ಫೇಕ್ ಆಧಾರ್ ಕಾರ್ಡ್ ನೀಡಿ ವಿವಿಧ ಕಡೆಗಳಲ್ಲಿ ವಾಸವಿದ್ದ ಆತ ಅಲ್ಲಿ ಕುಕ್ಕರ್ ಬಾಂಬ್ ತಯಾರಿಸಿಕೊಂಡು ಮಂಗಳೂರಿಗೆ ಬಂದಿಳಿದಿದ್ದ. ಅಲ್ಲಿ ನಡೆದ ಘಟನೆಯ ವಿವರ ನಿಮಗೆಲ್ಲಾ ಗೊತ್ತೆ ಇದೆ. ಇದಿಷ್ಟು ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ಗೆ ಇರುವ ಲಿಂಕ್.. ಈ ಬಗ್ಗೆ ಎನ್ಐಎನ ಜಾರ್ಜ್ ಶೀಟ್ನಲ್ಲಿದ್ದಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.