ಲೈಟ್​ ಕಂಬಕ್ಕೆ ಗುದ್ದಿ ಕೆರೆಗೆ ಉರುಳಿದ ಕಾರು/ ಆಗುಂಬೆಯಲ್ಲಿ ಕಾರು ಬೈಕ್​ ಡಿಕ್ಕಿ ಇಬ್ಬರಿಗೆ ಗಾಯ

SHIVAMOGGA  |  Jan 15, 2024  |  ಶಿವಮೊಗ್ಗ ಜಿಲ್ಲೆ ಸೊರಬ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಕಾರ್ ಒಂದು ಲೈಟ್ ಕಂಬಕ್ಕೆ ಬುದ್ಧಿ ಕೆರೆಗೆ ಬಿದ್ದಿರುವ ಘಟನೆ ಸಂಭವಿಸಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಹೋಗಿ  ERV ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. 

malenadu today

 

ಡಿವೈಡರ್​ಗೆ ಗುದ್ದಿದ ಒಮಿನಿ

ಇನ್ನೊಂದಡೆ  ಓಮಿನಿ ವಾಹನವವೊಂದು ಶಿರಾಳಕೊಪ್ಪದಿಂದ ವಾಪಾಸ್ಸು ಸೊರಬ ಕ್ಕೆ  ಬರುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಸೊರಬ ಪಟ್ಟಣದ ಗಣೇಶ್ ಪ್ರಸಾದ್ ಹೋಟೆಲ್ ಮುಂಭಾಗದಲ್ಲಿ ವಾಹನವೂ ರಸ್ತೆಯ ಡಿವೈಡರ್ ಗೆ ಡಿಕ್ಕಿಹೊಡೆದಿದೆ. ಪರಿಣಾ, ಓಮಿನಿಯ ಹಿಂಭಾಗದಲ್ಲಿ ಕುಳಿತ್ತಿದ್ದ ಮಹಿಳೆ ಗಾಯಗೊಂಡಿದ್ದಾರೆ. 

ಆಗುಂಬೆ ಪೊಲೀಸ್ ಸ್ಟೇಷನ್

ಇನ್ನೊಂದೆಡೆ ಆಗುಂಬೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ  ಕಾರು ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

malenadu today


Leave a Comment