ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ಅಪಘಾತ! ಲೈಟ್​ಕಂಬಕ್ಕೆ ಗುದ್ದಿ ಪಲ್ಟಿಯಾದ ಲಾರಿ

Accident near Anandpur in Sagar taluka Lorry hits light pole, overturns

ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ಅಪಘಾತ! ಲೈಟ್​ಕಂಬಕ್ಕೆ ಗುದ್ದಿ ಪಲ್ಟಿಯಾದ ಲಾರಿ

MALENADUTODAY.COM | SHIVAMOGGA NEWS | SAGARA TALUK

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಬರುವ ಬೈರಾಪುರದ ಪೀರನ ಕಣಿವೆ ಸಮೀಪ ನಿನ್ನೆ ಲಾರಿಯೊಂದು ಅಪಘಾತಕ್ಕೀಡಾಗಿತ್ತು. ಇಲ್ಲಿನ ಲೈಟ್​ ಕಂಬಕ್ಕೆ ಗುದ್ದಿದ ಲಾರಿ ಪಲ್ಟಿಯಾಗಿತ್ತು. 

*ಶಿವಮೊಗ್ಗ ದೊಡ್ಡಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ! 25 ಮಂದಿ ವಶಕ್ಕೆ ! ನಡೆದಿದ್ದೇನು? ವಿವರ ಇಲ್ಲಿದೆ*

ನಡೆದಿದ್ದು ಹೇಗೆ? 

ಶಿಕಾರಿಪುರದಿಂದ ಆನಂದಪುರದ ಕಡೆಗೆ ಬರುತ್ತಿದ್ದ ಲಾರಿಯು, ಚಾಲಕನ ನಿಯಂತ್ರಣ ತಪ್ಪಿ, ಲೈಟ್​ ಕಂಬಕ್ಕೆ ಗುದ್ದಿ ಪಲ್ಟಿಯಾಗಿ ರಸ್ತೆಯಲ್ಲಿಯೇ ಉರುಳಿದೆ. ಇನ್ನೂ ಗುದ್ದಿದ ರಭಸಕ್ಕೆ ಲೈಂಟ್​ ಕಂಬ ಪೀಸ್​ ಪೀಸ್ ಆಗಿತ್ತು. ತಕ್ಷಣ ಸ್ಥಳಕ್ಕೆ ಓಡಿಬಂದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನ ಲಾರಿಯಿಂದ ಇಳಿಸಿ, ಆರೈಕೆ ಮಾಡಿದ್ರು. ಆನಂತರ ಆತನನ್ನು ಶಿಕಾರಿಪುರದ ಆಸ್ಪತ್ರೆಗೆ ಸಾಗಿಸಲಾಯ್ತು. ಇನ್ನೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕರೆಂಟ್ ವೈಯರ್​ಗಳನ್ನ ಸರಿಪಡಿಸಿದರಷ್ಟೆ ಅಲ್ಲದೆ, ಯಾವುದೇ ಅವಘಢ ಆಗದಂತೆ ಎಚ್ಚರವಹಿಸಿದ್ರು. ಪೊಲೀಸರು ವಾಹನ ಸಂಚಾರ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com