ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ಅಪಘಾತ! ಲೈಟ್ಕಂಬಕ್ಕೆ ಗುದ್ದಿ ಪಲ್ಟಿಯಾದ ಲಾರಿ
Accident near Anandpur in Sagar taluka Lorry hits light pole, overturns
MALENADUTODAY.COM | SHIVAMOGGA NEWS | SAGARA TALUK
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಬರುವ ಬೈರಾಪುರದ ಪೀರನ ಕಣಿವೆ ಸಮೀಪ ನಿನ್ನೆ ಲಾರಿಯೊಂದು ಅಪಘಾತಕ್ಕೀಡಾಗಿತ್ತು. ಇಲ್ಲಿನ ಲೈಟ್ ಕಂಬಕ್ಕೆ ಗುದ್ದಿದ ಲಾರಿ ಪಲ್ಟಿಯಾಗಿತ್ತು.
*ಶಿವಮೊಗ್ಗ ದೊಡ್ಡಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ! 25 ಮಂದಿ ವಶಕ್ಕೆ ! ನಡೆದಿದ್ದೇನು? ವಿವರ ಇಲ್ಲಿದೆ*
ನಡೆದಿದ್ದು ಹೇಗೆ?
ಶಿಕಾರಿಪುರದಿಂದ ಆನಂದಪುರದ ಕಡೆಗೆ ಬರುತ್ತಿದ್ದ ಲಾರಿಯು, ಚಾಲಕನ ನಿಯಂತ್ರಣ ತಪ್ಪಿ, ಲೈಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿ ರಸ್ತೆಯಲ್ಲಿಯೇ ಉರುಳಿದೆ. ಇನ್ನೂ ಗುದ್ದಿದ ರಭಸಕ್ಕೆ ಲೈಂಟ್ ಕಂಬ ಪೀಸ್ ಪೀಸ್ ಆಗಿತ್ತು. ತಕ್ಷಣ ಸ್ಥಳಕ್ಕೆ ಓಡಿಬಂದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನ ಲಾರಿಯಿಂದ ಇಳಿಸಿ, ಆರೈಕೆ ಮಾಡಿದ್ರು. ಆನಂತರ ಆತನನ್ನು ಶಿಕಾರಿಪುರದ ಆಸ್ಪತ್ರೆಗೆ ಸಾಗಿಸಲಾಯ್ತು. ಇನ್ನೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕರೆಂಟ್ ವೈಯರ್ಗಳನ್ನ ಸರಿಪಡಿಸಿದರಷ್ಟೆ ಅಲ್ಲದೆ, ಯಾವುದೇ ಅವಘಢ ಆಗದಂತೆ ಎಚ್ಚರವಹಿಸಿದ್ರು. ಪೊಲೀಸರು ವಾಹನ ಸಂಚಾರ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com