ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ರೈಲು ಹರಿದ ಪರಿಣಾಮ, ಕೂಲಿ ಕಾರ್ಮಿಕನ ಕಾಲು ಕಟ್ ಆಗಿದೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಕೂಲಿ ಕಾರ್ಮಿಕನನ್ನು ಹಾಗೂ ಕಟ್ ಆಗಿದ್ದ ಆತನ ಕಾಲನ್ನು ಸ್ಟ್ರೆಚ್ಚರ್​ನಲ್ಲಿ ಆಸ್ಪತ್ರೆಗೆ ಸಾಗಿಸಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​
ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ಶಿವಮೊಗ್ಗ :  ನಗರದ ಉಷಾ ನರ್ಸಿಂಗ್​ ಹೋಂ ಬಳಿಯಲ್ಲಿ ಕೂಲಿ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ತನ್ನ ಕಾಲು ಕಳೆದುಕೊಂಡಿದ್ದಾನೆ.  ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಸವಳಂಗ ರಸ್ತೆ ಬಳಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಿದ್ದ. 

ಮೂಲಗಳ ಪ್ರಕಾರ, ಒಡಿಶಾ ಮೂಲದ ವ್ಯಕ್ತಿ ನಿನ್ನೆ ಉಷಾ ನರ್ಸಿಂಗ್ ಹೋಂ ಬಳಿಯಲ್ಲಿರುವ ರೈಲ್ವೆ ಟ್ರ್ಯಾಕ್​ ಮೇಲೆ ಮಲಗಿದ್ದ ಎನ್ನಲಾಗ್ತಿದೆ. ಮತ್ತೆ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದ  ಎನ್ನುತ್ತಿದ್ದಾರೆ. ಪಾನಮತ್ತನಾಗಿದ್ದ ಈತನ ಮೇಲೆ ತಾಳಗುಪ್ಪ ಟ್ರೈನ್​ ಹರಿದಿದೆ. 

ರೈಲು ಹರಿದ ಪರಿಣಾಮ, ಕೂಲಿ ಕಾರ್ಮಿಕನ ಕಾಲು ಕಟ್ ಆಗಿದೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಕೂಲಿ ಕಾರ್ಮಿಕನನ್ನು ಹಾಗೂ ಕಟ್ ಆಗಿದ್ದ ಆತನ ಕಾಲನ್ನು ಸ್ಟ್ರೆಚ್ಚರ್​ನಲ್ಲಿ ಆಸ್ಪತ್ರೆಗೆ ಸಾಗಿಸಿದರು.