Shivamogga accident/ ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಹೋಗ್ತಿದ್ದ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ! ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಸವಾರ

Shivamogga accident Terrible accident Bus on its way to Chikmagalur from Belagavi collided with a bike. The rider who died on the spot

Shivamogga accident/  ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಹೋಗ್ತಿದ್ದ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ! ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಸವಾರ

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಹೊಳೆಹಟ್ಟಿಯಲ್ಲಿ ಬಸ್ ಹಾಗೂ ಬೈಕ್​ಗೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ. 

 

ಬೈಕ್ ಹಾಗು KSRTC ಬಸ್ಸ್ ನಡುವೆ ಅಪಘಾತವಾಗಿದ್ದು  ಘಟನೆಯಲ್ಲಿ ಹಸೂಡಿ ಗ್ರಾಮದ ಮಂಜುನಾಥ (45) ಸಾವನ್ನಪ್ಪಿದ್ಧಾರೆ.  ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಬಸ್ ತೆರಳುತ್ತಿತ್ತು. ಇನ್ನೂ  ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. 


ಶ್ರೀ ಭಗೀರಥ ಸಹಕಾರ ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಗೆ ಆಹ್ವಾನ

ಶಿವಮೊಗ್ಗದ  ಶ್ರೀ ಭಗೀರಥ ಸಹಕಾರ ಸಂಘ ನಿ. ಶಿವಮೊಗ್ಗ ತಿಲಕ್ ನಗರ ಇದರ  ಪ್ರಥಮ ಸರ್ವ ಸದಸ್ಯರ ಮಹಾಸಭೆ ಇವತ್ತು ನಡೆಯಲಿದೆ. ಈ ಸಂಬಂದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.  

ಪ್ರಕಟಣೆ

ದಿನಾಂಕ: 24.06.2023ರ ಶನಿವಾರ ಪತ್ರಿಕಾ ಭವನ, ಆರ್.ಟಿ.ಒ ರಸ್ತೆ, ಶಿವಮೊಗ್ಗ ಇಲ್ಲಿ ಸಂಘದ ಮುಖ್ಯ ಪ್ರವರ್ತಕರಾದ ಎನ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ. ಸರ್ವಸದಸ್ಯರು ಸಕಾಲಕ್ಕೆ ಸಭೆಗೆ ಆಗಮಿಸಿ ಪ್ರಥಮ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.

ಸ್ಥಳ : ಪತ್ರಿಕಾ ಭವನ ಆರ್.ಟಿ.ಓ.ಆಫೀಸ್ ರಸ್ತೆ ಶಿವಮೊಗ್ಗ

ದಿನಾಂಕ:24-6-2023 ಸಮಯ : ಬೆಳಗ್ಗೆ 11ಕ್ಕೆ