ಹೈ ಸ್ಪೀಡ್ ಖಾಸಗಿ ಬಸ್​ಗಳ ಬಗ್ಗೆ ಎಸ್​ಪಿಗೆ ಜನರ ದೂರು! ಸ್ಪೀಕರ್​ ಸೌಂಡ್​ಗಳ ಬಗ್ಗೆಯು ಕ್ರಮ ಅಂದ್ರು ಎಸ್​ಪಿ ಮಿಥುನ್ ಕುಮಾರ್​!

People complain to SP about high-speed private buses! SP Mithun Kumar said that action will be taken on the speaker sounds.

ಹೈ ಸ್ಪೀಡ್ ಖಾಸಗಿ ಬಸ್​ಗಳ ಬಗ್ಗೆ ಎಸ್​ಪಿಗೆ ಜನರ ದೂರು!  ಸ್ಪೀಕರ್​ ಸೌಂಡ್​ಗಳ ಬಗ್ಗೆಯು ಕ್ರಮ   ಅಂದ್ರು ಎಸ್​ಪಿ ಮಿಥುನ್  ಕುಮಾರ್​!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆ ಸೊರಬ ತಾಲ್ಲೂಕಿನ  ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮನವಳ್ಳಿ ಮತ್ತು ಎಣ್ಣೆಕೊಪ್ಪ ಗ್ರಾಮಗಳಲ್ಲಿ ಎಸ್​ಪಿ ಮಿಥುನ್ ಕುಮಾರ್​ ನಿನ್ನೆ  ಜನಸಂಪರ್ಕ ಸಭೆ ನಡೆಸಿ , ಕೆಲವೊಂದು ಸೂಚನೆಗಳನ್ನ ನೀಡಿದ್ದಾರೆ. ಅವುಗಳು ಯಾವುವು ಎಂದು ನೋಡುವುದಾದರೆ,  

1) ಗ್ರಾಮಗಳಲ್ಲಿ ಬೀಟ್ ಸಮಿತಿಯನ್ನು ರಚಿಸಿ, ನಿರಂತರವಾಗಿ ಬೀಟ್ ಅಧಿಕಾರಿ / ಸಿಬ್ಬಂಧಿಯವರು ಗ್ರಾಮಗಳಿಗೆ ಭೇಟಿ ನೀಡಿ, ಬೀಟ್ ಸಮಿತಿ ಸಭೆಯನ್ನು ನಡೆಸುತ್ತಾರೆ ಮತ್ತು ಗ್ರಾಮದಲ್ಲಿನ ಯುವಕರನ್ನೊಳಗೊಂಡ ಯುವಪಡೆಯನ್ನು ರಚಿಸಿ, ಅವರುಗಳು ಬೀಟ್ ಸಿಬ್ಬಂಧಿಗಳೊಂದಿಗೆ ಗಸ್ತು ಮಾಡುವುದು ಹಾಗೂ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆ /  ಬೀಟ್ ಸಿಬ್ಬಂಧಿಗೆ ಮಾಹಿತಿ ನೀಡಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಜನರಿಗೆ ಸೂಚಿಸಿದರು. 

2) ಸರಕು ಸಾಗಾಣಿಕೆ ಮತ್ತು ಇತರೆ ಎಲ್ಲಾ ತೆರನಾದ ವಾಹನಗಳ ಸವಾರರು ಚಾಲನಾ ಪರವಾನಿಗೆ ಮತ್ತು ವಾಹನದ ವಿಮೆ ಇಲ್ಲದೆ ವಾಹನಗಳನ್ನು ಚಾಲನೆ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿ ಚಾಲನೆ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

3) ದ್ವಿ ಚಕ್ರ ವಾಹನ ಸವಾರರು ಕೇವಲ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಹೆಲ್ಮೆಟ್ ಧರಿಸದೇ, ತಮ್ಮ ರಕ್ಷಣೆಯ ದೃಷ್ಠಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಮತ್ತು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದರು

4) ಬಾಲ್ಯ ವಿವಾಹ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿಯ ಘಟನೆಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದರು

5) ಖಾಸಗಿ ಬಸ್ ಗಳ ಚಾಲಕರು ರಸ್ತೆಯಲ್ಲಿ ಅತೀವೇಗವಾಗಿ ಚಾಲನೆ ಮಾಡುವುದರಿಂದ ಮತ್ತು ಹೆಚ್ಚಿನ ಶಬ್ದವನ್ನುಂಟು ಮಾಡುವ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಚಾಲನೆ ಮಾಡುವುದರಿಂದ ರಸ್ತೆ ಅಫಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ, ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. 

6) ಯಾವುದೇ ಅಗತ್ಯ ಮತ್ತು ತುರ್ತು ಸಂದರ್ಭದಲ್ಲಿ ERSS – 112  ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳಿ ಎಂದು ತಿಳಿಸಿದರು.  


ಸದ್ದಿಲ್ಲದೇ ಬಂದ್ ಆಗುತ್ತಿದೆ VISL ! ಗುತ್ತಿಗೆ ಕಾರ್ಮಿಕರಲ್ಲಿ ಹೆಚ್ಚಿದ ಆತಂಕ! ಸುಳ್ಳಾಯ್ತಾ ಭರವಸೆಗಳು!?

ಭದ್ರಾವತಿ/  ಕೇಂದ್ರ ಉಕ್ಕು ಪ್ರಾಧಿಕಾರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು,, ಗುತ್ತಿಗೆ ಕಾರ್ಮಿಕರನ್ನ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. 

ಈ ಹಿಂದೆ ಒಂದು ವರ್ಷದ ಅವಧಿಯವರೆಗೂ ಯಾವುದೇ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳುವುದಿಲ್ಲ ಎಂಬ ನಿರ್ಧಾರವನ್ನ ಸಂಸದ ಬಿ.ವೈ .ರಾಘವೇಂದ್ರರವರು ತಿಳಿಸಿದ್ದರು. ಆದರೆ ಇದೀಗ ಫ್ಯಾಕ್ಟರಿಯಲ್ಲಿ ನಿರ್ದಿಷ್ಟ ವಿಭಾಗಗಳನ್ನ ಬಂದ್ ಮಾಡಿ, ಕಾರ್ಮಿಕರನ್ನ ತೆಗೆದುಹಾಕಲಾಗುತ್ತಿದೆ.   ಎಚ್‌ಟಿಎಸ್ ಇಲಾಖೆಯಲ್ಲಿನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. 

ಕಾರ್ಖಾನೆಯನ್ನು ಮುಚ್ಚುವ ತೀರ್ಮಾನ ಹೊರಬಿದ್ದ ಬೆನ್ನಲ್ಲೆ ತೀವ್ರ ಪ್ರತಿಭಟನೆಗಳು ನಡೆದಿದ್ದವು, ರಾಜ್ಯದಲ್ಲೆಡೆ ಸೇವ್​ ವಿಐಎಸ್​ಎಲ್​ ಎಂಬ ಅಭಿಯಾನವೇ ಆರಂಭವಾಗಿತ್ತು. ಈ ಮಧ್ಯೆ ಸಂಸದರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಒಂದು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಮಾತನಾಡಿದ್ದರು. ಆದರೆ ಇದೀಗ ಮುಚ್ಚುವ ಪ್ರಕ್ರಿಯೆಗಳು ನಿರಾಂತಕವಾಗಿ ಸಾಗುತ್ತಿರುವುದು ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. 


ಭದ್ರಾವತಿಯಲ್ಲಿಂದು ವಿದ್ಯುತ್ ವ್ಯತ್ಯಯ

ಭದ್ರಾವತಿ/ ತಾಲೂಕಿನ ಮೆಸ್ಕಾಂ ಲಕ್ಕವಳ್ಳಿ66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇವತ್ತು ಅಂದರೆ,   ಜೂ.13ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 6 ಗಂಟೆವರೆಗೆ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನೆಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

 

shivamogga news,shivamogga news paper, shivamogga,shivamogga news kannada,shivamogga news paper today,shivamogga smart city news, shivamogga crime story news,namma shivamogga news paper,shivamogga news,shivamogga,shimoga news,shivamogga karnataka,shimoga news kannada,shimoga live news, shimoga local newspaper,shimoga news live,shimoga news today,shimoga one,shimoga airport recruitment,shimoga airport jobs,shivamogga airport jobs,shimoga rowdies,shimoga train timings,tv9 kannada headlines,esi hospital shimoga,jobs in bhadravati city,bangalore to shikaripura,shimoga news today,shimoga kannada news,shimoga bangalore train,bangalore to shimoga train.shimoga local newspaper,shimoga to bangalore train,adike rate today shimoga,shimoga news tv9,shimoga news channel,country club shimoga,shimoga news today,shimoga kannada news,shimoga bangalore train,bangalore to shimoga train...,shimoga local newspaper,shimoga to bangalore train,adike rate today shimoga, shimoga news channel,