ಮನೆ ಮನೆಗೆ ಕುಮಾರಣ್ಣ! ಮತ್ತೊಮ್ಮೆ ಶಾರದಮ್ಮ! ಗ್ರಾಮಾಂತರ ಕ್ಷೇತ್ರದ ಸ್ಲೋಗನ್ ಖದರ್ ಹೆಚ್ಚಿಸಲಿದೆ ಪಂಚರತ್ನ ಯಾತ್ರೆ
Kumaranna's Pancharatna Yatra is coming to give more strength to Sharada Poorya Nayak, who is projected as the winning candidate in Shivamogga Rural constituency.
MALENADUTODAY.COM| SHIVAMOGGA NEWS
ಶಿವಮೊಗ್ಗದಲ್ಲಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ತಾವು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರ ಮುಗಿದ ಅದ್ಯಾಯ. ಅಂತಹ ಯಾವುದೇ ಇರಾದೆಯು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಬಗ್ಗೆ ಮಾಹಿತಿ ನೀಡಿದ ಅವರು, ಫೆಬ್ರವರಿ 22 ಮತ್ತು 23 ರಂದು ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದೆ ಎಂದು ತಿಳಿಸಿದ್ಧಾರೆ.
ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ!
ಎಲ್ಲೆಲ್ಲಿ ಯಾತ್ರೆ?
ಫೆಬ್ರವರಿ 22 ರಂದು ಯಾತ್ರೆ ಅರೆಬಿಳಚಿಯಿಂದ ಕಲ್ಲಿಹಾಳ್, ಎಮ್ಮೆಟಿ, ಹೊಳೆಹೊನ್ನೂರು ಕೈಮರ ವೃತ್ತ, ಆನವೇರಿ, ಮಂಗೋಟೆ, ಹರಮಘಟ್ಟ ನುಗ್ಗೆಮಲ್ಲಾಪುರ, ಚೋರಡಿ, ಹಾರನಹಳ್ಳಿ ತಲುಪಲಿದೆ. ನಂತರ ಮಲವಗೊಪ್ಪ ತಲುಪಲಿದ್ದು ಅಲ್ಲಿ ಮಾಜಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 23 ರಂದು ಸೂಳೆಬೈಲು, ಹಸೂಡಿ, ಕಾಟಿಕೆರೆ ಹೊಳೆಬೆನವಳ್ಳಿ ಯಾತ್ರೆ ಸಾಗಲಿದೆ ಎಂದು ತಿಳಿಸಿದ ಶಾರದಾ ಪೂರ್ಯನಾಯ್ಕ್ ಮನೆ ಮನೆಗೆ ಕುಮಾರಣ್ಣ ಮತ್ತೊಮ್ಮೆ ಶಾರದಮ್ಮ ಎಂಬ ಘೋಷಣೆ ಅಡಿ ಬೂತ್ ಮಟ್ಟದ ಕಾರ್ಯಕರ್ತರು ಕಮಿಟಿಯವರು ಪ್ರಚಾರ ಆರಂಭಿಸಲಿದ್ದಾರೆ ಎಂದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com