ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?
ಇಲ್ಲಿ ಕಡಿಮೆ ರೇಟ್ಗೆ ವಿದೇಶಿ ಅಡಿಕೆಗಳನ್ನು ಕಳ್ಳ ಸಾಗಾಣಿಕೆ ಮಾಡುವುದರಿಂದ ಸ್ಥಳೀಯ ಅಡಿಕೆಗೆ ಬೆಲೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಆರೋಪವಾಗಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸ್ತಾ, ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆಯವರು, ಅಡಿಕೆ ದರ ಕಾರಣಕ್ಕೆ ಕಳ್ಳಸಾಗಾಣಿಕೆಯು ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಕಾಂಗ್ರೆಸ್ ನಾಯಕರು ಸಂಸತ್ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು, ವಿದೇಶಗಳಿಂದ ಮಯನ್ಮಾರ್ ಬಾರ್ಡರ್ನ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದೆ.
ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಆದರೆ ಮಿಜೋರಾಂ ತ್ರಿಪುರಾದ ಅಡಿಕೆ ಅಸ್ಸಾಂನಲ್ಲಿ ಮಾರಲಾಗ್ತಿಲ್ಲ. ಇದು ಸರಿಯಲ್ಲ ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೆ ಮಯನ್ಮಾರ್ನಿಂದ ಕಳ್ಳಸಾಗಾಣಿಕೆ ಮಾಡಲಾಗ್ತಿದೆ ಎಂದು ಹೇಳಲಾದ ಆರು ವಾಹನಗಳಿಗೆ ಪಶ್ಚಿಮ ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ ಬೆಂಕಿ ಹಚ್ಚಲಾಗಿದೆ. ಜಮುವಾಂಗ್ ಮತ್ತು ಜೌಲ್ನುವಾಮ್ ಗ್ರಾಮಗಳ ಬಳಿಯ ರಾಷ್ಟ್ರೀಯ ಹೆದ್ದಾರಿ -108 ರಲ್ಲಿ ಕಳೆದ ಶನಿವಾರ ಈ ಘಟನೆ ಸಂಭವಿಸಿದೆ.
ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive
ಸುಮಾರು 50 ಜನರ ಗುಂಪು ವಾಹನಗಳನ್ನು ತಡೆದು ಸರಕು ಸಾಗಣೆ ವಾಹನಗಳಿಗೆ ಬೆಂಕಿ ಹಚ್ಚಿದೆ. ಇದಕ್ಕೂ ಒಂದು ತಿಂಗಳಿಗೂ ಮೊದಲೇ ಇಲ್ಲಿನ ಬೆಳೆಗಾರರು ಅಡಿಕೆ ಕಳ್ಳಸಾಗಾಣಿಕೆಯನ್ನು ತಡೆಯದಿದ್ದರೇ ಎಚ್ಚರಿಕೆ ಎಂದು ಪ್ರತಿಭಟಿಸಿದ್ದರು. ಅದರ ಬೆನ್ನಲ್ಲೆ ಈ ಘಟನೆ ನಡೆದಿದೆ. ಇಲ್ಲಿ ಕಡಿಮೆ ರೇಟ್ಗೆ ವಿದೇಶಿ ಅಡಿಕೆಗಳನ್ನು ಕಳ್ಳ ಸಾಗಾಣಿಕೆ ಮಾಡುವುದರಿಂದ ಸ್ಥಳೀಯ ಅಡಿಕೆಗೆ ಬೆಲೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಆರೋಪವಾಗಿದೆ.
Six (6) vehicles which includes 3 Pickup, 1 Tata Ace, 1 TATA Yodha and 1 Isuzu SML carrying 122 bags of Burmese areca nuts and 40 bags of poppy seeds were set ablaze near Zamuang's Pitar lui (creek) in Mizoram's Mamit district on Saturday. https://t.co/fF8htPQo2X pic.twitter.com/uzk3duUmXg — Jon Suante (@jon_suante) December 10, 2022
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link