ಗೋವಾ ಪೊಲೀಸರಿಂದ ಶಿವಮೊಗ್ಗದ ಮೂವರ ಬಂಧನ! ಕಾರಣವೇನು? ಉಡುಪಿ ಪೊಲೀಸರಿಗೂ ಬೇಕಾಗಿದ್ದ ಆರೋಪಿ!

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ಮೂವರನ್ನ ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಗೋವಾದಲ್ಲಿ ವಾಸಿಸುತ್ತಿದ್ದ ಮೂವರಿಂದ 23 ದುಬಾರಿ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ಧಾರೆ.

  

ಪಣಜಿ ಪೊಲೀಸರು ಮೊಬೈಲ್​ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಸ್ಯಾಮ್​ಸಾಂಗ್ ಗೆಲಾಕ್ಸಿ ಮೊಬೈಲ್ ಕಳ್ಳತನ ಸಂಬಂಧ ದಾಖಲಾದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗ ಮೂಲದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. 25 ವರ್ಷದ ಡಿಕೆ ಲಕ್ಷ್ಮಣ ಹಾಗೂ 30 ವರ್ಷದ ಸಂದೀಪ್​ ಹಾಗೂ 35 ವರ್ಷದ ಸಂತೋಷ್ ಬಂಧಿತ ಆರೋಪಿಗಳು

ಕಮಲಮ್ಮ ಕೊಲೆ ಪ್ರಕರಣದ ಪ್ರಮುಖ ಅನುಮಾನಸ್ಪದ ಆರೋಪಿ ತಾಯಿ ಆತ್ಮಹತ್ಯೆಗೆ ಯತ್ನ!

ಗೋವಾದ ವಿವಿಧ ನಗರಗಳಲ್ಲಿ ಇವರು ಮೊಬೈಲ್ ಕಳ್ಳತನ ಮಾಡುತ್ತಿದ್ದರು, ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಇವರು,  ಶಿಫ್ಟ್​ನಲ್ಲಿ ಕೆಲಸ ಮುಗಿಸಿ ರೂಮಿಗೆ ಬರುವವರನ್ನು ಹಿಂಬಾಲಿಸುತ್ತಿದ್ದರು. ಷೇರಿಂಗ್ ರೂಮ್​ಗಳಲ್ಲಿ,  ಶಿಫ್ಟ್ ಮುಗಿಸಿ ರೂಮಿಗೆ ಬರುವವರಿಗಾಗಿ ಬಾಗಿಲು ತೆಗೆಯಬೇಕಾಗುತ್ತದೆ ಎಂದು ಡೋರ್​ನ್ನ ಲಾಕ್ ಮಾಡದೇ ಇರುವ ಅಭ್ಯಾಸವಿರುತ್ತದೆ. ಇದನ್ನ  ಬಂಡವಾಳ ಮಾಡಿಕೊಳ್ತಿದ್ದ ಈ ಆರೋಪಿಗಳು, ಅಂತಹ ರೂಮ್​ಗಳಿಗೆ ಹೋಗಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಹಾಗೊಂದು ವೇಳೆ ಯಾರಾದರೂ ವಿಚಾರಿಸಿದರೆ, ತಾವು ಮೂಗರು..ಮಾತು ಬರೋದಿಲ್ಲ ಏನಾದರೂ ಸಹಾಯ ಮಾಡಿ ಎಂದು ನಕಲಿ ವೈದ್ಯರ ಸರ್ಟಿಫಿಕೇಟ್​ಗಳನ್ನ ತೋರಿಸಿ ಬಚಾವ್ ಆಗುತ್ತಿದ್ದರು. 

ಸದ್ಯ ಈ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 23 ದುಬಾರಿ ಮೊಬೈಲ್​ಗಳನ್ನ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಅಂದಾಜು ಏಳು ಲಕ್ಷ ರೂಪಾಯಿ. ಡಿಕೆ ಲಕ್ಷ್ಮಣ್​ ಗ್ಯಾಂಗ್ ಲೀಡರ್ ಆಗಿದ್ದು, ಈತ ಈಗಾಗಲೇ ಒಂದು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಇನ್ನೊಬ್ಬ ಆರೋಪಿ ಸಂದೀಪ್​ ಉಡುಪಿಯ ಮಣಿಪಾಲ್ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ಮತ್ತೊಬ್ಬನ ಬಗ್ಗೆ ತನಿಖೆ ಮುಂದುವರಿದಿದೆ. 


BREAKING NEWS / ಇಂಜಿನಿಯರ್ ಪತ್ನಿಯ ಕೊಲೆ ಕೇಸ್! ಶಿವಮೊಗ್ಗ ಪೊಲೀಸರಿಂದ ಆರು ಮಂದಿ ಅರೆಸ್ಟ್!

ಶಿವಮೊಗ್ಗ ನಗರದಲ್ಲಿ ನಡೆದಿದ್ದ ಕಮಲಮ್ಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. 17-06-23 ರ ಸಂಜೆ ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ರ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇವತ್ತು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾರ್  ಡ್ರೈವರ್ ಹನುಮಂತ ನಾಯ್ಕ್​ ಸೇರಿದಂತೆ, ಆರು ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಆರೋಪಿಗಳ ಪೈಕಿ ಮೂವರು ಅನುಪಿನಕಟ್ಟೆಯವರು, ಇಬ್ಬರು ಗುಂಡಪ್ಪಶೆಡ್ ನವರು ಹಾಗೂ ಓರ್ವ ಹುಣಸೋಡು ಮೂಲದವನು ಎಂಬುದಾಗಿ ತಿಳಿದುಬಂದಿದೆ.

ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ

 

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು