ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/
ಮಾದಕ ಬಲೆಯಲ್ಲಿ ರಾಜ್ಯದ 2500 ಹೆಣ್ಮಕ್ಕಳು , ಕರ್ನಾಟಕದಲ್ಲಿ ದಾಖಲಾದ ಮಿಸ್ಸಿಂಗ್ ಪ್ರಕರಣಗಳಿಗೆ ಮರಜೀವ ಸಾಧ್ಯತೆ , ಬೆಂಗಳೂರು ಕಾಲ್ ಸೆಂಟರ್, ಹೈದ್ರಾಬಾದ್ ಹೋಟೆಲ್, ವಾಟ್ಸ್ಯಾಪ್ನಲ್ಲಿಯೇ ಡೀಲ್, ಡಿಜಿಟಲ್ ಪೇಮೆಂಟ್, ಡ್ರಗ್ಸ್ ಕೊಟ್ಟು ಅಮಾಯಕ ಹುಡುಗಿಯರಿಗೆ ಗಾಳ
ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್ ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ.
ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್
ಅತಿದೊಡ್ಡ ಸೆಕ್ಸ್ ರಾಕೇಟ್ : ಇನ್ನೂ ದೇಶದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣ ಸೆಕ್ಸ್ ರಾಕೇಟ್ ಇರೋದು ಪತ್ತೆಯಾಗಿದ್ದು ಇದೆ ಮೊದಲು. 14 ಸಾವಿರಕ್ಕೂ ಅಧಿಕ ಮಹಿಳೆಯರ ರಕ್ಷಣೆ ಹಲವು ನಾಪತ್ತೆ ಪ್ರಕರಣಗಳನ್ನು ಭೇದಿಸಲು ಸಹಾಯವಾಗುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆಗಳ ವೈಫಲ್ಯವೇ ಇಂತಹದ್ದೊಂದು ಅತಿದೊಡ್ಡ ಮಾಂಸ ದಂಧೆ ನಡೆಯುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಇದನ್ನು ಸಹ ಓದಿ : ಸಿಟಿ ಸೆಂಟರ್ ಮಾಲ್ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್, ವಾಚ್ ಕಿತ್ಕೊಂಡು ಹೋದ
ಹೈಫೈ ಕಾಂಟಾಕ್ಟ್/ ಹೈಟೆಕ್ ನೆಟ್ವರ್ಕ್ : ಈ ದಂಧೆ ಎಷ್ಟು ಹೈಟೆಕ್ ಆಗಿತ್ತು ಎಂದರೆ, ಇಡೀ ಗ್ಯಾಂಗ್ಬೆಂಗಳೂರು ಮತ್ತು ದೆಹಲಿಯ ಕೆಲವು ಕಾಲ್ ಸೆಂಟರ್ಗಳ ಮೂಲಕ ವಹಿವಾಟು ನಡೆಸ್ತಿತ್ತು. ಅಲ್ಲದೆ ಕೇವಲ ವಾಟ್ಸಾಪ್ ಮೂಲಕ ಮಾಂಸದ ವ್ಯಾಪಾರ ಸಕ್ರಿಯವಾಗಿತ್ತು. ಇನ್ನೂ ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂನಂತಹ ಡಿಜಿಟಲ್ ಅಪ್ಲಿಕೇಶನ್ಗಳನ್ನು ಅನೈತಿಕ ಚಟುವಟಿಕೆಗಳ ಪೇಮೆಂಟ್ಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.
ಇದನ್ನು ಸಹ ಓದಿ : ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ
ಕಾಲ್ ಸೆಂಟರ್ ಕಳ್ಳ ವ್ಯವಹಾರ : ಕಾಲ್ಸೆಂಟರ್ ಮೂಲಕ ಗಿರಾಕಿಗಳನ್ನು ತಲುಪಿ, ಅವರಿಗೆ ವಾಟ್ಸ್ಯಾಪ್ಗಳಲ್ಲಿ ಯುವತಿಯರ ಚಿತ್ರಗಳನ್ನು ಕಳುಹಿಸಿ, ನಂತರ ಪೇಮೆಂಟ್ ಆ್ಯಪ್ಗಳ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಆನಂತರ ನಿರ್ದಿಷ್ಟ ಜಾಗದ ವಿಳಾಸಗಳನ್ನು ನೀಡಲಾಗುತ್ತಿತ್ತು. ಇಷ್ಟೊಂದು ವ್ಯವಸ್ಥಿತವಾಗಿ ನಡೆಯುತ್ತಿದ್ದ ದಂಧೆಯನ್ನು ಇದೀಗ ಪೊಲೀಸರ ಭೇದಿಸಿದ್ಧಾರೆ.
ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ
ಕರ್ನಾಟಕದ ಮಿಸ್ಸಿಂಗ್ ಮಹಿಳೆಯರ ರಕ್ಷಣೆ : ಇನ್ನೂ ಈ ಬಗ್ಗೆ ಮಾತನಾಡಿರುವ ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಅವರು , ಸುಮಾರು 14,190 ಸಂತ್ರಸ್ತರನ್ನು ರಕ್ಷಿಸಿದ್ದೇವೆ. ಅವರೆಲ್ಲಾ ತೆಲಂಗಾಣ, ಕರ್ನಾಟಕ, ದೆಹಲಿ, ಮುಂಬೈ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಹೊರತುಪಡಿಸಿ ತವರು ರಾಜ್ಯ ಆಂಧ್ರಪ್ರದೇಶದಿಂದ ಬಂದವರು ಎಂದು ತಿಳಿಸಿದ್ದಾರೆ.
ಇದನ್ನು ಸಹ ಓದಿ : ಉರುಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟ ಚಿರತೆ! ರಕ್ಷಿಸಬೇಕಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಎಡವಿದ್ದೆಲ್ಲಿ
ಮಾದಕ ವಸ್ತುವಿನ ಕರಾಳ ದಂಧೆ : ಇನ್ನೂ ಬಂಧಿತ 17 ಮಂದಿ ಪೈಕಿ ಏಳು ಮಂದಿ ಸಂಘಟಕರಾಗಿದ್ದರೇ, ಉಳಿದ 10 ಮಂದಿ ವಿವಿಧ ಸಿಟಿಗಳಲ್ಲಿ ಬ್ರೋಕರ್ಗಳಾಗಿದ್ದವರು. ಇವರು ಕಾಲ್ಸೆಂಟರ್ ಮೂಲಕ, ಕೆಲಸದ ಆಮೀಷ ನೀಡಿ ಮಹಿಳೆಯರನ್ನ ಕರೆಸಿಕೊಳ್ಳುತ್ತಿದ್ರು. ಆನಂತರ ಅವರಿಗೆ ಮಾದಕ ವಸ್ತು ಕೊಟ್ಟು, ಅವರ ಅಶ್ಲೀಲ ಚಿತ್ರ ತೆಗೆದು ಗ್ರಾಹಕರಿಗೆ ಕಳಿಸ್ತಿದ್ದರು. ಓಯೋ ಹೋಟೆಲ್ ಮೂಲಕ ಗ್ರಾಹಕರನ್ನು ನಿರ್ವಹಿಸುತ್ತಿದ್ರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು, ದೊಡ್ಡ ರಾಕೇಟ್ನ್ನು ಬಯಲು ಮಾಡಿದ್ಧಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link