Bsy yadiyurappa / ಬಿ.ವೈ ವಿಜಯೇಂದ್ರರಿಗಾಗಿ ಹಳೆಯ ಲಕ್ಕಿ ಕಾರನ್ನು ಹೊರತೆಗೆದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ! ಇದರ ವಿಶೇಷ ಏನು ಗೊತ್ತಾ?
Former CM BS Yediyurappa arrives in an old Lucky Ambassador car for BSY yadiyurappa/ B Y Vijayendra! Do you know what's so special about it?
MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ-2023
ಯಡಿಯೂರಪ್ಪರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454, ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು ಯಾಕೆ ಗೊತ್ತಾ? ಅಂಬಾಸಿಡರ್ ಕಾರು ಬಳಸುತ್ತಿದ್ದ ತಂದೆ, ಪುತ್ರನ ರಾಜಕೀಯ ಭವಿಷ್ಯಕ್ಕೆ ಇದೇ ಲಕ್ಕಿ ನಂಬರ್ ಆಯ್ತಾ...ಏನಿದರ ಗುಟ್ಟು ?.\
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಲ್ಲದ ಈ ಚುನಾವಣೆಯನ್ನು ಕಾರ್ಯಕರ್ತರು ಅರಗಿಸಿಕೊಳ್ಳುವುದು ಕಷ್ಟವಾದರೂ, ಬಿ.ಎಸ್.ವೈ ಕ್ಷೇತ್ರವನ್ನು ಪುತ್ರ ಬಿ.ವೈ ವಿಜಯೇಂದ್ರಗೆ ಧಾರೆ ಎರೆದಿದ್ದಾರೆ.
ತಂದೆ ರಾಜಕೀಯ ರಾಜರಥವನ್ನು ಮುನ್ನಡೆಸಲು ಬಿ.,ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿ.ವೈ ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಸುವ ಮುನ್ನ ತೋಟದ ಮನೆಯಲ್ಲಿ ಕುಟುಂಬ ಪರಿವಾರ ಅವರಿಗೆ ಆರತಿ ಎತ್ತಿ ಶುಭ ಹಾರೈಸಿತು. ಕುಟುಂಬದ ಸದಸ್ಯರು ನಾಮಪತ್ರ ಸಲ್ಲಿಸಲು ಹೊರಡುವಾಗ ದುಬಾರಿ ಕಾರಿನಲ್ಲೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಬಿಜೆಪಿ ಪಕ್ಷ ಕಟ್ಟಿದ ಕಾರು
ಆದರೆ ಮನೆಯ ಮುಂದಿನ ವರಾಂಡದಲ್ಲಿ ಬಿಳಿ ಬಣ್ಣದ ಅಂಬಾಸಿಡರ್ ಕಾರು ಎಲ್ಲರನ್ನು ಬರಮಾಡಿಕೊಳ್ಳಲು ಕಾದಿತ್ತು. ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗು ಅವರ ಪತ್ನಿ 30 ವರ್ಷ ಹಳೆಯ ಅಂಬಾಡಿಸರ್ ಕಾರಿನಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದರು. ಅಂಬಾಸಿಡರ್ ಕಾರು ಯಡಿಯೂರಪ್ಪರಿಗೆ ರಾಜಕೀಯ ಬದುಕಿಗೆ ಹೊಸ ಮುನ್ನುಡಿ ಬರೆದಿದೆ.
ಚುನಾವಣೆಯಲ್ಲಿ ಗೆಲವನ್ನು ತಂದುಕೊಟ್ಟ ಕಾರು. ಆ ಕಾರಿನ ನಂಬರ್ ಸಿಕೆಆರ್ 454 ಇದು ಯಡಿಯೂರಪ್ಪನವರಿಗೆ ಲಕ್ಕಿ ನಂಬರ್. ಯಡಿಯೂರಪ್ಪನವರು ರಾಜ್ಯಧ್ಯಕ್ಷರಾದ ನಂತರ ಈ ಕಾರನ್ನು ಖರೀದಿಸಿದರು. ಅಲ್ಲದೆ ಇದೇ ಕಾರಿನಲ್ಲಿ ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ಕಟ್ಟಲೂ ಊರೂರು ಸುತ್ತಿದ್ದರು.
ತಂದೆ ಅನುಸರಿಸುತ್ತಿದ್ದ ಸಂಪ್ರದಾಯ
ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮನೆಯಿಂದ ಹೊರಡುವಾಗ ಇದೇ ಅಂಬಾಸಿಡರ್ ಕಾರಿನಲ್ಲಿ ಬಿಪಾರಂ ನೊಂದಿಗೆ ಚುನಾವಣಾ ಕಛೇರಿಗೆ ಬರುತ್ತಿದ್ದರು. ಇದೇ ಸಂಪ್ರದಾಯವನ್ನು ಪುತ್ರ ಬಿ.ವೈ ವಿಜಯೇಂದ್ರರವರ ನಾಮಪತ್ರ ಸಲ್ಲಿಕೆಯ ವೇಳೆಯಲ್ಲಿಯು ಬಿಎಸ್ ಯಡಿಯೂರಪ್ಪ ಮುಂದುವರಿಸಿದ್ದಾರೆ.
ತಂದೆಯಂತೆ ನಾನು ಕೂಡ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬ ಮಹದಾಸೆ ವಿಜಯೇಂದ್ರರಿಗೆ ಇದಕ್ಕೆ ಪೂಕರವಾಗಿ ಬಿಎಸ್ ಯಡಿಯೂರಪ್ಪ ತಮ್ಮ ಅದೃಷ್ಟದ ಅಂಬಾಡಿಸಿಡರ್ ಕಾರನ್ನು ಬಳಸಿ, ಪುತ್ರನ ವಿಜಯಕ್ಕೆ ಆಶೀರ್ವಾದ ಮಾಡಿದ್ದಾರೆ.
ಇದನ್ನು ಸಹ ಓದಿ
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #Kannada_News, #karnatakaassemblyelection2023, #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,