ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?
family members spoke about the murder of Pratima in Bangalore ಬೆಂಗಳೂರಲ್ಲಿ ನಡೆದ ಪ್ರತಿಮಾ ಎಂಬವರ ಹತ್ಯೆ ಸಂಬಂಧ ಅವರ ಕುಟುಂಬಸ್ಥರು ಮಾತನಾಡಿದ್ಧಾರೆ
KARNATAKA NEWS/ ONLINE / Malenadu today/ Nov 4, 2023 SHIVAMOGGA NEWS
SHIVAMOGGA | ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿಯ ಕೊಲೆ ಘಟನೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಮೂಲತಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂ ಕುಂಡ್ಲೂರು ನಿವಾಸಿಯಾದ ಅವರು ತುಂಗಾ ಕಾಲೇಜಿನಲ್ಲಿ ಅದ್ಯಯನ ಮಾಡಿದ್ರು.
ಆನಂತರ ಕುವೆಂಪು ವಿವಿಯಲ್ಲಿ ಅಧ್ಯಯನ ಮುಗಿಸಿ ಭೂವಿಜ್ಞಾನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇಡೀ ಇಲಾಖೆಯಲ್ಲಿ ಉತ್ತಮ ಹೆಸರನ್ನ ಗಳಿಸಿದ್ದ ಪ್ರತಿಮಾ ಖಡಕ್ ಅಧಿಕಾರಿಯು ಸಹ ಆಗಿದ್ದರು. ಈ ಬಗ್ಗೆ ಅವರ ಇಲಾಖೆಯ ಸಹದ್ಯೋಗಿಗಳು ಸಹ ನೆನಪು ಮಾಡಿಕೊಳ್ಳುತ್ತಾರೆ.
ಉತ್ತಮ ಅಧಿಕಾರಿ ಎನಿಸಿದ್ದ ಪ್ರತಿಮಾರವರ ಕೌಟುಂಬಿಕ ಜೀವನದಲ್ಲಿ ಒಡಕು ಮೂಡಿತ್ತಾದರೂ, ಆ ವಿಚಾರವೂ ವೈಯಕ್ತಿಕ ನೆಲೆಗಟ್ಟಿಗೆ ಸೀಮಿತವಾಗಿತ್ತು. ಇನ್ನೂ ಸದ್ಯ ಪ್ರತಿಮಾರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಮಾರವರ ಅತ್ತೆ ಪ್ರೇಮಾರವರು ಮಾದ್ಯಮವೊಂದರ ಬಳಿ ಮಾತನಾಡಿದ್ದಾರೆ.
ಈ ವೇಳೆ ನಿನ್ನೆಯಷ್ಟೆ ಪ್ರತಿಮಾ ಕರೆ ಮಾಡಿದ್ದರು. ಇತ್ತೀಚೆಗೆ ಮನೆಯ ಗೃಹಪ್ರವೇಶ ಮಾಡಿ ಅವರು ಬೆಂಗಳೂರಿಗೆ ತೆರಳಿದ್ದರು. ಮೂರು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಆಕೆಗೆ ಯಾವುದೇ ಬೆದರಿಕೆ ಇರಲಿಲ್ಲ ಎಂದಿದ್ದಾರೆ