ವೋಟು ಹಾಕಲು ಭದ್ರಾವತಿಗೆ ಹೋಗುತ್ತಿದ್ದಾಗ ನಡೆಯಿತು ದುರಂತ | ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು

biker died in a bus collision while going from Shikaripur to Bhadravati. Voting, Shimoga Election News, Shikaripura, Churchigundi, Hittala, Bhadravati,

ವೋಟು ಹಾಕಲು ಭದ್ರಾವತಿಗೆ ಹೋಗುತ್ತಿದ್ದಾಗ ನಡೆಯಿತು ದುರಂತ | ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು
Shikaripur to Bhadravati. Voting, Shimoga Election News, Shikaripura, Churchigundi, Hittala, Bhadravati,

SHIVAMOGGA | MALENADUTODAY NEWS | May 7, 2024  

ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿರುವುದರ ನಡುವೆ ದುರಂತವೊಂದು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮತದಾನ ಮಾಡಲೆಂದು ಬೈಕ್‌ ನಲ್ಲಿ ಭದ್ರಾವತಿಗೆ ಹೊರಟಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

 

ಶಿಕಾರಿಪುರದ ಹಿತ್ತಲ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು 32 ವರ್ಷದ ಮಂಜುನಾಥ್‌ ಎಂದು ಗುರುತಿಸಲಾಗಿದೆ. ಇವರು ತಮ್ಮ ಸಹೋದರಿಯ ಊರು ಚುರ್ಚಿಗುಂಡಿಯಲ್ಲಿದ್ದರು. ಅಲ್ಲಿಂದ ತಮ್ಮ ವೋಟು ಇರುವ ಭದ್ರಾವತಿಯಲ್ಲಿ ವೋಟು ಮಾಡಲೆಂದು ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಹಿತ್ತಲ ಬಳಿಯಲ್ಲಿ ಖಾಸಗಿ ಬಸ್‌ ಹಾಗೂ ಇವರ ಬೈಕ್‌ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೆ ಮಂಜುನಾಥ್‌ ಸಾವನ್ನಪ್ಪಿದ್ದಾರೆ.