ಟೆಂಪೋಸ್ಟ್ಯಾಂಡ್‌ ಬಳಿ ಬಸ್‌ಗೆ ಬೈಕ್‌ ಡಿಕ್ಕಿ | ಆನಂತರ ನಡೆದಿದ್ದು ಶಾಕಿಂಗ್‌ ಘಟನೆ | 30 ಜನರ ವಿರುದ್ಧ ಕೇಸ್

Bike collides with bus near tempostand |Case registered against 30 people at Doddapet police station

ಟೆಂಪೋಸ್ಟ್ಯಾಂಡ್‌ ಬಳಿ ಬಸ್‌ಗೆ ಬೈಕ್‌ ಡಿಕ್ಕಿ | ಆನಂತರ ನಡೆದಿದ್ದು ಶಾಕಿಂಗ್‌ ಘಟನೆ |  30 ಜನರ ವಿರುದ್ಧ ಕೇಸ್
Doddapete police station

Shivamogga  Apr 7, 2024  Doddapete police station ಶಿವಮೊಗ್ಗದಲ್ಲಿ ನಡೆದ ಒಂದು ಅಪಘಾತ ಪ್ರಕರಣ ಸಂಬಂಧ ಜಮಾಯಿಸಿದ ಗುಂಪೊಂದು ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌ನ್ನ ಹೊಡೆದು ಕೊಲೆ ಮಾಡುವ ಮಟ್ಟಕ್ಕೆ ಹೋಗಿದ್ಯಾ? ಹೀಗೊಂದು ಕೇಸ್‌ ಶಿವಮೊಗ್ಗದಲ್ಲಿ ನಡೆದಿದೆ. ತತ್ಸಂಬಂಧ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ನಲ್ಲಿ  : IPC 1860 (U/s-143,147,363,353,332,323,504,506,307,149 ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಮೂವತ್ತು ಮಂದಿಯನ್ನ ಆರೋಪಿಯನ್ನಾಗಿಸಿ ಕೇಸ್‌ ದಾಖಲಿಸಲಾಗಿದೆ. ಟೆಂಪೋ ಸ್ಟ್ಯಾಂಡ್‌ ಬಳಿ ಸಂಭವಿಸಿದ ಅಪಘಾತ ಸಂಬಂಧ ಡ್ರೈವರನ್ನ ಕಿಡ್ನ್ಯಾಪ್‌  ಮಾಡಿದಷ್ಟೆ ಅಲ್ಲದೆ ಅಪರಿಚಿತ ಸ್ಥಳದಲ್ಲಿ ಕರೆದೊಯ್ದು ಹಲ್ಲೆ ಮಾಡಿದ ಆರೋಪ ಹೊರಿಸಲಾಗಿದೆ. ಮೇಲಾಗಿ ಮೆಗ್ಗಾನ್‌ ಆಸ್ಪತ್ರೆಯ ಗೇಟ್‌ ಬಳಿ ಡ್ರೈವರ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರ ಬಗ್ಗೆ ಸ್ವತಃ ಗಾಯಾಳು ಪೊಲೀಸರಿಗೆ ಸ್ಟೇಟ್‌ ಮೆಂಟ್‌ ನೀಡಿದ್ದಾರೆ 

ಪ್ರಕರಣವೇನು?| ಮೊನ್ನೆ ತಡರಾತ್ರಿ 2.40 ಧರ್ಮಸ್ಥಳ-ಸಂಡೂರು ವಯಾ ಶಿವಮೊಗ್ಗ ರೂಟ್‌ನ ಬಸ್‌  ಶಿವಮೊಗ್ಗದ ಟೆಂಪೋ ಸ್ಟ್ಯಾಂಡ್‌ ಬಳಿ ಬರುತಿತ್ತು. ಈ ವೇಳೆ ಜೆಸಿ ನಗರ ಕ್ರಾಸ್‌ನಿಂದ ಬೈಕ್‌ ತಿರುಗಿಸಿಕೊಂಡು ಮೇನ್‌ ರೋಡ್‌ಗೆ ಬಂದ ಇಬ್ಬರು ಬಸ್‌ಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ

ಈ ವೇಳೆ ಬಸ್‌ನಿಂದ ಕೆಳಕ್ಕೆ ಇಳಿದ ಡ್ರೈವರ್‌ ಕೆಎಸ್‌ಆರ್‌ಟಿಸಿ ಡಿಪೋಗೆ ಮಾಹಿತಿ ನೀಡಲು ಅಲ್ಲಿಂದ ಮುಂದಕ್ಕೆ ಹೋಗಿದ್ಧಾರೆ. ಆಗ ಸ್ಕೂಟಿಯಲ್ಲಿ ಬಂದ ಆರೋಪಿಗಳು ಯೂನಿಫಾರ್ಮ್‌ನಲ್ಲಿದ್ದ ಡ್ರೈವರ್‌ನ್ನ  ಕೂರಿಸಿಕೊಂಡು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ಧಾರೆ. ಅಲ್ಲದೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಭಯದಿಂದ ಡ್ರೈವರ್‌ ನಾನಲ್ಲ ಎಂದು ಹೇಳಿದಾಗ, ಆರೋಪಿಗಳು ಆತನನ್ನು ಮೆಗ್ಗಾನ್‌ ಆಸ್ಪತ್ರೆ ಗೇಟ್‌ ಬಳಿ ಕರೆತಂದಿದ್ದಾರೆ. ಅಷ್ಟರಲ್ಲಿ ಆಗಿದ್ದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಮಾಹಿತಿ ಹೊರಬಿದ್ದಿತ್ತು. 

ಅಲ್ಲಿದ್ದ ಗುಂಪು ಡ್ರೈವರ್‌ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದೆ. ಮೆಗ್ಗಾನ್‌ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ಗಳು ಡ್ರೈವರ್‌ನ್ನ ಗುಂಪಿನಿಂದ ಬಿಡಿಸಿ ಅಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಪೆಟ್ಟಿನಿಂದ ನರಳುತ್ತಿದ್ದ ಕೊಪ್ಪಳ ಮೂಲದ ಡ್ರೈವರ್‌ ನಿಂದ ಹೇಳಿಕೆ ಪಡೆದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.