ಉಡುಪಿ, ತೀರ್ಥಹಳ್ಳಿ, ಶಿವಮೊಗ್ಗದ ಕೇಸ್​ ಕ್ಲೀಯರ್! ಸಿಕ್ಕಿಬಿದ್ರು ಹಾವೇರಿ ಡಿಕ್ಕಿ ರೈಡರ್ಸ್​!

Accused wanted by Udupi, Shimoga, Tirthahalli police arrested in Shimoga Vinoba Nagar police operation ಶಿವಮೊಗ್ಗ ವಿನೋಬ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಉಡುಪಿ, ಶಿವಮೊಗ್ಗ , ತೀರ್ಥಹಳ್ಳಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳನ್ನ ಬಂಧಿಸಲಾಗಿದೆ

ಉಡುಪಿ, ತೀರ್ಥಹಳ್ಳಿ, ಶಿವಮೊಗ್ಗದ ಕೇಸ್​ ಕ್ಲೀಯರ್! ಸಿಕ್ಕಿಬಿದ್ರು ಹಾವೇರಿ ಡಿಕ್ಕಿ ರೈಡರ್ಸ್​!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

 

VINOBHA NAGARA POLICE STATION | ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕಳೆದ 11 ರಂದು ಸರಗಳ್ಳತನ ಪ್ರಕರಣವೊಂದು ನಡೆದಿತ್ತು.  ವಿನೋಬನಗರ 100 ಅಡಿ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ವಿನೋಬನಗರದ ವಾಸಿ 55 ವರ್ಷದ ಮಹಿಳೆಯೊಬ್ಬರು ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ಅವರ ಬೈಕ್ ಗೆ ಡಿಕ್ಕಿ ಹೊಡೆದಿದ್ದರು.  ಬಳಿಕ ಬೈಕ್​ನಲ್ಲಿದ್ದವರು ಕೆಳಕ್ಕೆ ಬಿದ್ದಾಗ, ಅವರ ಕತ್ತಲ್ಲಿದ್ದ  ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ  ವಿನೋಬನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 392 ಅಡಿಯಲ್ಲಿ ಕೇಸ್ ದಾಖಲಾಗಿತ್ತು

 

READ | ವಿನೋಬನಗರ ಪೊಲೀಸ್ ಸ್ಟೇಷನ್​ | ಬೈಕ್​ನಲ್ಲಿ ಪತಿ ಜೊತೆ ಹೋಗುತ್ತಿದ್ದ ಶಿಕ್ಷಕಿಗೆ ಶಾಕ್ | ನಡೀತು ಹೊಸಥರ ಘಟನೆ

 

ಸದ್ಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಶ್ರೀಮತಿ ಚಂದ್ರಕಲಾ ಹೆಚ್ ಹೊಸಮನಿ ಪಿ.ಐ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸುನಿಲ್ ಬಿ.ಸಿ ಪಿ.ಎಸ್.ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ   ರಾಜು ಕೆ ಆರ್, ಚಂದ್ರಾನಾಯ್ಕ್ ಬಿ, ಮಲ್ಲಪ್ಪ ಎಸ್ ಜಿ ಮತ್ತು ಅರುಣಕುಮಾರ್ ಎನ್ ಕೆ ರವರುಗಳನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದೆ. 

 

ಹಾವೇರಿ ಮೂಲದ ಆರೋಪಿಗಳು

 

1) ಆಕಾಶ್, 21 ವರ್ಷ,  ಸರ್ವಜ್ಞ ನಗರ ಮಾಸೂರು ರಟ್ಟೆಹಳ್ಳಿ ತಾಲ್ಲೂಕ್ ಹಾವೇರಿ ಜಿಲ್ಲೆ 

 2) ಪ್ರವೀಣ್ ಹಡಗಲಿ, 28 ವರ್ಷ, ಸಿದ್ದೇಶ್ವರ ನಗರ ರಾಣೆಬೆನ್ನೂರು ಟೌನ್  



ಇನ್ನೂ ಆರೋಪಿತರಿಂದ ವಿನೋಬನಗರ ಪೊಲೀಸ್ ಠಾಣೆಯ 2 ಸರಗಳ್ಳತನ ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯ 01 ಸರಗಳ್ಳತನ ಪ್ರಕರಣ, ತೀರ್ಥಹಳ್ಳಿ ಪೊಲೀಸ್ ಠಾಣೆಯ  01 ಸರಗಳ್ಳತನ ಪ್ರಕರಣ ಮತ್ತು ಉಡುಪಿ ಟೌನ್ ಪೊಲೀಸ್ ಠಾಣೆಯ  02 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 06 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 9,48,600/- ರೂ ಗಳ ಒಟ್ಟು 186 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು ಮೌಲ್ಯ 1,00,000/- ರೂಗಳ 2 ದ್ವಿಚಕ್ರ ವಾಹನಗಳು ಸೇರಿ ಒಟ್ಟು 10,48,600/- ರೂ ಮೌಲ್ಯ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.