800 ವರ್ಷಗಳ ಹಿಂದಿನ ದೇಗುಲದ ಆವರಣದಲ್ಲಿ ನಿಧಿಗಾಗಿ ಹುಡುಕಾಟ
ಘಟನೆ ಸಂಬಂಧ ಹೊಸನಗರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ
ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ ಅಗೆಯಲಾಗಿದೆ.
ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.
800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ
ಘಟನೆ ಸಂಬಂಧ ಹೊಸನಗರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ