ಹೊಸನಗರ ಪೊಲೀಸರಿಂದ 09 ಜನ ಆರೋಪಿಗಳ ಬಂಧನ ! ಕಾರಣವೇನು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

 

HOSANAGARA |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೊಸನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ಪೊಲೀಸರು ರೇಡ್ ನಡೆಸಿದ್ದಾರೆ. 

ನಿನ್ನೆ ರಾತ್ರಿ ಹೆಬೈಲ್ ಗ್ರಾಮದಲ್ಲಿ ಕೆಲವು ಜನರು ಸೇರಿಕೊಂಡು, ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ. 

ಈ ಹಿನ್ನೆಲೆಯಲ್ಲಿ ಗುರಣ್ಣ ಹೆಬ್ಬಾರ್  ಸಿಪಿಐ ಹೊಸನಗರ ವೃತ್ತ  ರವರ ಮೇಲ್ವಿಚಾರಣೆಯಲ್ಲಿ ಶಿವಾನಂದ ವೈ. ಕೆ ಪಿಎಸ್ಐ ಹೊಸನಗರ ಪೊಲೀಸ್ ಠಾಣೆ ಮತ್ತು ಪೊಲೀಸ್ ಠಾಣಾ ಸಿಬ್ಬಂಧಿಗಳ ತಂಡ ರೇಡ್ ನಡೆಸಿದೆ. 

ಸ್ಥಳಕ್ಕೆ ಹೋಗಿ  ದಾಳಿ ನಡೆಸಿದ ಪೊಲೀಶರು ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ 09 ಜನ ಆರೋಪಿತರನ್ನು ದಸ್ತಗಿರಿ ಮಾಡಿದೆ. ಅಲ್ಲದೆ  ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 80,500/- ನಗದು ಹಣ ಮತ್ತು ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದೆ. 


Share This Article