ಕೆರೆ ಏರಿ ಮೇಲೆ ಬರುತ್ತಿದ್ದಂತೆ ಬಸ್ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕಾದಿತ್ತು ಶಾಕ್!
The bus lost control and fell into a lake near Kuppagadde in Soraba taluk
Shivamogga Apr 8, 2024 Kuppagadde in Soraba taluk, bus lost control and fell ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಖಾಸಗಿ ಬಸ್ವೊಂದು ಕೆರೆಗೆ ಇಳಿದ ಘಟನೆಯೊಂದು ನಡೆದಿದೆ. ಇಲ್ಲಿನ ಕುಪ್ಪಗಡ್ಡೆ ಸಮೀಪ ಈ ಘಟನೆ ಸಂಭವಿಸಿದೆ. ಕೊರಕೋಡು ಕ್ರಾಸ್ ಬಳಿಯಲ್ಲಿ ಬರುತ್ತಿದ್ದ ಬಸ್ ಇದ್ದಕ್ಕಿದ್ದ ಹಾಗೆ ಕೆರೆಗೆ ಇಳಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಬಸ್ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗಿದ್ದು, ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ದಾವಿಸಿ ಪ್ರಯಾಣಿಕರಿಗೆ ನೆರವು ನೀಡಿದ್ರು.
ಆನವಟ್ಟಿಯಿಂದ ಸೊರಬಕ್ಕೆ ಪೂರ್ಣಚಂದ್ರ ಹೆಸರಿನ ಖಾಸಗಿ ಬಸ್ ಸಂಚಾರ ಮಾಡುತ್ತಿತ್ತು. ಕೆರೆ ಏರಿ ಮೇಲೆ ಬರುತ್ತಿದ್ದಾಗ ಬಸ್ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ಅಲ್ಲಿಯೇ ಇದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸ್ಪೀಡ್ ಕಡಿಮೆಯಾಗಿ ಬಸ್ ಪಲ್ಟಿಯಾಗುವುದು ತಪ್ಪಿದೆ. ಇನ್ನೂ ಕೆರೆಯ ತಡೆಗಲ್ಲಿಗೆ ಬಸ್ ಚಕ್ರ ಸಿಲುಕಿದ್ದರಿಂದ ಆಗಬಹುದಾದ ಅಪಾಯ ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಕ್ಕೆ ಹೇಳಿದ್ದಾರೆ.