ಶ್ರೀರಾಮುಲು ಕನಸು ಶಿವಮೊಗ್ಗದಲ್ಲಿ ನನಸ್ಸಾಯ್ತು! ಬಳ್ಳಾರಿಗೆ ಹೊರಟ 23 ಅಡಿ ಎತ್ತರದ ಪುನೀತ್ ಪ್ರತಿಮೆಯ ವಿಶೇಷತೆ ಗೊತ್ತಾ

Sriramulu's dream came true in Shimoga! Puneeth's 23-feet tall statue in Bellary

ಅಪ್ಪುರವರು ಅಗಲಿದ್ದರೂ ಅವರ ಮೇಲಿನ ಅಭಿಮಾನವೂ ದಿನಕ್ಕೊಂದು ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ  ನಿದಿಗೆಯಲ್ಲಿ ಯುವರತ್ನ ಪುನೀತ್ ರಾಜಕುಮಾರ್  (Puneeth Rajkumar‌) ಪ್ರತಿಮೆಯೊಂದು ನಿರ್ಮಾಣವಾಗ್ತಿದೆ.  23 ಅಡಿ ಎತ್ತರ, 3 ಟನ್ ತೂಕದ ಪುನೀತ್ ರಾಜಕುಮಾರರ ಪ್ರತಿಮೆಯನ್ನು  ಜೀವನ್ ಶಿಲ್ಪಿ ಮತ್ತು ತಂಡದವರು ನಿರ್ಮಿಸಿದ್ದಾರೆ.  

ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ  21ರಂದು ನಡೆಯುವ ಬಳ್ಳಾರಿ ಉತ್ಸವದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. 16 ಜನರ ತಂಡ  3 ತಿಂಗಳುಗಳ ಕಾಲ ಶ್ರಮವಹಿಸಿ ಈ  ಪ್ರತಿಮೆ  ನಿರ್ಮಿಸಲಾಗಿದೆ.  ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಬಂದಿದೆ . ಬೃಹತ್ ಕ್ರೇನ್‌ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನ ಇರಿಸಿ ಬಳ್ಳಾರಿಗೆ ತಗೆದುಕೊಂಡು ಹೋಗಲಾಗುತ್ತಿದೆ..3 ಸಾವಿರ ಕೆ.ಜಿ. ತೂಕದ ಈ ಪ್ರತಿಮೆಗೆ ಕಬ್ಬಿಣವೇ 1 ಸಾವಿರ ಕೆ.ಜಿ. ಇದೆ.  ಈಗಾಗಲೇ ನಿರ್ಮಾಣಗೊಂಡಿರುವ ಅಪ್ಪು ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆಯೊಂದನ್ನು ನಿರ್ಮಿಸಬೇಕೆಂಬುದು ಸಚಿವ ಶ್ರೀರಾಮುಲು ಅವರ ಅಪೇಕ್ಷೆಯಾಗಿತ್ತಂತೆ. ಸದ್ಯ ಶಿವಮೊಗ್ಗದಿಂದ ಈ ಪ್ರತಿಮೆ ಬಳ್ಳಾರಿಗೆ ತೆರಳುತ್ತಿದೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಇನ್ನೂ ಬಳ್ಳಾರಿಯಲ್ಲಿ ಈ ಪ್ರತಿಮೆ ಅನಾವರಣಗೊಳ್ಳಲಿದ್ದು. ಪ್ರತಿಮೆ ಉದ್ಘಾಟನೆ ದೊಡ್ಮನೆಯ ಕುಟುಂಬಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಯಲ್ಲಿ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಆವರಣದ ಬಳಿ ಇರುವ ಕೆರೆ ಹಾಗು ಪಾರ್ಕ್​ ಅಪ್ಪುರವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com