ಒಂದೇ ದಿನ ಸಾಗರ ಪೇಟೆಯಲ್ಲಿ ನಡೆದಿತ್ತು ಈ ಘಟನೆ! ಸಾಗರ ಟೌನ್‌ ಪೊಲೀಸ್‌ ಸ್ಟೇಷನ್‌ ಕೇಸ್‌!

This incident took place in Sagar Pete on a single day! Sagar Town Police Station Case!

ಒಂದೇ ದಿನ ಸಾಗರ ಪೇಟೆಯಲ್ಲಿ ನಡೆದಿತ್ತು ಈ ಘಟನೆ! ಸಾಗರ ಟೌನ್‌ ಪೊಲೀಸ್‌ ಸ್ಟೇಷನ್‌ ಕೇಸ್‌!
Sagar Town Police Station Case

Shivamogga  Apr 3, 2024   Sagar Town Police Station Case ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪಟ್ಟಣದ ಚಿಲ್ಲರೆ ಮಳಿಗೆಯಿಂದ 81 ಸಾವಿರರೂ. ಮೌಲ್ಯದ ವಿವಿಧ ಮಾದರಿಯ ಅಡಕೆ, ಕಾಳು ಮೆಣಸು ಮತ್ತು ಗೇರುಬೀಜಗಳನ್ನು ಕಳ್ಳತನ ಮಾಡಿದ್ದ ಪ್ರಕರಣವೊಂದನ್ನ ಅಲ್ಲಿನ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಆರೋಪಿಯನ್ನ ಮಾಲು ಸಮೇತ ಬಂಧಿಸಿದ್ದಾರೆ. 

ಏನಿದು ಪ್ರಕರಣ  

ಕಳೆದ ಫೆಬ್ರವರಿಯಲ್ಲಿ ಇಲ್ಲಿನ ಸೈಯದ್ ಷಫಾಜ್‌ರವರ ಅರೆಕಾನೆಟ್ ಎನ್ನುವ ಚಿಲ್ಲರೆ ಮಳಿಗೆಯಲ್ಲಿ ವಿವಿಧ ರೀತಿಯ ಅಡಕೆ,ಕಾಳು ಮೆಣಸು, ಗೇರು ಬೀಜಗಳ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು.

ಇನ್ನೊಂದೆಡೆ ಕಳೆದ ಮಾರ್ಚ್‌ 25ರಂದು ರಾಘವೇಂದ್ರ ಎನ್ನುವವರು ತಮ್ಮ ಹೆಸರಿನಲ್ಲಿದ್ದ ಒಮಿನಿ ವಾಹನವನ್ನ ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಎರಡು ಪ್ರಕರಣದಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಎರಡು ಕೃತ್ಯಗಳನ್ನು ಒಂದೇ ತಂಡ ಎಸೆಗಿರುವ ಅನುಮಾನ ಮೂಡಿದೆ. 

ತನಿಖೆ ಚುರುಕುಗೊಳಿಸಿದ ಪೊಲೀಸರು ಪಟ್ಟಣದ ಶಿವಪ್ಪ ನಾಯಕ ನಗರ ನಿವಾಸಿ ಮಹಮದ್‌ಜಾಕೀರ್‌ನನ್ನು ಬಂಧಿಸಿ 81 ಸಾವಿರಕ್ಕೂ ಹೆಚ್ಚು ಮೌಲ್ಯದ ವಿವಿಧ ಮಾದರಿಯ ಅಡಕೆ, ಕಾಳುಮೆಣಸು, ಗೇರು ಬೀಜಗಳು ಹಾಗೂ ಕೃತ್ಯಕ್ಕೆ

ಬಳಸಿದ ಕಳ್ಳತನವಾದ 2 ಲಕ್ಷ ಬೆಲೆಯ ಓಮಿನಿ ಕಾರನ್ನ ವಶಕ್ಕೆ ಪಡೆದಿದ್ದಾರೆ.  

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ