ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು

ಬೈಕ್​ನಲ್ಲಿ ತಿಮ್ಮಪ್ಪ ಹಾಗೂ ಮಂಜಪ್ಪ ಬೆಳ್ಳೋಡಿ ಎಂಬವರು ಬರುತ್ತಿದ್ದರು. ಈ ವೇಳೆ ತಿರುವಿನಲ್ಲಿ ಬೈಕ್​ ಮತ್ತು ಲಗೇಜ್​ ಆಟೋ ನಡುವೆ ಡಿಕ್ಕಿಯಾಗಿದೆ ,

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ಸಿಗುವ ಈರಗಲ್ಲು ಎಂಬುವಲ್ಲಿ ಇವತ್ತು ಆಕ್ಸಿಡೆಂಟ್ ಆಗಿದೆ. ಇಲ್ಲಿನ ಕ್ರಾಸ್​ನಲ್ಲಿ ಬೈಕ್ ಹಾಗೂ ಲಗೇಜ್ ಆಟೋ ನಡುವೆ ಡಿಕ್ಕಿಯಾಗಿ, ಅಪಘಾತವಾಗಿದೆ. ಗಟನೆಯಲ್ಲಿ ಬೈಕ್​ ಸವಾರ 52 ವರ್ಷ ತಿಮ್ಮಪ್ಪ ಎಂಬವರು ಸಾವನ್ನಪ್ಪಿದ್ದಾರೆ. 

ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು...ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ಬೈಕ್​ನಲ್ಲಿ ತಿಮ್ಮಪ್ಪ ಹಾಗೂ ಮಂಜಪ್ಪ ಬೆಳ್ಳೋಡಿ ಎಂಬವರು ಬರುತ್ತಿದ್ದರು. ಈ ವೇಳೆ ತಿರುವಿನಲ್ಲಿ ಬೈಕ್​ ಮತ್ತು ಲಗೇಜ್​ ಆಟೋ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ತಿಮ್ಮಪ್ಪರವರನ್ನ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅವರು ಅಸು ನೀಗಿದ್ದಾರೆ. ಇನ್ನೂ ಹಿಂಬದಿ ಕುಳಿತಿದ್ದ ಮಂಜಪ್ಪರವರಿಗೂ ಘಟನೆಯಲ್ಲಿ ತೀವ್ರ ಗಾಯಗಳಾಗಿದೆ. ಸ್ಥಳಕ್ಕೆ ಕಾರ್ಗಲ್​ ಪೊಲೀಸರು ಬಂದಿದ್ದು ಘಟನೆ ಸಂಬಂಧ ಪರಿಶೀಲನೆ ನಡೆಸ್ತಿದ್ದಾರೆ.  

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link