shivamogga news today 11-06-25 ಮಗಳ ಭೇಟಿಯ ಖುಷಿಯಲ್ಲಿದ್ದ ತಾಯಿಗೆ ಮನೆಯಲ್ಲಿ ಪರ್ಸ್ ತೆಗೆದು ನೋಡಿದಾಗ ಕಾದಿತ್ತು ಶಾಕ್

prathapa thirthahalli
Prathapa thirthahalli - content producer

shivamogga news today ಚಿತ್ರದುರ್ಗದ ಮಹಿಳೆಯೊಬ್ಬರ 20 ಗ್ರಾಂ ಚಿನ್ನದ ಸರ ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ಕಳ್ಳತನವಾಗಿದ್ದು, ಈ ಕುರಿತು ಮಹಿಳೆ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

shivamogga news today :ಎಫ್​ಐಆರ್​ನಲ್ಲಿ ಏನಿದೆ.

ಚಿತ್ರದುರ್ಗದ ಪಾರ್ವತಮ್ಮ ಎಂಬುವವರು ತಮ್ಮ ಮಗಳನ್ನು ಶಿವಮೊಗ್ಗದ ವೆಟರ್ನರಿ ಕಾಲೇಜಿನಲ್ಲಿ ಓದಿಸುತ್ತಿದ್ದರು. ಹಾಗಾಗಿ ಪಿಜಿಯಲ್ಲಿ ಇದ್ದ ಪುತ್ರಿಯನ್ನು ನೋಡಿಕೊಂಡು ಬರೋಣವೆಂದು ಪಾರ್ವತಮ್ಮ ತಮ್ಮ ಸೊಸೆಯೊಂದಿಗೆ ಜೂನ್​ 07 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಹಾಗೆಯೇ ಪುತ್ರಿಯನ್ನು ನೋಡಿ ಮಾತನಾಡಿಸಿಕೊಂಡು ನಂತರ ಚಿತ್ರದುರ್ಗಕ್ಕೆ ವಾಪಾಸ್ ​ಹೋಗಲು ಕೆಎಸ್​ಆರ್​​ಟಿಸಿ ಬಸ್​ ನಿಲ್ದಾಣಕ್ಕೆ ಬಂದಿದ್ದಾರೆ. ಆ ವೇಳೆ ಇಬ್ಬರೂ ಸಹ ಶೌಚಾಲಯದ ಹೊರೆಗೆ ತಮ್ಮ ವ್ಯಾನಿಟಿ ಬ್ಯಾಗ್​ನ್ನು ಇಟ್ಟು ಶೌಚಕ್ಕೆ ತೆರಳಿದ್ದಾರೆ. ನಂತರ ಬಸ್​ ಹತ್ತಿ ಊರಿಗೆ ತೆರಳಿದ್ದು,  ರಾತ್ರಿ ಪರ್ಸ್​ ತೆಗೆದು ನೋಡಿದಾಗ ಮಹಿಳೆಗೆ ಶಾಕ್​ ಎದುರಾಗಿದೆ. ಅದೇನೆಂದರೆ ಬ್ಯಾಗ್​ನಲ್ಲಿದ್ದ 70 ಸಾವಿರ ಮೌಲ್ಯದ 20 ಗ್ರಾಂ ಚಿನ್ನದ ಸರ ಹಾಗೂ ಪರ್ಸನ್ನು ಕಳ್ಳರು ಕದ್ದಿದ್ದಾರೆ. ಈ ಕುರಿತು ಪಾರ್ವತಮ್ಮ ಶೌಚಕ್ಕೆ ತೆರಳಿದಾಗಲೇ ಈ ಕಳ್ಳತನ ಆಗಿರಬಹುದೆಂದು ಆರೋಪಿಸಿ ದೂರನ್ನು ದಾಖಲಿಸಿದ್ದಾರೆ.

Share This Article