ಹೊಸ ಪಿಂಚಣಿ ವ್ಯವಸ್ಥೆ ರದ್ದತಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ರೆಡಿ! ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದೇನು? ಇಲ್ಲಿದೆ ವಿವರ

ವೇತನ ಆಯೋಗ ಕೂಡ ರಚನೆಯಾಗಿದೆ. ಬರುವ ಮಾರ್ಚ್​ಅಂತ್ಯಕ್ಕೆ ಆಯೋಗದ ವರದಿ ಸಲ್ಲಿಸಲಿದ್ದು, ಆ ನಂತರ ಎನ್​ಪಿಎಸ್​ ರದ್ಧತಿಗಾಗಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಎನ್​ಪಿಎಸ್​  ಸರ್ಕಾರಿ ನೌಕರರು ಎನ್​ಪಿಎಸ್​ (New Pension Scheme) ನ್ನು ರದ್ದು ಮಾಡಬೇಕು ಎಂದು ಹೋರಾಟ ನಡೆಸ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್​ ಷಡಾಕ್ಷರಿಯವರ ಹೇಳಿಕೆ ಸಾಕಷ್ಟು ವೈರಲ್​ ಆಗಿತ್ತು. ಅಲ್ಲದೆ ಗೊಂದಲ ಮೂಡಿಸಿತ್ತು.

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ನ್ಯೂಸ್ / ದಾವಣಗೆರೆಆನವೇರಿಮಲೆಬೆನ್ನೂರುಹರಿಹರ ಕೃಷಿಕರಿಗೆ ಅನುಕೂಲ

ಸದ್ಯ  ಈ ನಿಟ್ಟಿನಲ್ಲಿ ಸಂಘ ಹೋರಾಟಕ್ಕೆ ಸಿದ್ಧವಿದೆ ಎಂದು ರಾಜ್ಯಾಧ್ಯಕ್ಷ ಸಿಎಸ್​ ಷಡಾಕ್ಷರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಂಘ ಈ ನಿಟ್ಟಿನಲ್ಲಿ ನಿರ್ಣಾಯಕವಾದ ಹೋರಾಟ ನಡೆಸಲಿದೆ. ಮುಂದಿನ ಏಪ್ರಿಲ್​ ನಂತರ ಈ ಸಂಬಂಧ  ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ತಮ್ಮನ್ನು ಕೆಲವರು ಈ ವಿಚಾರದಲ್ಲಿ ಟೀಕಿಸಿದ್ದಾರೆ. ಸರ್ಕಾರದ ಏಜೆಂಟ್​ ಅಂತಾ ದೂರಿದ್ಧಾರೆ. ಆದರೆ, ಸದ್ಯ ಏಳನೇ ವೇತನ ಆಯೋಗದ ಬಗ್ಗೆ ಸಂಘ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆ ಅಸ್ತು ಆಗಿದ್ದು, ವೇತನ ಆಯೋಗ ಕೂಡ ರಚನೆಯಾಗಿದೆ. ಬರುವ ಮಾರ್ಚ್​ ಅಂತ್ಯಕ್ಕೆ ಆಯೋಗದ ವರದಿ ಸಲ್ಲಿಸಲಿದ್ದು, ಆ ನಂತರ ಎನ್​ಪಿಎಸ್​ ರದ್ಧತಿಗಾಗಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. 

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ನಮ್ಮದು ಎರಡು ಪ್ರಮುಖ ಬೇಡಿಕೆ, ಒಂದು ವೇತನ ಆಯೋಗ ರಚನೆ, ಇನ್ನೊಂದು ಎನ್​ಪಿಎಸ್​ ರದ್ದತಿ, ಸದ್ಯ ವೇತನ ಆಯೋಗ ಸಂಬಂಧ ಆದ್ಯತೆ ನೀಡಿದ್ದೇವೆ,16 ವರ್ಷದಿಂದ ಎನ್​ಪಿಎಸ್​ ಜಾರಿಯಲ್ಲಿದೆ. ಆದರೆ ಈಗ ಷೇರು ಮಾರುಕಟ್ಟೆಯ ಪ್ರತಿಕೂಲ ಸನ್ನಿವೇಶದಿಂದ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗಿದೆ ಎಂದ ಷಡಾಕ್ಷರಿ, ವೇತನ ಆಯೋಗದಿಂದ 8 ಲಕ್ಷ ನೌಕರರು, 4.5 ಲಕ್ಷ ನಿವೃತ್ತ ನೌಕರರು ಸೇರಿ 12 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು. 

ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

ಇನ್ನೂ ಎನ್​ಪಿಎಸ್​ ರದ್ದತಿ ಮತ್ತು ವೇತನ ಆಯೋಗದ ವಿಚಾರದಲ್ಲಿ ಸರ್ಕಾರದ ಮೇಲೆ 40 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಇದು ಸರ್ಕಾರ ಮಟ್ಟಿಗೂ ಕಷ್ಟವಾಗಲಿದೆ. ಹೀಗಾಗಿ ಮೂರುವರೆ ಲಕ್ಷ ನೌಕರರ ಸಮಸ್ಯೆಯನ್ನು ಏಪ್ರಿಲ್​ ನಂತರ ಕ್ರಮಬದ್ಧ ಹೋರಾಟದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.