KARNATAKA NEWS/ ONLINE / Malenadu today/ Jul 31, 2023 SHIVAMOGGA NEWS
ಅರಿಶಿನ ಗುಂಡಿ ಫಾಲ್ಸ್ ನಲ್ಲಿ ಕಾಲುಜಾರಿ ಬಿದ್ದ ಶರತ್ರವರ ಅಂತ್ಯಕ್ರಿಯೆ ಭದ್ರಾವತಿಯಲ್ಲಿ ನಡೆಯಿತುಭದ್ರಾವತಿಯ ಕೆ.ಹೆಚ್.ನಗರದಲ್ಲಿರುವ ಶರತ್ ರವರ ನಿವಾಸಕ್ಕೆ ಶರತ್ ರವರ ಮೃತದೇಹ ಬರುತ್ತಲೇ, ಅವರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಇನ್ನು ತಮಿಳು ಗೌಂಡರ್ ಸಂಪ್ರದಾಯ ಪ್ರಕಾರ,ಶರತ್ ರವರ ಅಂತಿಮ ವಿಧಿವಿಧಾನಗಳನ್ನು ನಡೆಸಿ ಸ್ಥಳೀಯ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಶರತ್ ಅವಿವಾಹಿತನಾಗಿದ್ದರಿಂದ, ಅಂತ್ಯಕ್ರಿಯೆಗೂ ಮುನ್ನ ಶರತ್ಗೆ ವಿವಾಹ ಶಾಸ್ತ್ರ ಮಾಡಲಾಯ್ತು.
ಕೊಲ್ಲೂರು (Kollur) ಬಳಿಯ ಅರಿಶಿನಗುಂಡಿ ಫಾಲ್ಸ್ನಲ್ಲಿ (Arishinagundi falls) ಶರತ್ ಕಾಲುಜಾರಿ ಕೊಚ್ಚಿಕೊಂಡು ಹೋಗಿದ್ದರು. ಅವರಿಗಾಗಿ ಕಳೆದ 8 ದಿನಗಳಿಂದ ಹುಡುಕಾಟ ನಡೆದಿತ್ತು. ಭದ್ರಾವತಿ (Bhadravati) ಮೂಲದ ಯುವಕ ಶರತ್ (Sharath) ಮನೆಯ ಜವಾಬ್ದಾರಿಗಳನ್ನ ನಿಭಾಯಿಸುತ್ತಿದ್ದರು. ಇದೀಗ ಅವರನ್ನ ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.
ಅರಶಿನ ಗುಂಡಿಯಲ್ಲಿ ಭದ್ರಾವತಿಯ ಶರತ್ರವರ ಮೃತದೇಹ ಪತ್ತೆಯಾದ ಸ್ಥಳ! ಕಾರ್ಯಾಚರಣೆ #shivamogga pic.twitter.com/hdyDQPJBXZ
— malenadutoday.com (@CMalenadutoday) July 31, 2023
ಇನ್ನೂ ಕೊಲ್ಲೂರು ಸಮೀಪದ ಫಾಲ್ಸ್ನಲ್ಲಿ ಶರತ್ ಸಾವಿಗೂ ಮುನ್ನ ಖುದ್ದು ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋವೊಂದು ಇದೀಗ ಮಾಧ್ಯಮಗಳಿವೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಶರತ್ ಪ್ರಕೃತಿಯ ರಮಣೀಯತೆಯನ್ನ ಅನುಭವಿಸುತ್ತಾ, ಕ್ಯಾಮರಾಗೆ ನಗುಮೊಗದಲ್ಲಿ ಫೋಸ್ ಕೊಟ್ಟಿದ್ದರು. ಅಪಾಯದ ಸಣ್ಣ ಸೂಚನೆ ಸಿಕ್ಕಿದ್ದರೂ ಸಹ, ಅವರು ಬದುಕಿ ಬರುತ್ತಿದ್ದರೇನೋ ಎನ್ನುವಂತಿದೆ ವಿಡಿಯೋ
ಅರಶಿನ ಗುಂಡಿಯಲ್ಲಿ ಕಾಲುಜಾರಿ ಬೀಳುವುದಕ್ಕೂ ಮೊದಲು ಭದ್ರಾವತಿಯ ಶರತ್ ಚಿತ್ರೀಕರಿಸಿದ ವಿಡಿಯೋ! #shivamogga pic.twitter.com/afcWDJdlfk
— malenadutoday.com (@CMalenadutoday) July 31, 2023
ಅರಶಿನ ಗುಂಡಿ ಫಾಲ್ಸ್ನಲ್ಲಿ ಶರತ್ ಸಾವು! ನೊಂದ ಕುಟುಂಬಸ್ಥರು ಸಂಸದ ಬಿ.ವೈ.ರಾಘವೇಂದ್ರರಿಗೆ ನೀಡಿದ್ರು ಒಂದು ಮನವಿ!
ಮಲ್ನಾಡ್ನಲ್ಲಿ ಸಿಗದ ನೆಟ್ವರ್ಕ್! ಅಧಿಕಾರಿಗಳಿಗೆ ದಿಗ್ಬಂಧನ! ಪರಿಹಾರ ಹುಡುಕಲು ಸಂಸದರ ಮೀಟಿಂಗ್!
ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್ರ ಮೃತದೇಹ ಪತ್ತೆ!
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್ ಆ್ಯಂಡ್ ರನ್ ಯುವಕ ಬಲಿ! ಏನಿದು ಘಟನೆ?
ಶಿವಮೊಗ್ಗ ಟಿವಿ ಟವರ್ ಗೆ ಎಫ್ಎಂ ಟ್ರಾನ್ಸ್ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್ಎಂ!? ಏನಂದ್ರು ಸಂಸದರು?
ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ
