ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಯಾರು ಸ್ಪರ್ಧಿ? ಹಣಾಹಣಿ ಹೇಗಿದೆ? ನಿರ್ಣಾಯಕ ಯಾರು? ಪ್ಲಸ್ ಮೈನಸ್ ಏನು? ವಿವರ ಇಲ್ಲಿದೆ

Who is the candidate for whom in Shivamogga Rural constituency? How's the fight going? Who is decisive? What is plus minus? Here's the details

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಯಾರು ಸ್ಪರ್ಧಿ? ಹಣಾಹಣಿ ಹೇಗಿದೆ? ನಿರ್ಣಾಯಕ ಯಾರು? ಪ್ಲಸ್ ಮೈನಸ್ ಏನು?  ವಿವರ ಇಲ್ಲಿದೆ

KARNATAKA NEWS/ ONLINE / Malenadu today/ May 2, 2023 GOOGLE NEWS


ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ -2023 ರ ಅಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕುತೂಹಲವಿಲ್ಲದ ಆದರೆ ಅಚ್ಚರಿ ಮೂಡಿಸಬಲ್ಲ ಕ್ಷೇತ್ರವಾಗಿದೆ. ಇಲ್ಲಿಯ ಸ್ಪರ್ಧಿಗಳು ಸ್ಥಳೀಯವಾಗಿ ಗೊತ್ತಿರುವವರೆ, ಈ ಪೈಕಿ ಗೆಲ್ಲೋರ್ಯಾರು ಎಂಬ ಪ್ರಶ್ನೆಗೆ ಉತ್ತರವೂ ಈ ಕ್ಷೇತ್ರದ ಮನೆಗಳಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ. ಹಾಗಿದ್ದರೂ ಇಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆಯನ್ನ ಅಲ್ಲಗೆಳೆಯುವಂತಿಲ್ಲ. ಏಕೆ ಅನ್ನೋದನ್ನ ತಿಳಿದುಕೊಳ್ಳಲು ಕ್ಷೇತ್ರದ ಅಂಕಿಅಂಶಗಳನ್ನು ತಿಳಿದುಕೊಳ್ಳಬೇಕು.. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

  • ಪುರುಷ ಮತದಾರರು- 104640

  • ಮಹಿಳಾ ಮತದಾರರು-105768

  • ಒಟ್ಟು ಮತದಾರರು-210412

ಇತಿಹಾಸ 

ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ.  ಇಲ್ಲಿ  ಲಿಂಗಾಯಿತ ಮತ್ತು ಬೋವಿ ಸಮಾಜದ ಮತಗಳು ಹೆಚ್ಚಿದೆ. 

1972ರವರೆಗೆ ಶಿಕಾರಿಪುರ ಮೀಸಲು ಕ್ಷೇತ್ರವಾಗಿತ್ತು. ಆನಂತರ 1977 ರಲ್ಲಿ  ಹೊಳೆಹೊನ್ನೂರು ಮೀಸಲು ಕ್ಷೇತ್ರವಾಯ್ತು. 2004 ರಲ್ಲಿ ಹೊಳೆಹೊನ್ನೂರು ಕ್ಷೇತ್ರವನ್ನ ತಗೆದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾಡಲಾಯಿತು. 1977 ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕಾಂಗ್ರೇಸ್ ಹಿಡಿತದಲ್ಲಿತ್ತು. ಬದಲಾದ ಕಾಲಮಾನದಲ್ಲಿ ಇಲ್ಲಿ ಜೆಡಿಎಸ್ ತದನಂತರ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜಾತಿವಾರು ಅಂದಾಜು ಲೆಕ್ಕಾಚಾರ

ಲಿಂಗಾಯತರು 55 ಸಾವಿರ, ಬೋವಿ 35-37 ಸಾವಿರ,  ಎಕೆ 28 ಸಾವಿರ, ಕೊರಚ -ಕೊರಮ  ಸಮುದಾಯ 800, ಉಪ್ಪಾರ 10-12 ಸಾವಿರ,  ಕುರುಬ 7-8 ಸಾವಿರ,  ಲಂಬಾಣಿ 18-20 ಸಾವಿರ, ಮುಸ್ಲಿಂ 16-18 ಸಾವಿರ, ಕುಂಚಿಟಿಗರು 6 ಸಾವಿರ, ಕ್ರಿಶ್ಚಿಯನ್ 1500, ಒಕ್ಕಲಿಗರು 5 ಸಾವಿರ, ವಾಲ್ಮಿಕಿ 15- 16 ಸಾವಿರ, ಈಡಿಗರು-12,000, ಒಟ್ಟು 2.10.412 ಮತದಾರರು ಇದ್ದಾರೆ. 

ನಿರ್ಣಾಯಕ ಯಾರು?

ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ನಾಯಕರೇ ಕಣದಲ್ಲಿ ಪೈಪೋಟಿ ನಡೆಸುತ್ತಾರೆ. ದೊಡ್ಡ ಸಂಖ್ಯೆಯನ್ನು ಹೊಂದಿರುವ ಲಿಂಗಾಯತರು ಹಾಗೂ ಬೋವಿ ಮತಗಳು ಇಲ್ಲಿ ನಿರ್ಣಾಯಕವಾಗುತ್ತವೆ. ಅಂತಿಮವಾಗಿ ಅತಿಹೆಚ್ಚು ಮತಗಳು ಯಾರ ಕಡೆ ಟರ್ನ್ ಆಗುತ್ತವೆ ಎಂಬುದೇ ಇಲ್ಲಿ ಅಚ್ಚರಿಯ ಆಯ್ಕೆಗೆ ಕಾರಣವಾಗುತ್ತದೆ. 

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು

ಶಿವಮೊಗ್ಗ ಗ್ರಾಮಾಂತರ-111 ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್  ಕಣದಲ್ಲಿ ಉಳಿದಿದ್ದಾರೆ.

ಯಾರಿಗೆ ಪ್ಲಸ್ ಯಾರಿಗೆ ಮೈನಸ್

ಕ್ಷೇತ್ರದಲ್ಲಿ ಕಾಂಗ್ರೇಸ್ ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ  ಕಾಂಗ್ರೇಸ್ ನಿಂದ ಮಾಜಿ ಶಾಸಕ ದಿವಂಗತ ಕರಿಯಣ್ಣನವರ ಪುತ್ರ ಶ್ರೀನಿವಾಸ್ ಕರಿಯಣ್ಣ ಸ್ಪರ್ದಾ ಕಣದಲ್ಲಿದ್ದಾರೆ. 

ಜೆಡಿಎಸ್ ನಿಂದ ಶಾರದಾ ಪೂರ್ಯನಾಯಕ್ ಹಾಗು ಬಿಜೆಪಿಯಿಂದ ಅಶೋಕ್ ನಾಯ್ಕ್ ಸ್ಪರ್ಧಿಸಿದ್ದಾರೆ. 

ಜೆಡಿಎಸ್ ಅಭ್ಯರ್ಥಿ ಶಾರದ ಪೂರ್ಯಾ ನಾಯಕ್ ಗೆ ಈ ಹಿಂದಿನ ಸೋಲಿನ ಅನುಕಂಪ ಹಾಗೂ ಹಾಲಿ ಶಾಸಕರ ಮೇಲಿನ ಅಸಮಾಧಾನಗಳು ಪ್ಲಸ್​ ಆಗಬಹುದು. .ಕಳೆದ ಬಾರಿ 65549 ಮತಗಳನ್ನು ಪಡೆದು 3777 ಮತಗಳಿಂದ ಸೋಲನ್ನು ಅನುಭವಿಸಿದ್ದ ಶಾರದಾ ಪೂರ್ಯನಾಯಕ್ ಸೋಲಿನ ನಂತರವೂ ಐದು ವರ್ಷ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿದ್ರು. ಇದು ಮತದಾರರಲ್ಲ ಅನುಕಂಪ ಮೂಡಿಸಿದೆ. 

ಇನ್ನು ಲಿಂಗಾಯಿತ ಮತಗಳು ಜೆಡಿಎಸ್ ಪರವಾದ ಒಲುವು ಹೊಂದಿದೆ.  ಮೋದಿ ಹಾಗೂ ಬಿಜೆಪಿ ಅಲೆ ಮತ್ತು ಕಾಂಗ್ರೆಸ್​ನ ಪ್ರಬಲ ಪೈಪೋಟಿ   ಜೆಡಿಎಸ್​ಗೆ ಇಲ್ಲಿ ಮೈನಸ್​ ಪಾಯಿಂಟ್​

ಅಚ್ಚರಿ ಮೂಡಿಸ್ತಾರಾ ಮೋದಿ

ಬಿಜೆಪಿಯ ಅಶೋಕ್ ನಾಯಕ್ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರೇ ಶ್ರೀರಕ್ಷೆ. ಸ್ವಪಕ್ಷೀಯರು, ಸ್ಥಳಿಯರ ವಿರೋಧದ ನಡುವೆಯು ಟಿಕೆಟ್​ ಪಡೆದು ಅಖಾಡದಲ್ಲಿ ಗೆಲುವಿನ ವಿಶ್ವಾಸ ಮೂಡಿಸುತ್ತಿದ್ದಾರೆ. ಬಿಎಸ್​ವೈರ ಪ್ರತಿಷ್ಟೆಯ ಕಣಗಳಲ್ಲಿ ಗ್ರಾಮಾಂತರ ಕ್ಷೇತ್ರವೂ ಒಂದಾಗಿದ್ದು, ಅಶೋಕ್​ ನಾಯ್ಕ್​ರ  ಪರ ದೊಡ್ಡ ಕಾರ್ಯಪಡೆಯೇ ಕೆಲಸ ಮಾಡುತ್ತಿದೆ. ಹಾಗಿದ್ದರೂ, ಪಕ್ಷದೊಳಗಿನ ವಿರೋಧ ಮತ್ತು ಅಸಹಕಾರ ಇವರಿಗೆ ಮೈನಸ್ ಪಾಯಿಂಟ್ . ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಕಡೆಗಳಿಗೆಯಲ್ಲಿ ಆಯನೂರಿಗೆ ಬರುತ್ತಿರುವುದು ಅಶೋಕ್​ ನಾಯ್ಕ್​ರಿಗೆ ದೊಡ್ಡ ಪ್ಲಸ್​ ಆಗುವ ಸಾಧ್ಯತೆ ಇದೆ.



ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಕರಿಯಣ್ಣರಿಗೆ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಗಳೇ  ಸ್ಪರ್ದೆಯೊಡ್ಡುವ ಅಪಾಯವಿತ್ತು. ಅಂತಿಮ ಹಂತದಲ್ಲಿ  ಬಂಡಾಯ ಅಭ್ಯರ್ಥಿಗಳಾದ ರವಿ ಕುಮಾರ್, ನಾರಾಯಣಸ್ವಾಮಿ ನಾಮಪತ್ರ ಹಿಂಪಡೆದಿದ್ದಾರೆ. ಇದು ಪ್ಲಸ್​ ಆಗುತ್ತಿದೆ. ಇನ್ನೂ ಬಂಡಾಯ ನಾಯಕರನ್ನ ಕ್ಷೇತ್ರದಲ್ಲಿ ಉತ್ತಮವಾಗಿ ಬಳಸಿಕೊಂಡು ಪ್ರಚಾರ ಮಾಡಿದರೆ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ದೆ ಎರ್ಪಡುವುದರಲ್ಲಿ ಅಚ್ಚರಿಯಿಲ್ಲ. ಇಲ್ಲವಾದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಮೇಲಾಗಿ ಸಮನ್ವಯತೆಯ ಕೊರತೆ ಕಾಂಗ್ರೆಸ್​ಗೆ ಇಲ್ಲಿ ಮೈನಸ್ ಪಾಯಿಂಟ್​.. 




ಬಿಜೆಪಿ ಪ್ರಚಾರದ ಆಟೋದ ಮೇಲೆ ಗುಂಪೊಂದರಿಂದ ದಾಳಿ ! ನಡೆದಿದ್ದೇನು?

ಶಿವಮೊಗ್ಗ/ ಬಿಜೆಪಿ ಪ್ರಚಾರದ ಆಟೋವೊಂದನ್ನ ತಡೆದು, ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಪ್ರಚಾರದ ಆಡಿಯೋ ಇದ್ದ ಪೆನ್​ ಡ್ರೈವ್ ಕಿತ್ತುಕೊಂಡು ಹೋದ ಘಟನೆ ನಿನ್ನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸರು ತನಿಖೆಯನ್ನ ಸಹ ನಡೆಸ್ತಿದ್ಧಾರೆ. 

ನಡೆದಿದ್ದೇನು? 

ಶಿವಮೊಗ್ಗದ ಅಗಸವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬಿಜೆಪಿ ಆಟೋವೊಂದಕ್ಕೆ ಮೈಕ್​ ಕಟ್ಟಿ ಚುನಾವಣಾ ಪ್ರಚಾರ ನಡೆಸ್ತಿತ್ತು. ಈ ವೇಳೆ ಆಟೋದ ಮೇಲೆ ಗುಂಪೊಂದು ದಾಳಿ ನಡೆಸಿ, ಮೈಕ್​ ಕಿತ್ತುಕೊಂಡಿದೆ. ಅಲ್ಲದೆ ಪೆನ್​ಡ್ರೈವ್ ಕಿತ್ತುಕೊಂಡು ಆಟೋದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದೆ ಎಂದು ಪೊಲೀಸರ ಬಳಿ ದೂರಲಾಗಿದೆ. 

ವಿಷಯ ತಿಳಿದು ಸ್ಥಳಕ್ಕೆ ಬಂದ 112 ಪೊಲೀಸರು ಕೆಲವರನ್ನ ವಿಚಾರಣೆ ನಡೆಸಿದ್ದು, ಆನಂತರ ಪ್ರಕರಣ ಯಾವ ಸ್ವರೂಪ ಪಡೆದುಕೊಂಡಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  



READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 




ಪ್ರವಾಸಿಗರಿಗೆ ಸೂಚನೆ ಈ ದಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ!

ಸಾಗರ/ ಶಿವಮೊಗ್ಗ/  ಮತದಾತನದ ದಿನ ಜೋಗ ಜಲಪಾತದ ವೀಕ್ಷಣೆಗೆ ಅವಕಾಶ ಇಲ್ಲ ಎಂದು ಈಗಾಗಲೇ ಬೋರ್ಡ್ ಹಾಕಲಾಗಿದೆ. ಇದರ ಬೆನ್ನಲ್ಲೆ ಪ್ರವಾಸಿಗರಿಗೆ ಪುಣ್ಯಕ್ಷೇತ್ರದ ಭೇಟಿಗೆ ಅಂದು ಮಾತ್ರ ಬರಬೇಡಿ ಎಂದು ಭಕ್ತರಿಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. 

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

ಮೇ 10 ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವುದರಿಂದ ಸಿಗಂದೂರು ದೇವಾಲಯದ ಎಲ್ಲ ಸಿಬಂದಿಗಳಿಗೂ ಮತದಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.ಮೇಲಾಗಿ ಅಂದು ಭಕ್ತರಿಗೆ ದೇವಾಲಯದಲ್ಲಿ ಪ್ರವೇಶಾವಕಾಶವಿಲ್ಲ. ಭಕ್ತಾದಿಗಳು ತಮ್ಮ ತಮ್ಮ ಊರಿನ ಮತಗಟ್ಟೆಯಲ್ಲಿ ತೆರಳಿ ಮತದಾನ ಮಾಡಲು ಕೋರುತ್ತೇವೆ ಎಂದು ದೇವಾಲಯದ  ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಮೌಲ್ಯಗಳ ಉಳಿವಿಗೆ ತಪ್ಪದೇ ಮತದಾನ ಮಾಡೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಂಕಣ ಧರಿಸೋಣ. ನಮ್ಮ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಲು ಭಾರತದ ಪ್ರಜೆಗಳಾದ ನಾವು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  

Malenadutoday.com Social media