ಜಿಲ್ಲಾಡಳಿತದ ನಿಷೇಧದ ನಡುವೆ ಬೈಕ್ ರ್ಯಾಲಿ! ಸ್ಟೇಷನ್ಗೆ ಕರೆಸಿ ವಾರ್ನಿಂಗ್ ಕೊಟ್ಟ ಪೊಲೀಸ್ !
The Sagar police have conducted an inquiry regarding the bike rally without obtaining permissionಅನುಮತಿ ಪಡೆಯದೇ ಬೈಕ್ ರ್ಯಾಲಿ ನಡೆಸಿದ್ದರ ಸಂಬಂಧ ಸಾಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ
![ಜಿಲ್ಲಾಡಳಿತದ ನಿಷೇಧದ ನಡುವೆ ಬೈಕ್ ರ್ಯಾಲಿ! ಸ್ಟೇಷನ್ಗೆ ಕರೆಸಿ ವಾರ್ನಿಂಗ್ ಕೊಟ್ಟ ಪೊಲೀಸ್ !](https://malenadutoday.com/uploads/images/202309/image_870x_650b04747b19c.webp)
KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’
ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆ ವೇಳೇ ಬೈಕ್ ರ್ಯಾಲಿಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಈ ನಡುವೆ ಸಾಗರ ತಾಲ್ಲೂಕಿನಲ್ಲಿ ಗಣಪತಿ ಪ್ರತಿಷ್ಟಾಪನೆ ವೇಳೇ ಅನುಮತಿ ಪಡೆಯದೆ ಬೈಕ್ ರ್ಯಾಲಿ ನಡೆಸಿದ ಆರೋಪವೊಂದಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಗಮನಿಸಿ, ಐಪಿಸಿ ಸೆಕ್ಷನ್ 279, 188, 189, 190ರ ಅಡಿ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಈ ನಡುವೆ ಮಾಜಿ ಸಚಿವ ಹರತಾಳು ಹಾಲಪ್ಪರವರು ವಿಚಾರ ತಿಳಿದು ಸ್ಟೇಷನ್ಗೆ ಆಗಮಿಸಿ, ಹಬ್ಬದ ಹುಮ್ಮಸಿನಲ್ಲಿ ನಡದ ಘಟನೆ ಇದಾಗಿದ್ದು, ಯಾವುದೇ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಡಿವೈಎಸ್ಪಿ ಯುವಕರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇತ್ಯರ್ಥ ಮಾಡಿದ್ದಾರೆ. ಕಳೆದ ಸೋಮವಾರ ನಡೆದ ಘಟನೆ ಬಗ್ಗೆ ಇದೀಗ ವರದಿಯಾಗಿದೆ
ಇನ್ನಷ್ಟು ಸುದ್ದಿಗಳು
-
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
-
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?