ಜಿಲ್ಲಾಡಳಿತದ ನಿಷೇಧದ ನಡುವೆ ಬೈಕ್​ ರ್ಯಾಲಿ! ಸ್ಟೇಷನ್​ಗೆ ಕರೆಸಿ ವಾರ್ನಿಂಗ್ ಕೊಟ್ಟ ಪೊಲೀಸ್ !

The Sagar police have conducted an inquiry regarding the bike rally without obtaining permissionಅನುಮತಿ ಪಡೆಯದೇ ಬೈಕ್ ರ್ಯಾಲಿ ನಡೆಸಿದ್ದರ ಸಂಬಂಧ ಸಾಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ

ಜಿಲ್ಲಾಡಳಿತದ ನಿಷೇಧದ ನಡುವೆ ಬೈಕ್​ ರ್ಯಾಲಿ! ಸ್ಟೇಷನ್​ಗೆ ಕರೆಸಿ ವಾರ್ನಿಂಗ್ ಕೊಟ್ಟ ಪೊಲೀಸ್ !

KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆ ವೇಳೇ ಬೈಕ್​ ರ್ಯಾಲಿಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಈ ನಡುವೆ ಸಾಗರ ತಾಲ್ಲೂಕಿನಲ್ಲಿ ಗಣಪತಿ ಪ್ರತಿಷ್ಟಾಪನೆ ವೇಳೇ ಅನುಮತಿ ಪಡೆಯದೆ ಬೈಕ್ ರ್ಯಾಲಿ ನಡೆಸಿದ ಆರೋಪವೊಂದಕ್ಕೆ ಸಂಬಂಧಿಸಿದಂತೆ ಸಾಗರ ಟೌನ್​ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಗಮನಿಸಿ, ಐಪಿಸಿ ಸೆಕ್ಷನ್ 279, 188, 189, 190ರ ಅಡಿ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಬೈಕ್​ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. 

ಈ ನಡುವೆ ಮಾಜಿ ಸಚಿವ ಹರತಾಳು ಹಾಲಪ್ಪರವರು ವಿಚಾರ ತಿಳಿದು ಸ್ಟೇಷನ್​ಗೆ ಆಗಮಿಸಿ, ಹಬ್ಬದ ಹುಮ್ಮಸಿನಲ್ಲಿ ನಡದ ಘಟನೆ ಇದಾಗಿದ್ದು, ಯಾವುದೇ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಡಿವೈಎಸ್​ಪಿ ಯುವಕರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇತ್ಯರ್ಥ ಮಾಡಿದ್ದಾರೆ. ಕಳೆದ ಸೋಮವಾರ ನಡೆದ ಘಟನೆ ಬಗ್ಗೆ ಇದೀಗ ವರದಿಯಾಗಿದೆ 


ಇನ್ನಷ್ಟು ಸುದ್ದಿಗಳು