ಸಾಗರ -ಸೊರಬ ರಸ್ತೆಯಲ್ಲಿ ಪಲ್ಟಿಯಾದ ಹೆಂಚಿನ ಲಾರಿ! ಡ್ರೈವರ್ ಸ್ಥಳದಲ್ಲಿಯೇ ಸಾವು!

ಹಂಚಿಕೊಳ್ಳಿ
WhatsApp Facebook X Telegram
ಸಾಗರ -ಸೊರಬ ರಸ್ತೆಯಲ್ಲಿ ಪಲ್ಟಿಯಾದ ಹೆಂಚಿನ ಲಾರಿ! ಡ್ರೈವರ್ ಸ್ಥಳದಲ್ಲಿಯೇ ಸಾವು!

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮರಸ ಗ್ರಾಮದಲ್ಲಿ ಲಾರಿಯೊಂದು ಪಲ್ಟಿಯಾದ ಘಟನೆ ಬಗ್ಗೆ ವರದಿಯಾಗಿದೆ.  ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಕುಂದಾಪುರದಿಂದ ಹೆಂಚು ತುಂಬಿಕೊಂಡು ಸಾಗರ ಮಾರ್ಗವಾಗಿ ಸೊರಬ ಕಡೆ ಹೊರಟಿದ್ದ ಲಾರಿ ಮರಸ ಗ್ರಾಮದ ಸಮೀಪ ಪಲ್ಟಿಯಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಲಾರಿ ಚಾಲಕ ಸೊರಬ ತಾಲೂಕಿನ ಮನ್ಸೂಬ್ ಖಾನ್ (41) ಮೃತಪಟ್ಟಿದ್ದಾರೆ 

ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮಹಾಬಲೇಶ್ವರ್ ನಾಯ್ಕ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಇನ್ನಷ್ಟು ಸುದ್ದಿಗಳು 

 


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor