ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! | ಓರ್ವ ಸೀರಿಯಸ್​, ಐವರು ಬಚಾವ್​ | ಏನಂದ್ರೂ FIR ಮಾಡಲ್ವಂತೆ!?

Here is the full details of the incident in Shikaripura ಶಿಕಾರಿಪುರದಲ್ಲಿ ನಡೆದ ಘಟನೆಯ ಪೂರ್ತಿ ವಿವರ ಇಲ್ಲಿದೆ

ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! |  ಓರ್ವ ಸೀರಿಯಸ್​, ಐವರು ಬಚಾವ್​ |  ಏನಂದ್ರೂ FIR ಮಾಡಲ್ವಂತೆ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ವಿದ್ಯುತ್ ಕಂಬದ ಲೈನ್​ ಶಿಫ್ಟಿಂಗ್​ ವೇಳೇ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ  ಕೂದಲೆಳೆ ಅಂತರದಲ್ಲಿ  ಐವರು ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಡಗಣಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಡೀರ್ ಕರೆಂಟ್ ಹರಿದ ಪರಿಣಾಮ ಒಬ್ಬನ ಸ್ಥಿತಿಯು ಗಂಭೀರವಾಗಿದೆ. ಅಲ್ಲದೆ ಈ ವೇಳೆ ಚೂರು ಹೆಚ್ಚು ಕಮ್ಮಿಯಾಗಿದ್ದರೂ ಐವರ ಜೀವ ಹೋಗುವ ಅಪಾಯವಿತ್ತು. 

ಇದ್ದಕ್ಕಿದ್ದ ವಿದ್ಯುತ್ ಹರಿದ ಬೆನ್ನಲ್ಲೆ ಇಡೀ ಲೈನ್ ಟ್ರಿಪ್​ ಆಗಿದೆ. ಹಾಗಾಗಿ ಲೈನ್​ನಲ್ಲಿ ಹರಿದ ವಿದ್ಯುತ್​ ತಕ್ಷಣವೇ ನಿಂತಿದೆ. ಇದರಿಂದಾಗಿ ಕಂಬಗಳ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿದ್ಯುತ್ ಶಾಕ್ ಅನುಭವದ ಹೊಂದಿದ ಬೆನ್ನಲ್ಲೆ ಕೆಳಕ್ಕೆ ಹಾರಿದ್ದಾರೆ. 

ಮೆಸ್ಕಾಂ ನಿರ್ಲಕ್ಷ್ಯ!

ಇನ್ನೂ ವಿದ್ಯುತ್ ಕಾಮಗಾರಿ ಕೈಗೊಳ್ಳಲು ಲೈನ್​ ಕ್ಲೀಯರ್ ತೆಗೆದುಕೊಳ್ಳಲಾಗಿತ್ತು. ಆದರೆ,  ಮೆಸ್ಕಾಂ ಸಿಬ್ಬಂದಿ ಲೈನ್​ ಕ್ಲಿಯರೆನ್ಸ್ ಇದ್ದರೂ ಲೈನ್​ನಲ್ಲಿ ವಿದ್ಯುತ್ ಹರಿವನ್ನ ಚಾಲು ಮಾಡಿದ್ದಾರೆ. ಶಿಕಾರಿಪುರದಲ್ಲಿ  ಇದು ಈ ವರ್ಷ ನಡೆಯುತ್ತಿರುವ ಆರು ಪ್ರಕರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

READ : ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?.

ವಿಶೇಷ ಅಂದರೆ, ಮೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದರೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಆರೋಪಿಸಿಲಾಗಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಮಾತನಾಡಿದ ಹೆಚ್​.ಟಿ.ಬಳಿಗಾರ್​, ಪ್ರಕರಣದಲ್ಲಿ ಪೊಲೀಸ್ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಕಂಪ್ಲೆಂಟ್ ಕೊಟ್ಟರೂ ಸಹ ತೆಗೆದುಕೊಳ್ಳುತ್ತಿಲ್ಲ. ತಮ್ಮ ಮಗನಿಗಾದ ಅನ್ಯಾಯದ ಬಗ್ಗೆ ತಂದೆ ದೂರು ನೀಡಿದರೂ ಪೊಲೀಸರು ಕಂಪ್ಲೆಂಟ್ ತೆಗೆದುಕೊಳ್ಳುತ್ತಿಲ್ಲ.ಹೀಗಾಗಿ ನೊಂದ ಆ ತಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ನಡೆದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್​ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!