ಮಂತ್ರಕ್ಕೆ ಆನೆ ಓಡಿ ಹೋಗುತ್ತಾ? ಗಜರಾಜನ ಎದುರು ಗಣಪತಿ ಸ್ತೋತ್ರ/ ವೈರಲ್ ಆಗ್ತಿದೆ ಈ ವಿಡಿಯೋ
Does the elephant run away to the mantra? Ganapathi Stotra in front of Gajaraja/ This video is going viral/ . Ganapati Stotra, Viral Video, Elephant Video Viral, Wild Elephant Video Viral, Viral Story, Viral Reels, Twitter Post, Twitter Video, Facebook Video, /
ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತೋ ಇಲ್ಲವೋ ಕಂಡವರಿಲ್ಲ, ಆದರೆ ಮಂತ್ರಕ್ಕೆ ಎದುರಿಗೆ ನಿಂತು ಹೆದರಿಸ್ತಿದ್ದ ಆನೆ ಸೈಲೆಂಟ್ ಆಗಿ ಸೈಡಿಗೆ ಹೋದ ಘಟನೆಯೊಂದರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ರೂಪಿನ್ ಶರ್ಮಾ ಎಂಬವರು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಆನಂತರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಬ್ರಾಹ್ಮಣರಿಗೆ ಕಾಡಾನೆ ಎದುರಾದರೇ, ಅಲ್ಲಿ ಯಾವ ಸನ್ನಿವೇಶ ನಡೆಯುತ್ತದೆ ಎಂಬರ್ಥದ ಬರಹದಡಿಯಲ್ಲಿ ಮಾಡಿದ್ದ ಟ್ವೀಟ್, ಇದೀಗ ಟ್ರೆಂಡ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ.
ವೈರಲ್ ಆಗ್ತಿದೆ ವಿಡಿಯೋ!
1.41 ಸೆಕೆಂಡ್ಗಳ ಈ ವಿಡಿಯೋದಲ್ಲಿರುವವರು ಕನ್ನಡಿಗರು, ಘಟನೆ ನಡೆದ ಸ್ಥಳ ಯಾವುದು ಎಂಬುದು ಗೊತ್ತಾಗಿಲ್ಲ. ಆದರೆ, ಅಲ್ಲಿ ನಡೆಯುವ ಸಂಭಾಷಣೆ ಹಾಗೂ ಸನ್ನಿವೇಶಗಳು ಮೊಬೈಲ್ ಕ್ಯಾಮರಾದಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ.
ನಡೆದಿದ್ದೇನು?
ತಮ್ಮ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾಡಾನೆಯೊಂದು ಎದುರಾಗುತ್ತದೆ. ವಾಹನದಲ್ಲಿ ಕುಳಿತವರು, ಅದನ್ನೇನು ನಾಡಾನೆ ಎಂದುಕೊಂಡರೋ ಏನೋ, ಬಾಳೆಹಣ್ಣು ಕೊಡಿ ಎಂದು ಡ್ರೈವರ್ ಕೈಗೆ ಬಾಳೆಹಣ್ಣು ಇಡುತ್ತಾರೆ. ಆದರೆ ಚಾಲಕನಿಗೆ ಕಾಡಾನೆಯ ನಡೆಯ ಸೂಕ್ಷ್ಮ ಗೊತ್ತಾಗಿ ವೆಹಿಕಲ್ನ್ನು ರಿವರ್ಸ್ ತೆಗೆಯುತ್ತಾರೆ.
ಕೃಷ್ಣ..ವಾಸುದೇವ..ಪರಮಾತ್ಮ
ಇತ್ತ ಕಾಡಾನೆ, ಪ್ರವಾಸಿಗರಿದ್ದ ವಾಹನವನ್ನು ಎದುರುಗೊಳ್ಳುತ್ತಲೇ ಹೆಜ್ಜೆ ಹಾಕುತ್ತದೆ. ಇದೇ ಹೊತ್ತಿಗೆ ಬರುವ ಸ್ಕೂಟರ್ ವೊಂದು ಅಲ್ಲಿಂದ ಪಾಸಾಗುತ್ತದೆ. ಆದರೆ ಆನೆ ಪ್ರವಾಸಿಗರ ವಾಹನವನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ. ಇದು ಅಲ್ಲಿದ್ದವರಿಗೆ ಆತಂಕ ಉಂಟುಮಾಡಿತ್ತು. ಕೃಷ್ಣ..ವಾಸುದೇವ,, ಪರಮಾತ್ಮ ಎಂದು ಮಹಿಳೆಯರು ಸಂಕಷ್ಟದಲ್ಲಿ ದೇವರ ಸ್ಮರಣೆ ಮಾಡುತ್ತಾರೆ. ಇನ್ನೊಂದೆಡೆ ವಾಹನದ ಪ್ರಂಟ್ ಸೀಟ್ನಲ್ಲಿದ್ದವರು ಗಣಪತಿ ಸ್ತ್ರೋತ್ರ ವನ್ನು ಹೇಳಲು ಆರಂಭಿಸುತ್ತಾರೆ.
ಮಂತ್ರಕ್ಕೆ ಒಲಿದ ಕಾಡಾನೆ
ಆನೆ ಅಪಾಯದ ಸೂಚನೆ ಕೊಟ್ಟಂತೆ ಹೆಜ್ಜೆ ಇಡುತ್ತಿದ್ದರೆ, ಚಾಲಕ ವಾಹನವನ್ನು ರಿವರ್ಸ್ ತೆಗೆಯುತ್ತಿರುತ್ತಾರೆ, ಆನೆ ನಿಧಾನವಾಗಿ ಒಂದು ಬದಿಗೆ ಹೋಗುತ್ತದೆ. ಚಾಲಕ ವಾಹನವನ್ನ ಇನ್ನೊಂದು ಬದಿಯಿಂದ ವೇಗವಾಗಿ ಮುಂದಕ್ಕೆ ಚಲಾಯಿಸುತ್ತಾರೆ. ಕಾಡಾನೆಯು ಸೊಂಡಿಲು ಎತ್ತಿ, ಘೀಳಿಡುತ್ತದೆ. ವಾಹನದಲ್ಲಿದ್ದವರು ಆನೆ ಆಶೀರ್ವಾದ ಮಾಡಿ ಟಾಟಾ ಮಾಡಿರಬೇಕು ಎಂದುಕೊಂಡು ಬಾಯ್..ಬಾಯ್.. ಹೇಳುತ್ತಾ ಮುಂದಕ್ಕೆ ಸಾಗುತ್ತಾರೆ.
ಕ್ಲೈಮ್ಯಾಕ್ಸ್!
1.41 ಸೆಕೆಂಡ್ನ ಈ ವಿಡಿಯೋ ಸಾಕಷ್ಟು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗ್ತಿರುವ ವಿಡಿಯೋದಲ್ಲಿರುವವರ ವಿಚಾರ, ಆಚಾರ ಮತ್ತು ಅವರ ಸಂಭಾಷಣೆಗಳು ಮೆಚ್ಚುಗೆಗೆ ಪ್ರಾತ್ರವಾಗುತ್ತಿದ್ದು, ಮಹಿಳೆಯರ ಮುಗ್ದತೆಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, chennai central,chennai central Will the elephant run away to the mantra?, Ganapati stotra in front of Gajaraja/ This video is going viral. Ganapati Stotra, Viral Video, Elephant Video Viral, Wild Elephant Video Viral, Tourist, Brahmins, Vehicle, Scene, Viral Post, Viral Story, Viral Reels, Twitter Post, Twitter Video, Facebook Video, Instagram Video. ಮಂತ್ರಕ್ಕೆ ಆನೆ ಓಡಿ ಹೋಗುತ್ತಾ?, ಗಜರಾಜನ ಎದುರು ಗಣಪತಿ ಸ್ತೋತ್ರ/ , ವೈರಲ್ ಆಗ್ತಿದೆ ಈ ವಿಡಿಯೋ, ಗಣಪತಿ ಸ್ತ್ರೋತ್ರ, ವೈರಲ್ ವಿಡಿಯೋ, ಆನೆ ವಿಡಿಯೋ ವೈರಲ್, ವೈಲ್ಡ್ ಆನೆ ವಿಡಿಯೋ ವೈರಲ್, ಟೂರಿಸ್ಟ್, ಬ್ರಾಹ್ಮಣರು, ವೆಹಿಕಲ್ , ದೃಶ್ಯ, ವೈರಲ್ ಪೋಸ್ಟ್, ವೈರಲ್ ಸ್ಟೋರಿ, ವೈರಲ್ ರೀಲ್ಸ್, ಟ್ವಿಟ್ಟರ್ ಫೋಸ್ಟ್, ಟ್ವಿಟ್ಟರ್ ವಿಡಿಯೋ, ಫೇಸ್ಬುಕ್ ವಿಡಿಯೋ, ಇನ್ಸ್ಟ್ಯಾಗ್ರಾಮ್ ವಿಡಿಯೋ.