ಬೈಕ್ ಮತ್ತು ಬಸ್ ಡಿಕ್ಕಿ! ಆಯನೂರು ಸಮೀಪ ಚಿನ್ನಮನೆ ಬಳಿ ಭೀಕರ ಅಪಘಾತ! ಬೈಕ್ ಪುಡಿ..ಪುಡಿ! ಸವಾರ ಸಾವು!
A collision took place between a bus and a bike near Chinnamane near Ayanurಆಯನೂರು ಸಮೀಪದ ಚಿನ್ನಮನೆ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ
![ಬೈಕ್ ಮತ್ತು ಬಸ್ ಡಿಕ್ಕಿ! ಆಯನೂರು ಸಮೀಪ ಚಿನ್ನಮನೆ ಬಳಿ ಭೀಕರ ಅಪಘಾತ! ಬೈಕ್ ಪುಡಿ..ಪುಡಿ! ಸವಾರ ಸಾವು!](https://malenadutoday.com/uploads/images/202309/image_870x_650040cfbdeb7.webp)
KARNATAKA NEWS/ ONLINE / Malenadu today/ Sep 12, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪ ಇವತ್ತು ಅಪಘಾತವೊಂದು ಸಂಭವಿಸಿದೆ. ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಯನೂರು ಹತ್ತಿರ ಸಿಗುವ ಚಿನ್ನಮನೆ ಬಳಿ ಈ ಘಟನೆ ನಡೆದಿದೆ. ಮೃತರನ್ನು ಹೊಸನಗರ ತಾಲೂಕಿನ ಹಾರೋಹಿತ್ತಲು ನಿವಾಸಿ ಗುರುಮೂರ್ತಿ ಎಂದು ಗುರುತಿಸಲಾಗಿದೆ. ಅವರಿಗೆ 36 ವರ್ಷ ವಯಸ್ಸಾಗಿತ್ತು
ಬೈಕ್ ಸವಾರ ಗುರುಮೂರ್ತಿ ಆಯನೂರಿನಿಂದ ರಿಪ್ಪನ್ಪೇಟೆ ಕಡೆಗೆ ಬರುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಗುರುಮೂರ್ತಿ ಓಡಿಸುತ್ತಿದ್ದ ಡಿಸ್ಕವರಿ ಬೈಕ್ ಡಿಕ್ಕಿಯಾಗಿದೆ. ಚಿನ್ನಮನೆ ಕೆರೆ ಬಳಿಯಲ್ಲಿ ಸಿಗುವ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ತಕ್ಷಣವೇ ಸ್ಥಳೀಯರು ಬೈಕ್ ಸವಾರನ ನೆರವಿಗೆ ಬಂದಿದ್ದಾರೆ. ಆದಾಗ್ಯು ಗುರುಮೂರ್ತಿ ಸ್ಥಳದಲ್ಲಿಯೇ ನಿಧನರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಬೈಕ್ ಪುಡಿ ಪುಡಿಯಾಗಿದೆ. ಈ ಸಂಬಂಧ ಕುಂಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
-
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!