ಬೈಕ್​ ಮತ್ತು ಬಸ್ ಡಿಕ್ಕಿ! ಆಯನೂರು ಸಮೀಪ ಚಿನ್ನಮನೆ ಬಳಿ ಭೀಕರ ಅಪಘಾತ! ಬೈಕ್​ ಪುಡಿ..ಪುಡಿ! ಸವಾರ ಸಾವು!

A collision took place between a bus and a bike near Chinnamane near Ayanurಆಯನೂರು ಸಮೀಪದ ಚಿನ್ನಮನೆ ಬಳಿ ಬಸ್​ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ

ಬೈಕ್​ ಮತ್ತು ಬಸ್ ಡಿಕ್ಕಿ! ಆಯನೂರು ಸಮೀಪ ಚಿನ್ನಮನೆ ಬಳಿ ಭೀಕರ ಅಪಘಾತ! ಬೈಕ್​ ಪುಡಿ..ಪುಡಿ! ಸವಾರ ಸಾವು!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪ ಇವತ್ತು ಅಪಘಾತವೊಂದು ಸಂಭವಿಸಿದೆ. ಖಾಸಗಿ ಬಸ್ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

 

ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ  ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಆಯನೂರು ಹತ್ತಿರ ಸಿಗುವ ಚಿನ್ನಮನೆ ಬಳಿ ಈ ಘಟನೆ ನಡೆದಿದೆ. ಮೃತರನ್ನು  ಹೊಸನಗರ ತಾಲೂಕಿನ ಹಾರೋಹಿತ್ತಲು ನಿವಾಸಿ ಗುರುಮೂರ್ತಿ ಎಂದು ಗುರುತಿಸಲಾಗಿದೆ. ಅವರಿಗೆ 36 ವರ್ಷ ವಯಸ್ಸಾಗಿತ್ತು 

ಬೈಕ್ ಸವಾರ ಗುರುಮೂರ್ತಿ ಆಯನೂರಿನಿಂದ ರಿಪ್ಪನ್​ಪೇಟೆ ಕಡೆಗೆ ಬರುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಹಾಗೂ  ಗುರುಮೂರ್ತಿ ಓಡಿಸುತ್ತಿದ್ದ ಡಿಸ್ಕವರಿ ಬೈಕ್ ಡಿಕ್ಕಿಯಾಗಿದೆ. ಚಿನ್ನಮನೆ ಕೆರೆ ಬಳಿಯಲ್ಲಿ ಸಿಗುವ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ತಕ್ಷಣವೇ ಸ್ಥಳೀಯರು ಬೈಕ್​ ಸವಾರನ ನೆರವಿಗೆ ಬಂದಿದ್ದಾರೆ. ಆದಾಗ್ಯು ಗುರುಮೂರ್ತಿ ಸ್ಥಳದಲ್ಲಿಯೇ ನಿಧನರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಬೈಕ್ ಪುಡಿ ಪುಡಿಯಾಗಿದೆ. ಈ ಸಂಬಂಧ ಕುಂಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಇನ್ನಷ್ಟು ಸುದ್ದಿಗಳು