shikaripura / ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಬಿಎಸ್ವೈ ಮನೆಗೆ ಕಲ್ಲು ತೂರಾಟ, ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ
shikaripura / Bsy's house in Shikaripura in Shimoga district pelted with stones, protest intensifies
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿವಾಸಕ್ಕೆ ಬಂಜಾರ ಸಮುದಾಯದ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಯತ್ನ ನಡೆಸಿದ ಘಟನೆ ನಡೆದಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ ಮೀಸಲಾತಿ ಮತ್ತು ಒಳಮೀಸಲಾತಿ ಪರಿಷ್ಕರಣೆಗೆ ಬಂಜಾರ ಸಮುದಾಯದ ತೀವ್ರ ಆಕ್ರೋಶ ಎದುರಾಗಿದೆ. ಇವತ್ತು ಇದೇ ವಿಚಾರಕ್ಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ ಬಂಜಾರ (ಲಂಬಾಣಿ) ಸಮುದಾಯದ ಜನರು, ಇಲ್ಲಿನ ಪ್ರಮುಖ ಸರ್ಕಲ್ನಲ್ಲಿ ಧರಣಿ ನಡೆಸಿದರು.
ಈ ಪ್ರತಿಭಟನೆ ಕೆಲವೇ ಹೊತ್ತಿನಲ್ಲಿ ಪ್ರಕ್ಷ್ಯಬ್ರವಾಗಿದ್ದು, ಪ್ರತಿಭಟನಾಕಾರರು ಏಕಾಯೇಕಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿವಾಸದತ್ತ ತೆರಳಿದರು. ಅಲ್ಲಿಯು ಪ್ರತಿಭಟನೆ ನಡೆಸಿದ ಸಮುದಾಯದವರು, ನಂತರ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು,
ಇದರಿಂದ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು, ಯಡಿಯೂರಪ್ಪನವರ ಮನೆಯ ಸಿಸಿಟಿವಿ ಧ್ವಂಸಗೊಳಿಸಿದರು. ಅಲ್ಲದೆ ಗಾಜುಗಳನ್ನ ಪುಡಿಮಾಡಿದ್ದಾರೆ.
ಇನ್ನೂ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ರು. ಈ ವೇಳೆ ಕೆಲ ಪೊಲೀಸರಿಗೂ ಸಹ ಗಾಯಗಳಾಗಿವೆ, ಇನ್ನೂ ಈ ಗಲಾಟೆಯ ನಡುವೆ ಮಾಜಿ ಸಿಎಂ ಯಡಿಯೂರಪ್ಪನವರ ಮನೆಗೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ..