ಸಿಗಂದೂರು ಲಾಂಚ್ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!
Private bus skids into backwaters from Sigandur launch ಸಿಗಂದೂರು ಲಾಂಚ್ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!
KARNATAKA NEWS/ ONLINE / Malenadu today/ Aug 28, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಚ್ನ ದಡದಲ್ಲಿ ಬಸ್ವೊಂದು ಹಿನ್ನೀರಿಗೆ ಇಳಿಯುವ ರೀತಿಯಲ್ಲಿ ಚಲಿಸಿದ್ದು ನಿನ್ನೆ ಆತಂಕಕ್ಕೆ ಕಾರಣವಾಗಿತ್ತು.
ಏನಿದು ಘಟನೆ
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರನ್ನು ತುಂಬಿಕೊಂಡು ಲಾಂಚ್ ಏರಿದ್ದ ಬಸ್, ಅದರಿಂದ ಇಳಿವಾಗ ಈ ಘಟನೆ ನಡೆದಿದೆ. ಲಾಂಚ್ನ ಲಂಗರಿನಿಂದ ಕೆಳಕ್ಕಿಳಿದು ಏರಿ ಏರಿದ ಬಸ್ನ ಇಂಜಿನ್ ಇದ್ದಕ್ಕಿದ್ದ ಹಾಗೆ ಆಫ್ ಆಗಿದೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿನತ್ತ ಚಲಿಸಲು ಆರಂಭಿಸಿತ್ತು.
ಕೆಲವೇ ಸೆಕೆಂಡ್ಗಳಲ್ಲಿ ಚಾಲಕ ಬಸ್ನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸ್ಟೇರಿಂಗ್ ತಿರುಗಿಸಿದ್ದಾರೆ. ಪರಿಣಾಮ ಇಳಿಜಾರಿನಲ್ಲಿ ಇಳಿದ ಬಸ್ ಹಿನ್ನೀರಿಗೆ ಅಡ್ಡಲಾಗಿ ತಿರುಗಿ ನಿಂತಿದೆ.
ಹಿನ್ನೀರಿನತ್ತ ಹಿಮ್ಮಖವಾಗಿ ಚಲಿಸಿದ್ದರಿಂದ ಬಸ್ನಲ್ಲಿದ್ದವರಿಗೆ ಆತಂಕ ಎದುರಾಗಿತ್ತು. ಬಸ್ನಲ್ಲಿ ಸುಮಾರು 60 ಜನರಿದ್ದರು. ಅದೃಷ್ಟಕ್ಕೆ ಯಾರಿಗೂ ಏನೂ ಆಗಲಿಲ್ಲ. ಚಾಲಕನ ಸಮಯಪ್ರಜ್ಞೆಯು ಅಪಾಯವೊಂದನ್ನು ತಪ್ಪಿಸಿತ್ತು.
ಪ್ರೀತ್ಸೆ...ಪ್ರೀತ್ಸೆ ಎಂದು ಅಪ್ರಾಪ್ತೆಗೆ ಜೀವ ಬೆದರಿಕೆ ! ದಾಖಲಾಯ್ತು ಪೋಕ್ಸೋ ಕೇಸ್! ಏನಿದು ಸಾಗರ ಪ್ರಕರಣ?
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ (Sagar Town Police Station) ನಲ್ಲಿ ಅಪ್ರಾಪ್ತೆಯೊಬ್ಬಳಿಗೆ ಪ್ರೀತಿಸು ಎಂದು ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಜೀವ ಬೆದರಿಕೆ ಆರೋಪ
ಸಾಗರ ಟೌನ್ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಅಪ್ರಾಪ್ತೆಯ ತಂದೆಯ ನಿಧನದ ನಂತರ ಪರಿಚಯನಾದ ಈತ, ಇತ್ತೀಚೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದನಂತೆ.
ಆರೋಪಿ ವಶಕ್ಕೆ
ಈ ವಿಚಾರವಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಸಹಾಯ ಪಡೆದ ಅಪ್ರಾಪ್ತೆ ಸಾಗರ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ಧಾರೆ.
ಇನ್ನಷ್ಟು ಸುದ್ದಿಗಳು
-
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
-
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?