ಸಿಗಂದೂರು ಲಾಂಚ್​ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!

Private bus skids into backwaters from Sigandur launch ಸಿಗಂದೂರು ಲಾಂಚ್​ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!

ಸಿಗಂದೂರು ಲಾಂಚ್​ನಿಂದ  ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಚ್​ನ ದಡದಲ್ಲಿ ಬಸ್​ವೊಂದು ಹಿನ್ನೀರಿಗೆ ಇಳಿಯುವ ರೀತಿಯಲ್ಲಿ ಚಲಿಸಿದ್ದು ನಿನ್ನೆ ಆತಂಕಕ್ಕೆ ಕಾರಣವಾಗಿತ್ತು.

ಏನಿದು ಘಟನೆ

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರನ್ನು ತುಂಬಿಕೊಂಡು ಲಾಂಚ್​ ಏರಿದ್ದ ಬಸ್​, ಅದರಿಂದ ಇಳಿವಾಗ ಈ ಘಟನೆ  ನಡೆದಿದೆ. ಲಾಂಚ್‌ನ ಲಂಗರಿನಿಂದ ಕೆಳಕ್ಕಿಳಿದು ಏರಿ ಏರಿದ ಬಸ್​ನ ಇಂಜಿನ್ ಇದ್ದಕ್ಕಿದ್ದ ಹಾಗೆ ಆಫ್ ಆಗಿದೆ. ಇದರಿಂದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿನತ್ತ ಚಲಿಸಲು ಆರಂಭಿಸಿತ್ತು. 

ಕೆಲವೇ ಸೆಕೆಂಡ್​ಗಳಲ್ಲಿ ಚಾಲಕ ಬಸ್​ನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸ್ಟೇರಿಂಗ್ ತಿರುಗಿಸಿದ್ದಾರೆ. ಪರಿಣಾಮ ಇಳಿಜಾರಿನಲ್ಲಿ ಇಳಿದ ಬಸ್ ಹಿನ್ನೀರಿಗೆ ಅಡ್ಡಲಾಗಿ ತಿರುಗಿ ನಿಂತಿದೆ.   

ಹಿನ್ನೀರಿನತ್ತ ಹಿಮ್ಮಖವಾಗಿ ಚಲಿಸಿದ್ದರಿಂದ ಬಸ್​ನಲ್ಲಿದ್ದವರಿಗೆ ಆತಂಕ ಎದುರಾಗಿತ್ತು. ಬಸ್​ನಲ್ಲಿ ಸುಮಾರು 60 ಜನರಿದ್ದರು. ಅದೃಷ್ಟಕ್ಕೆ ಯಾರಿಗೂ ಏನೂ ಆಗಲಿಲ್ಲ.  ಚಾಲಕನ ಸಮಯಪ್ರಜ್ಞೆಯು ಅಪಾಯವೊಂದನ್ನು ತಪ್ಪಿಸಿತ್ತು. 


ಪ್ರೀತ್ಸೆ...ಪ್ರೀತ್ಸೆ ಎಂದು ಅಪ್ರಾಪ್ತೆಗೆ ಜೀವ ಬೆದರಿಕೆ ! ದಾಖಲಾಯ್ತು ಪೋಕ್ಸೋ ಕೇಸ್! ಏನಿದು ಸಾಗರ ಪ್ರಕರಣ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ (Sagar Town Police Station)  ನಲ್ಲಿ ಅಪ್ರಾಪ್ತೆಯೊಬ್ಬಳಿಗೆ ಪ್ರೀತಿಸು ಎಂದು ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. 

ಜೀವ ಬೆದರಿಕೆ ಆರೋಪ

ಸಾಗರ ಟೌನ್​ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಅಪ್ರಾಪ್ತೆಯ ತಂದೆಯ ನಿಧನದ ನಂತರ ಪರಿಚಯನಾದ ಈತ, ಇತ್ತೀಚೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದನಂತೆ. 

ಆರೋಪಿ ವಶಕ್ಕೆ 

ಈ ವಿಚಾರವಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಸಹಾಯ ಪಡೆದ ಅಪ್ರಾಪ್ತೆ ಸಾಗರ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ಧಾರೆ. 


ಇನ್ನಷ್ಟು ಸುದ್ದಿಗಳು