ಆಯನೂರು ಮಂಜುನಾಥ್ ರವರ ಬೆನ್ನಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎಂ.ಶ್ರೀಕಾಂತ್
m-srikanth-will-join-congress-after-ayanur-manjunathಆಯನೂರು ಮಂಜುನಾಥ್ ರವರ ಬೆನ್ನಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎಂ.ಶ್ರೀಕಾಂತ್
KARNATAKA NEWS/ ONLINE / Malenadu today/ Sep 7, 2023 SHIVAMOGGA NEWS
ರಾಜ್ಯದಲ್ಲಿ ಆಪರೇಷನ್ ಹಸ್ತದ ಸುಳಿವನ್ನ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ನೀಡಿದ್ದಾರೆ. ಅದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ನಿಂದ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್ ಕೂಡ , ಜೆಡಿಎಸ್ನ್ನ ತೊರೆದು ಕಾಂಗ್ರೆಸ್ ತೊರೆದಿದ್ದರು.
ಇದರ ಬೆನ್ನಲ್ಲೆ , ಇದೀಗ ಮತ್ತೊಬ್ಬ ಜೆಡಿಎಸ್ ಮುಖಂಡ ಕಾಂಗ್ರೆಸ್ ಸೇರಲಿದ್ದಾರೆ. ಸದ್ಯ ಜೆಡಿಎಸ್ ಜಿಲ್ಲಾಧ್ಯಕ್ಷರು ಸಹ ಆಗಿರುವ ಎಂ. ಶ್ರಿಕಾಂತ್ ಜೆಡಿಎಸ್ ಸೇರಲಿದ್ದಾರೆ ಎಂಬುದು ಮಲೆನಾಡು ಟುಡೆಗೆ ಅಧಿಕೃತವಾಗಿ ಮಾಹಿತಿ ಬಂದಿದೆ.
ಜೆಡಿಎಸ್ ನ ಎಂ ಶ್ರೀಕಾಂತ್ ಇತ್ತೀಚೆಗೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದರು. ಅದರಲ್ಲಿಯು ಮುಖ್ಯವಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರವರನ್ನು ಭೇಟಿ ಮಾಡಿರುವ ಫೋಟೊ ವೈರಲ್ ಆಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮಲೆನಾಡು ಟುಡೆ ಮಾಹಿತಿ ಕಲೆ ಹಾಕಿದಾಗ, ನಿನ್ನೆ ಡಿ.ಕೆ.ಶಿವಕುಮಾರ್ರವರ ಜೊತೆಗೆ ಶ್ರೀಕಾಂತ್ ರವರು ಮಾತುಕತೆ ನಡೆಸಿದ್ದು, ಅವರು ಪಕ್ಷ ಸೇರುವ ವಿಚಾರ ತಿಳಿದು ಬಂದಿದೆ.
ಇನ್ನೂ ಈ ಬಗ್ಗೆ ಎಂ.ಶ್ರೀಕಾಂತ್ರವರನ್ನು ಮಲೆನಾಡು ಟುಡೆಯ ಹಿರಿಯ ವರದಿಗಾಗ ಜೆಪಿ ಸಂಪರ್ಕಿಸಿದ್ದಾರೆ. ಈ ವೇಳೆ ಶ್ರೀಕಾಂತ್ರವರು ಹೌದು, ಕಾಂಗ್ರೆಸ್ ಸೇರುವ ವಿಚಾರ ನಿಜ ಎಂದಿದ್ದಾರೆ
ಇನ್ನಷ್ಟು ಸುದ್ದಿಗಳು
-
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
-
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!