ಆಯನೂರು ಮಂಜುನಾಥ್​ ರವರ ಬೆನ್ನಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎಂ.ಶ್ರೀಕಾಂತ್

m-srikanth-will-join-congress-after-ayanur-manjunathಆಯನೂರು ಮಂಜುನಾಥ್​ ರವರ ಬೆನ್ನಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎಂ.ಶ್ರೀಕಾಂತ್

ಆಯನೂರು ಮಂಜುನಾಥ್​ ರವರ ಬೆನ್ನಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎಂ.ಶ್ರೀಕಾಂತ್

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS  

ರಾಜ್ಯದಲ್ಲಿ ಆಪರೇಷನ್​ ಹಸ್ತದ ಸುಳಿವನ್ನ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ರವರು ನೀಡಿದ್ದಾರೆ. ಅದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್​​ನಿಂದ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್​ ಕೂಡ , ಜೆಡಿಎಸ್​ನ್ನ ತೊರೆದು ಕಾಂಗ್ರೆಸ್​ ತೊರೆದಿದ್ದರು. 

ಇದರ ಬೆನ್ನಲ್ಲೆ , ಇದೀಗ ಮತ್ತೊಬ್ಬ ಜೆಡಿಎಸ್​ ಮುಖಂಡ ಕಾಂಗ್ರೆಸ್​ ಸೇರಲಿದ್ದಾರೆ. ಸದ್ಯ ಜೆಡಿಎಸ್​ ಜಿಲ್ಲಾಧ್ಯಕ್ಷರು ಸಹ ಆಗಿರುವ ಎಂ. ಶ್ರಿಕಾಂತ್ ಜೆಡಿಎಸ್​ ಸೇರಲಿದ್ದಾರೆ ಎಂಬುದು ಮಲೆನಾಡು ಟುಡೆಗೆ ಅಧಿಕೃತವಾಗಿ ಮಾಹಿತಿ ಬಂದಿದೆ. 

ಜೆಡಿಎಸ್​ ನ ಎಂ ಶ್ರೀಕಾಂತ್ ಇತ್ತೀಚೆಗೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದರು. ಅದರಲ್ಲಿಯು ಮುಖ್ಯವಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ರವರನ್ನು ಭೇಟಿ ಮಾಡಿರುವ ಫೋಟೊ ವೈರಲ್ ಆಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮಲೆನಾಡು ಟುಡೆ ಮಾಹಿತಿ ಕಲೆ ಹಾಕಿದಾಗ, ನಿನ್ನೆ ಡಿ.ಕೆ.ಶಿವಕುಮಾರ್​ರವರ ಜೊತೆಗೆ ಶ್ರೀಕಾಂತ್​ ರವರು ಮಾತುಕತೆ ನಡೆಸಿದ್ದು, ಅವರು ಪಕ್ಷ ಸೇರುವ ವಿಚಾರ ತಿಳಿದು ಬಂದಿದೆ. 

ಇನ್ನೂ ಈ ಬಗ್ಗೆ ಎಂ.ಶ್ರೀಕಾಂತ್​ರವರನ್ನು ಮಲೆನಾಡು ಟುಡೆಯ ಹಿರಿಯ ವರದಿಗಾಗ ಜೆಪಿ ಸಂಪರ್ಕಿಸಿದ್ದಾರೆ. ಈ ವೇಳೆ ಶ್ರೀಕಾಂತ್​ರವರು ಹೌದು, ಕಾಂಗ್ರೆಸ್ ಸೇರುವ ವಿಚಾರ ನಿಜ ಎಂದಿದ್ದಾರೆ 


   

ಇನ್ನಷ್ಟು ಸುದ್ದಿಗಳು