BREAKING NEWS / ಶಿವಮೊಗ್ಗ ಜಿಲ್ಲೆಯಾದ್ಯಂತ ಮೂರು ದಿವಸ ಒಣ ದಿನದ ಆದೇಶ/ ನಿರ್ಬಂಧ ಹೇರಿದ ಜಿಲ್ಲಾಡಳಿತ! ಏನಿದು ಮಾಹಿತಿ!?
BREAKING NEWS/ District administration imposes three-day dry day order/restrictions across Shivamogga district!Shivamogga live news update dc dr selwamani
ಶಿವಮೊಗ್ಗ ನ್ಯೂಸ್/ SHIVAMOGGA NEWS/ Malenadu today/ Apr 20, 2023/ KARNATAKA ONLINE NEWS / GOOGLE NEWS
ಶಿವಮೊಗ್ಗ/ ಚುನಾವಣಾ ನಾಮಪತ್ರ ಸಲ್ಲಿಕೆಯ ಭರಾಟೆ ಮುಗಿದಿದ್ದು ಅಭ್ಯರ್ಥಿಗಳು ಯಾರು ಎಂಬುದು ಗೊತ್ತಾಗಿದೆ! ಇನ್ನೇನಿದ್ರು ಚುನಾವಣಾ ಪ್ರಚಾರದ ಅಬ್ಬರ. ಈ ಮಧ್ಯೆ ಶಿವಮೊಗ್ಗ ಜಿಲ್ಲಾಡಳಿತ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ದಿನ ಶುಷ್ಕದಿನದ ಆದೇಶವನ್ನು ಹೊರಡಿಸಿದೆ.
Read / Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?
ಏನಿದು?
ಡ್ರೈ ಡೇ ಅಥವಾ ಶುಷ್ಕ ದಿನ ಅಂದರೆ, ಜಿಲ್ಲಾಡಳಿತ ಸೂಚಿಸಿದ ಈ ದಿನ ಮದ್ಯ ಮಾರಾಟಕ್ಕೆ ನಿರ್ಬಂಧವಿರುತ್ತದೆ. ಸದ್ಯ ಶಿವಮೊಗ್ಗ ದಲ್ಲಿ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ , ಮುಕ್ತ ಹಾಗೂ ನಿಷ್ಪಕ್ಷಪಾತ ಎಲೆಕ್ಷನ್ ನಡೆಸಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮೂರು ದಿನ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು
ಯಾವಾಗ?
ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಒಣದಿನಗಳೆಂದು ಜಿಲ್ಲಾಡಳಿತ ಘೋಷಿಸಿದೆ.
-
ಆದ್ದರಿಂದ ಮತದಾನ ಪ್ರಯುಕ್ತ ದಿನಾಂಕ: 08-05-2023 ರ ಸಂಜೆ 05-00 ರಿಂದ 10-05-2023 ಮಧ್ಯರಾತ್ರಿ 12-00 ಗಂಟೆಯವರೆಗೆ
-
ಮತ ಎಣಿಕೆ ಪ್ರಯುಕ್ತ ದಿ: 13-05-2023 ರಂದು ಬೆಳಗ್ಗೆ 06-00 ಗಂಟೆಯಿಂದ ಮಧ್ಯರಾತ್ರಿ 12-00 ಗಂಟೆಯವರೆಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ
ಆದೇಶದಲ್ಲಿ ಎನಿದೆ
ಡಾ|| ಸೆಲ್ವಮಣಿ ಆರ್, ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10-ಬಿ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆ-1951 ರ ಸೆಕ್ಷನ್-135- ಸಿ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಮತದಾನ ಪ್ರಯುಕ್ತ ದಿನಾಂಕ: 08-05-2023 ರ ಸಂಜೆ 05-00 ಗಂಟೆಯಿಂದ 10-05-2023 ರ ಮಧ್ಯರಾತ್ರಿ 12-00 ಗಂಟೆಯವರೆಗೆ ಮತ್ತು ಮತ ಎಣಿಕೆ ಪ್ರಯುಕ್ತ ದಿನಾಂಕ: 13-05-2023 ರಂದು ಬೆಳಗ್ಗೆ 06-00 ರಿಂದ ಮಧ್ಯರಾತ್ರಿ 12-00 ಗಂಟೆಯವರೆಗೆ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಶುಷ್ಕ ದಿನ (Dry Day) ಎಂದು ಘೋಷಿಸಿ ಆದೇಶಿಸಿದೆ. ಈ ದಿನಗಳಂದು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ತರಹದ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದೆ. ಈ ಆದೇಶವನ್ನು ದಿನಾಂಕ: 20-04-2023 ರಂದು ನನ್ನ ಸಹಿ ಮತ್ತು ಮೊಹರಿನೊಂದಿಗೆ ಹೊರಡಿಸಿರುತ್ತೇನೆ.
MUST READ /
Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #Kannada_News, #karnatakaassemblyelection2023, #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,