BREAKING NEWS | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ & ತನಿಖಾಧಿಕಾರಿ ಕೆ.ಟಿ ಗುರುರಾಜ್​

ಶಿವಮೊಗ್ಗ ಪೊಲೀಸ್​ ವಿಭಾಗಕ್ಕೆ ಮತ್ತೊಂದು ಹಮ್ಮೆ ಸಿಕ್ಕಿದೆ, ಶಿವಮೊಗ್ಗದ ಸೈಬರ್​ ಕ್ರೈಂನಲ್ಲಿ (shivamogga cyber police station) ಕೆಲಸ ಮಾಡಿದ್ದ ಟಫ್​ ಕಾಪ್ ಎಂದೇ ಹೆಸರು ಮಾಡಿದ್ದ ಇನ್​ಸ್ಪೆಕ್ಟರ್​ ಗುರುರಾಜ್​,  ಇಂಡಿಯಾ ಸೈಬರ್​ ಕಾಪ್​ ಆಫ್​ ಇಯರ್​ ಪ್ರಶಸ್ತಿಯ ಪಟ್ಟಿಯಲ್ಲಿಕಾಣಿಸಿಕೊಂಡಿದ್ದಾರೆ.  ಸೈಬರ್​ ಕ್ರೈಂ ವಿಭಾಗದಲ್ಲಿ, ಕ್ಲಿಷ್ಟಕರವಾದ ಪ್ರಕರಣವನ್ನು ಅತ್ಯುತ್ತಮವಾಗಿ ಭೇದಿಸಿದ  ತನಿಖಾಧಿಕಾರಿಗಳಿಗೆ ಇಂಡಿಯಾಸ್​ ಸೈಬರ್​ ಕಾಫ್​ ಆಫ್​ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

Malenadu Today

ಹುಣಸೋಡು ಪ್ರಕರಣವನ್ನು ಭೇದಿಸಿದ್ದ ಇನ್​ಸ್ಪೆಕ್ಟರ್​ ಗುರುರಾಜ್​

ಈ ವರ್ಷದ ಪ್ರಶಸ್ತಿಗೆ ಶಿವಮೊಗ್ಗ ಸೈಬರ್​ ಪೊಲೀಸ್​ ನಲ್ಲಿ ತನಿಖಾಧಿಕಾರಿ ಕೆಲಸ ಮಾಡಿದ್ದ ಕೆ.ಟಿ. ಗುರುರಾಜ್​ರವರು ನಾಮನಿರ್ದೇಶನಗೊಂಡಿದ್ದಾರೆ. ಇನ್​ಸ್ಪೆಕ್ಟರ್​ ಗುರುರಾಜ್​ರಾಷ್ಟಮಟ್ಟದಲ್ಲಿ ಗಮನ ಸೆಳೆದಿದ್ದ,  ಶಿವಮೊಗ್ಗದಲ್ಲಿ ನಡೆದ ಹುಣಸೋಡು ಸ್ಫೋಟ ಸೇರಿದಂತೆ, ಹಿಂದೂ ಹರ್ಷನ ಕೊಲೆ ಪ್ರಕರಣ, ನಾಗೇಶ್​ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. 

ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು

ಪ್ಲೆಕ್ಸ್​ ಕೇಸ್​, ಶಂಕಿತರ ಅರೆಸ್ಟ್​ನಲ್ಲಿಯು ಎಸ್​ಪಿಗೆ ಸಾಥ್​

ಇದಷ್ಟೆಅಲ್ಲದೆ ವೀರ ಸಾವರ್ಕರ್​ ಪ್ಲೆಕ್ಸ್ ವಿವಾದದಿಂದ ಭುಗಿಲೆದ್ದ ಸಂಘರ್ಷದ ವಾತಾವರಣದ ನಡುವೆ ಸಂಭವಿಸಿದ್ದ ಪ್ರೇಮ್​ ಸಿಂಗ್​ಗೆ ಚಾಕು ಇರಿದ ಕೇಸ್​ನಲ್ಲಿ, ಶಂಕಿತರ ಜಾಡು ಭೇದಿಸುವಲ್ಲಿ ಅಂದಿನ ಎಸ್​ಪಿ ಲಕ್ಷ್ಮೀಪ್ರಸಾದ್​ರಿಗೆ ಇನ್​ಸ್ಪೆಕ್ಟರ್​ ಗುರುರಾಜ್​ ಸಾಥ್​ ನೀಡಿದ್ದರು. ಕಡೂರು ಪೊಲೀಸ್​ ಟ್ರೈನಿಂಗ್​ ಸೆಂಟರ್​ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ಕೆಲಸದ ನಡುವೆ ಜಭಿ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು ಅದಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು  ಸಂಗ್ರಹಿಸುವುದಕ್ಕೆ ಗುರುರಾಜ್ ನೆರವಾಗಿದ್ದರು. ಅದರ ಮುಂದುವರೆದ ಭಾಗವಾಗಿ ಮಾಜ್ ಯಾಸೀನ್​ ಪೊಲೀಸರ ಬಲೆಗೆ ಬಿದ್ದಿದ್ದರು

ಇದನ್ನು ಸಹ ಓದಿ : ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು

ಸೈಬರ್​ ಟಿಪ್​ ಕೇಸ್​ 

ಇನ್ನೂ ಶಿಕ್ಷಕನೊಬ್ಬ ಮಕ್ಕಳ ವಿಡಿಯೋವನ್ನು ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡುತ್ತಿದ್ದ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸೈಬರ್​ ಟಿಪ್ ಸಂಸ್ಥೆ​ ನೀಡಿದ ಮಾಹಿತಿ ಅನ್ವಯ ಪ್ರಕರಣವನ್ನು ಭೇದಿಸಿ ಆರೋಪಿ ಶಿಕ್ಷೆಯಾಗುವಲ್ಲಿ ಶ್ರಮಿಸಿದ್ದರು ಈ ಇನ್​ಸ್ಪೆಕ್ಟರ್​ ಗುರುರಾಜ್​. ಇದೇ ಸಂದರ್ಭದಲ್ಲಿಯೇ  ಆರು ಅಪ್ರಾಪ್ತ ಬಾಲಕರನ್ನು ಸಹ ರಕ್ಷಣೆಯನ್ನು ಸಹ ಮಾಡಿದ್ದರು.ಈ ಪ್ರಕರಣದ ಪೂರ್ತಿ ವಿವರವನ್ನು ಸದ್ಯದಲ್ಲಿಯೆ ನಿಮ್ಮ ಮುಂದೆ ಇಡಲಿದ್ದೇವೆ. 

Malenadu Today

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಸದ್ಯ, ಈ ಪ್ರಕರಣವೂ ರಾಷ್ಟಮಟ್ಟದಲ್ಲಿಯೇ ಅತ್ಯುತ್ತುಮ ವಾದ ಸೈಬರ್​ ಕ್ರೈಂ ತನಿಖಾ ಪ್ರಕರಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪೂರಕವಾಗಿ  India Cyber Cop Award’ ಪುರಸ್ಕಾರಕ್ಕೆ  ಶಿವಮೊಗ್ಗದ CEN Police Station ನ ಹಿಂದಿನ ಅಧಿಕಾರಿಯಾಗಿದ್ದ ಕೆ.ಟಿ.ಗುರುರಾಜ್​ರವರನ್ನು ನಾಮನಿರ್ದೇಶನ ಮಾಡಲಾಗಿದೆ. ಇವರ ಜೊತೆಯಲ್ಲಿ ಮಧ್ಯಪ್ರದೇಶ್​ನ ಭೋಪಾಲ್​ನಲ್ಲಿರುವ ಸೈಬರ್​ ಆಂಡ್​ ಹೈಟೆಕ್​ ಪೊಲೀಸ್​​ ಸ್ಟೇಷನ್​ನ ಇನ್​ಸ್ಪೆಕ್ಟರ್​ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜಿನ್​ ಸೈಬರ್​ ಪೊಲೀಸ್​ ಸ್ಟೇಷನ್​ನ ಇನ್​ಸ್ಪೆಕ್ಟರ್​ ಸುವರ್ಣ ಶಿಂಧೆಯವರು ಸಹ ಈ ಪಟ್ಟಿಯಲ್ಲಿದ್ದಾರೆ. 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link

Leave a Comment