ಬಸ್​ನ ಪುಟ್​ಬೋರ್ಡ್​ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !

A youth, who was standing on the footboard of a bus, was seriously injured when a barricade hit him near Balebail in Thirthahalli. Thirthahalli Taluk News, Karnataka News Live,

ಬಸ್​ನ ಪುಟ್​ಬೋರ್ಡ್​ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !

KARNATAKA NEWS / ONLINE / Malenadu today/ Nov 20, 2023 SHIVAMOGGA NEWS

Thirthahalli  |  Malnenadutoday.com |  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲ್​ನ ಸಮೀಪ ಮತ್ತೊಂದು ಅಪಘಾತ ಸಂಭವಿಸಿದೆ. ಇತ್ತೀಚೆಗಷ್ಟೆ  ಬಾಳೆಬೈಲ್​ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. 

ಇದೇ ಸ್ಥಳದಲ್ಲಿ ಇವತ್ತು ಬೆಳಗ್ಗೆ ಮತ್ತೊಂದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಹೆಡ್ ಇಂಜುರಿಯಾಗಿದ್ದು, ಆತನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 



READ : ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!



ಯಾರು ಈ ತಪ್ಪು ಮಾಡಬೇಡಿ 

ಬಾಳೆಬೈಲ್​ ಬಳಿ ಸಿಗುವ ರಾಕ್​ ವೀವ್ಹ್​ ಹೋಟೆಲ್ ಬಳಿಯಲ್ಲಿ ಘಟನೆ ನಡೆದಿದೆ. ಮೂಕಾಂಬಿಕಾ ಬಸ್​ನ ಡೋರ್​ನಿಂದ ಕೆಳಕ್ಕೆ ಯುವಕ ಬಿದ್ದು ಘಟನೆ ಸಂಭವಿಸಿದೆ. ಕಮ್ಮರಡಿಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಬಸ್​ನಲ್ಲಿ ಕಲ್ಮನೆ ಸಮೀಪದ ನಿವಾಸಿಯೊಬ್ಬ ಪುಟ್​ಬೊರ್ಡ್​ನಲ್ಲಿಯೇ ನಿಂತಿದ್ದ. 

READ : ಅಂಗಿಯ ತೋಳು ಕತ್ತರಿಸಿದರೇ ಮನೆಗೆ ಹೋಗುವುದು ಹೇಗೆ!? ಹಳ್ಳಿ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿತಾ KEA ಪರೀಕ್ಷೆ ರೂಲ್ಸ್​



ಆತನಿಗೆ ಬಸ್​ ಕಂಡಕ್ಟರ್​ ಪುಟ್​ಬೋರ್ಡ್​ ಮೇಲೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಆದರೆ ಯುವಕ ಕಂಡಕ್ಟರ್ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಒಮ್ಮೆ ಹೇಳಿದ ನಂತರವೂ ಮತ್ತೆ ಪುಟ್​ ಬೋರ್ಡ್​ನಲ್ಲಿ ನೇತಾಡುತ್ತ ಬಸ್​ನಲ್ಲಿ ಬಂದಿದ್ದಾನೆ. ಈ  ಮಧ್ಯೆ ಹೆದ್ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್​ ಯುವಕನಿಗೆ ಬಡಿದಿದೆ. ಪರಿಣಾಮ ಕೆಳಕ್ಕೆ ಬಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದು. ಆತನನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ..