tunga nagara police : ಶಿವಮೊಗ್ಗದ ಸೂಳೆಬೈಲ್​ ನಲ್ಲಿನ ಕಸಾಯಿಖಾನೆಯಲ್ಲಿ ಗೋಹತ್ಯೆ! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

The Tunganagar police raided a slaughterhouse at Sulebail in Shivamogga. Here's what SP Mithun Kumar has to say

tunga nagara police :  ಶಿವಮೊಗ್ಗದ ಸೂಳೆಬೈಲ್​ ನಲ್ಲಿನ ಕಸಾಯಿಖಾನೆಯಲ್ಲಿ ಗೋಹತ್ಯೆ! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಶಿವಮೊಗ್ಗ ನಗರದ ಸೂಳೆಬೈಲ್​ನ ಸಮೀಪ ಇವತ್ತು ತುಂಗಾನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋಹತ್ಯೆ ನಿಷೇಧದ ನಡುವೆಯು, ಗೋವುಗಳನ್ನು ಮಾಂಸಕ್ಕಾಗಿ ಕೊಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. 

Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?

ಇನ್ನೂ ಈ ದಾಳಿಯ ವೇಳೆ ಒಟ್ಟು 12 ಹಸುಗಳನ್ನು ರಕ್ಷಿಸಲಾಗಿದೆ.ದಾಳಿಗೂ ಮೊದಲೇ ಏಳು ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಇನ್ನೂ ದಾಳಿ ಬೆನ್ನಲ್ಲೆ ಕಸಾಯಿಖಾನೆಯ ಮಾಲೀಕ ಅಜೀಜ್​ ಎಂಬಾತ ಪರಾರಿಯಾಗಿದ್ದಾನೆ. 

GST : ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

ತುಂಗಾನಗರ ಐಒ ಮಂಜುನಾಥ್​ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ಅಜೀಜ್ ಎಂಬಾತ ಏಳು ಹಸುಗಳನ್ನು ಸಾಯಿಸಿದ್ದ, ಅಷ್ಟೊತ್ತಿಗೆ ನಮ್ಮ ತಂಡ ದಾಳಿ ನಡೆಸಿದೆ , ಒಟ್ಟು 12 ಹಸುಗಳನ್ನು ರಕ್ಷಣೆ ಮಾಡಿದ್ದು, ಅವುಗಳನ್ನು ಗೋಶಾಲೆಗೆ ಕಳುಹಿಸಿಕೊಡುತ್ತಿದ್ದೇವೆ.

MESCOM : ಶಿವಮೊಗ್ಗ ನಾಗರಿಕರ ಗಮನಕ್ಕೆ: ಫ್ಯೂಸ್​​ ಕೀಳಲು ಬರುವ ಮೆಸ್ಕಾಂ ಸಿಬ್ಬಂದಿ ಕೈಯಲ್ಲಿ ಕರೆಂಟ್ ಬಿಲ್​ ಕಟ್ಟಬೇಡಿ

ಇನ್ನೂ THE KARNATAKA PREVENTION OF SLAUGHTER AND PRESERVATION OF CATTLE ACT, 2020 ಆಕ್ಟ್​ನ ಅಡಿಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆತನ ಪತ್ತೆಗಾಗಿ ತಂಡವನ್ನು ರಚಿಸಿದ್ದೇವೆ ಎಂದು ಮಾಹಿತಿ ನೀಡಿದ್ರು. ಅಲ್ಲದೆ, ಈ ಆಕ್ಟ್​ನನ ಅಡಿಯಲ್ಲಿ ಬರುವ confiscation ನಡಿಯಲ್ಲಿ, ಆರೋಪಿಯ ಕಸಾಯಿಖಾನೆಯ ಜಾಗವನ್ನು ಸೀಜ್​ ಮಾಡಬಹುದಾಗಿದ್ದು, ಈ ಸಂಬಂಧ ಉಪವಿಭಾಗೀಯ ಅಧಿಕಾರಿಗೆ ಲೆಟರ್ ಬರೆಯುತ್ತೇವೆ ಎಂದಿದ್ದಾರೆ.

thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com