tunga nagara police : ಶಿವಮೊಗ್ಗದ ಸೂಳೆಬೈಲ್ ನಲ್ಲಿನ ಕಸಾಯಿಖಾನೆಯಲ್ಲಿ ಗೋಹತ್ಯೆ! ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
The Tunganagar police raided a slaughterhouse at Sulebail in Shivamogga. Here's what SP Mithun Kumar has to say
ಶಿವಮೊಗ್ಗ ನಗರದ ಸೂಳೆಬೈಲ್ನ ಸಮೀಪ ಇವತ್ತು ತುಂಗಾನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋಹತ್ಯೆ ನಿಷೇಧದ ನಡುವೆಯು, ಗೋವುಗಳನ್ನು ಮಾಂಸಕ್ಕಾಗಿ ಕೊಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?
ಇನ್ನೂ ಈ ದಾಳಿಯ ವೇಳೆ ಒಟ್ಟು 12 ಹಸುಗಳನ್ನು ರಕ್ಷಿಸಲಾಗಿದೆ.ದಾಳಿಗೂ ಮೊದಲೇ ಏಳು ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಇನ್ನೂ ದಾಳಿ ಬೆನ್ನಲ್ಲೆ ಕಸಾಯಿಖಾನೆಯ ಮಾಲೀಕ ಅಜೀಜ್ ಎಂಬಾತ ಪರಾರಿಯಾಗಿದ್ದಾನೆ.
ತುಂಗಾನಗರ ಐಒ ಮಂಜುನಾಥ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ಅಜೀಜ್ ಎಂಬಾತ ಏಳು ಹಸುಗಳನ್ನು ಸಾಯಿಸಿದ್ದ, ಅಷ್ಟೊತ್ತಿಗೆ ನಮ್ಮ ತಂಡ ದಾಳಿ ನಡೆಸಿದೆ , ಒಟ್ಟು 12 ಹಸುಗಳನ್ನು ರಕ್ಷಣೆ ಮಾಡಿದ್ದು, ಅವುಗಳನ್ನು ಗೋಶಾಲೆಗೆ ಕಳುಹಿಸಿಕೊಡುತ್ತಿದ್ದೇವೆ.
ಇನ್ನೂ THE KARNATAKA PREVENTION OF SLAUGHTER AND PRESERVATION OF CATTLE ACT, 2020 ಆಕ್ಟ್ನ ಅಡಿಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆತನ ಪತ್ತೆಗಾಗಿ ತಂಡವನ್ನು ರಚಿಸಿದ್ದೇವೆ ಎಂದು ಮಾಹಿತಿ ನೀಡಿದ್ರು. ಅಲ್ಲದೆ, ಈ ಆಕ್ಟ್ನನ ಅಡಿಯಲ್ಲಿ ಬರುವ confiscation ನಡಿಯಲ್ಲಿ, ಆರೋಪಿಯ ಕಸಾಯಿಖಾನೆಯ ಜಾಗವನ್ನು ಸೀಜ್ ಮಾಡಬಹುದಾಗಿದ್ದು, ಈ ಸಂಬಂಧ ಉಪವಿಭಾಗೀಯ ಅಧಿಕಾರಿಗೆ ಲೆಟರ್ ಬರೆಯುತ್ತೇವೆ ಎಂದಿದ್ದಾರೆ.
thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com