ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಸಾಗರದ ಐಗಿನಬೈಲ್ ಬಳಿ ಪಲ್ಟಿ!
Sagar-Bangalore bus incident near Anandpur ಸಾಗರ -ಬೆಂಗಳೂರು ಬಸ್ ಆನಂದಪುರದ ಬಳಿ ಘಟನೆ
KARNATAKA NEWS/ ONLINE / Malenadu today/ Oct 27, 2023 SHIVAMOGGA NEWS
SAGARA | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾಗಿದೆ.
ಹೇಗಾಯ್ತು ಘಟನೆ
ಖಾಸಗಿ ಬಸ್ ಸಾಗರ ತಾಲ್ಲೂಕಿನಿಂದ ಬೆಂಗಳೂರಿಗೆ ಹೊರಟಿತ್ತು. ಆನಂದಪುರದ ಬಳಿಯಲ್ಲಿ ಸಿಗುವ ಐಗಿನಬೈಲ್ ಟರ್ನಿಂಗ್ನಲ್ಲಿ ಬಸ್ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಒಂದು ಕಡೆಗೆ ಉರುಳಿದೆ. ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಬಸ್ ಉರುಳಿ ಬಿದ್ದ ಶಬ್ದ ಕೇಳಿ ಸುತ್ತಮುತ್ತಲಿನ ಜನರು ಮನೆಯಿಂದ ಹೊರಬಂದು ಹೆದ್ದಾರಿಯಲ್ಲಿ ನೋಡಿದ್ದಾರೆ.
ಬಸ್ ಪಲ್ಟಿಯಾಗಿರುವುದನ್ನ ಗಮನಿಸಿದ ಸ್ಥಳಿಯರು ತಕ್ಷಣವೇ ಸ್ಥಳಕ್ಕೆ ಹೋಗಿ ಬಸ್ನಲ್ಲಿದ್ದವರನ್ನ ಹೊರಕ್ಕೆ ಕರೆತಂದು ಆರೈಕೆ ಮಾಡಿದ್ದಾರೆ. ಇನ್ನೂ ಘಟನೆ ವೇಳೆ ಬಸ್ನಲ್ಲಿ 20 ಜನರು ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ಈ ಪೈಕಿ ಒಂಬತ್ತು ಮಂದಿಗೆ ಗಾಯಗಳಾಗಿದ್ದು ಅವರನ್ನು ಸಾಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇನ್ನೂ ಆನಂದಪುರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!