ಸಾಲ ಕಟ್ಟಿಸಿಕೊಳ್ತಿದ್ದ ರಿಕವರಿ ಆಫೀಸರ್ನಿಂದಲೇ ನಡೀತು ವಂಚನೆ! ಕಂತು ಕಟ್ಟಿದ್ದ ಮಹಿಳೆಯರಿಗೆ ಕಾದಿತ್ತು ಶಾಕ್!
A microfinance company has lodged a complaint against its staff at Jayanagar police station ಮೈಕ್ರೋ ಫೈನಾನ್ಸ್ವೊಂದು ತನ್ನ ಸಿಬ್ಬಂದಿ ವಿರುದ್ಧ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದೆ
KARNATAKA NEWS/ ONLINE / Malenadu today/ Sep 1, 2023 SHIVAMOGGA NEWS
ಮಹಿಳಾ ಸಂಘದ ಸದಸ್ಯರು ಕಟ್ಟಿದ ಸಾಲದ ಹಣವನ್ನು ಫೈನಾನ್ಸ್ ಕಂಪನಿಗೆ ಕಟ್ಟದೆ, ತನ್ನದೇ ಅಕೌಂಟ್ಗೆ ಜಮೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಫೈನಾನ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್ ಕಂಪ್ಲೆಂಟ್ ದಾಖಲಿಸಿದ್ದು, ದಾಖಲಾಗಿರುವ ಎಫ್ಐಆರ್ ಪ್ರಕಾರ, ಮಾರುತಿ ಎಂಬವರು ಫೈನಾನ್ಸ್ನಲ್ಲಿ ರಿಕವರಿ ಆಫಿಸರ್ ಆಗಿ ಕೆಲಸ ಮಾಡುತ್ತಿದ್ದರಂತೆ. 2022 ರಿಂದ ಕೆಲಸದಲ್ಲಿದ್ದ ಇವರು, ಸ್ವಹಾಯ ಸಂಘದ ಮಹಿಳೆಯರಿಗೆ ನೀಡಿದ ಸಾಲದ ಕಂತುಗಳನ್ನು ರಿಕವರಿ ಮಾಡಿ ಫೈನಾನ್ಸ್ಗೆ ಹಣವನ್ನು ಕಟ್ಟುವ ಜವಾಬ್ದಾರಿ ಹೊತ್ತಿದ್ದರು.
ಆದರೆ ಮಾರುತಿ ಪ್ರತಿತಿಂಗಳು ತಮ್ಮ ಅಕೌಂಟ್ಗೆ ಹಣ ಗೂಗಲ್ ಪೇ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, 27 ಮಹಿಳೆಯರಿಂದ ಸಂಗ್ರಹಿಸಿದ 92, 525 ರೂಪಾಯಿ ಫೈನಾನ್ಸ್ಗೆ ಕಟ್ಟದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನಷ್ಟು ಸುದ್ದಿಗಳು
-
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
-
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್