KARNATAKA NEWS/ ONLINE / Malenadu today/ Aug 21, 2023 SHIVAMOGGA NEWS
ಸರ್ಕಲ್ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಕೆಡವಿ ಹಾಕಿದ ಘಟನೆ ಸಂಬಂಧ ಹೊಳೆಹೊನ್ನೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮಹಾತ್ಮಗಾಂಧಿ ಸರ್ಕ್ಲ್ನಲ್ಲಿ ಮಹಾತ್ಮ ಗಾಂಧಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪ್ರತಿಮೆ ಸುತ್ತ ಮಂಟಪವನ್ನು ಸಹ ನಿರ್ಮಿಸಿ, ವಿಶೇಷವಾದ ಗೌರವವನ್ನು ನೀಡಲಾಗುತ್ತಿತ್ತು.
ನಿನ್ನೆ ರಾತ್ರಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಗಾಂಧಿಜಿಯವರ ಪ್ರತಿಮೆಯನ್ನು ಕೆಡವಿದ್ದಾರೆ. ಮೂರ್ತಿಯನ್ನು ಧ್ವಂಸಗೊಳಿಸಿದಷ್ಟೆ ಅಲ್ಲದೆ, ಅದನ್ನು ಬೀಳಿಸಿ ಪುಡಿ ಮಾಡಿದ್ಧಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇನ್ನೂ ಇವತ್ತು ಬೆಳಗ್ಗೆ ವಿಚಾರ ತಿಳಿಯುತ್ತಲೇ ಪ್ರತಿಮೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಯನ್ನು ಬೀಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸ್ತಿದ್ದಾರೆ.
ಮಾರ್ಕೆಟ್ಗೆ ಬಂದ 340 ಕೆಜಿ ತೂಕದ ಮೀನು! ಮೊಬೈಲ್ನಲ್ಲಿ ಶೂಟ್ ಮಾಡಿ ಸೆರೆ ಹಿಡಿದ ಮಂದಿ!
ಮಲೆನಾಡಿನಲ್ಲಿ ಮೀನಿಗೆ ವಿಶೇಷವಾದ ಆದ್ಯತೆ ಇದೆ. ವಿವಿಧ ಜಾತಿಗಳ ಮೀನುಗಳ ಬಗ್ಗೆ ಮಲೆನಾಡಿಗರ ನಡುವೆ ಕಥೆಗಳೇ ಸೃಷ್ಟಿಯಾಗುತ್ತವೆ. ಇದರ ನಡುವೆ ಕೆಲವೊಂದು ಮೀನುಗಳು ಅಚ್ಚರಿಯನ್ನು ಮೂಡಿಸುತ್ತದೆ. ಇದಕ್ಕೆ ಪೂರಕ ಎಂಬಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಪರೂಪದ ತಳಿ ಅಂಬೂರು ಸಮುದ್ರ ಮೀನೊಂದು ನಿನ್ನೆ ಮೀನು ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡಿತ್ತು.
ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರದ ಮೀನೊಂದು (Ambur Sea Fish) ನಿನ್ನೆ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಗೆ ಬಂದಿತ್ತು. ಮೀನು ಖರೀದಿಗೆ ಬಂದವರು, ಖರೀದಿ ಬಿಟ್ಟು ಗಜಗಾತ್ರ ಮೀನಿನ ವಿಡಿಯೋ ಮಾಡುತ್ತಾ ನಿಂತಿದ್ದರು. ಆನಂತರ 1 ಕೆಜಿ ಮೀನಿಗೆ 1000 ರೂಪಾಯಿಗೂ ಹೆಚ್ಚು ಡಿಮ್ಯಾಂಡ್ನೊಂದಿಗೆ ಮೀನು ಮಾರಾಟವಾಗಿದೆ.
ಇನ್ನಷ್ಟು ಸುದ್ದಿಗಳು
ಕಾಗೋಡು ತಿಮ್ಮಪ್ಪರಿಗೆ ದೇವರಾಜು ಅರಸು ಪ್ರಶಸ್ತಿ! ಹಿರಿಯ ಮುಖಂಡರ ಬಗ್ಗೆ ಸಿದ್ದರಾಮಯ್ಯರ ಮಾತು!
ಆಕ್ಸಿಡೆಂಟ್ನಲ್ಲಿ ಗೆಳಯನ ಸಾವಿನ ಸುದ್ದಿ ಕೇಳಿ ಸ್ನೇಹಿತನಿಗೆ ಹಾರ್ಟ್ ಅಟ್ಯಾಕ್! ಸಾವಲ್ಲಿ ಒಂದಾದ ಆಪ್ತಮಿತ್ರರು!
ಶಿವಮೊಗ್ಗ-ಭದ್ರಾವತಿ ಪೊಲೀಸರ ದಿಢೀರ್ ನೈಟ್ ಆಪರೇಷನ್! ಕೆಲವೇ ಗಂಟೆಗಳಲ್ಲಿ 105 ಮಂದಿ ವಿರುದ್ಧ ಕೇಸ್
ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!
