ಸಿಗಂದೂರು-ಸಾಗರ KSRTC ಬಸ್ | ರಸ್ತೆ ಬಿಟ್ಟು ಕಂದಕಕ್ಕೆ ಇಳಿದ ಚಕ್ರ! | ಸ್ವಲ್ಪದರಲ್ಲಿಯೇ ಬಚಾವ್!
The incident took place in Sigandur-Sagar KSRTC bus ಸಿಗಂದೂರು-ಸಾಗರ KSRTC ಬಸ್ ನಲ್ಲಿ ನಡೆದ ಘಟನೆ

KARNATAKA NEWS/ ONLINE / Malenadu today/ Oct 27, 2023 SHIVAMOGGA NEWS
SIGANDURU | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರಿನಿಂದ ಸಾಗರಕ್ಕೆ ಬರುತ್ತಿದ್ದ KSRTC ಬಸ್ ವೊಂದು ನಿನ್ನೆ ಸ್ವಲ್ಪದರಲ್ಲಿಯೇ ಅಪಘಾತಕ್ಕೀಡಾಡುವುದು ತಪ್ಪಿದೆ. ಈ ಘಟನೆ ಚೆನ್ನಗೊಂಡ ಗ್ರಾಮದ ಬಳಿ ನಡೆದಿದೆ.
ಚೆನ್ನಗೊಂಡ ಗ್ರಾಮದ ಸಮೀಪ ಸಿಗಂದೂರಿನಿಂದ ಸಾಗರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಕಂದಕಕ್ಕೆ ಬೀಳುವ ಅಪಾಯ ಎದುರಾಗಿತ್ತು. ಅದೃಷ್ಟವಶಾತ್, ಸ್ವಲ್ಪದರಲ್ಲಿ ಅಪಾಯ ತಪ್ಪಿದೆ
ಸುಳ್ಳಳ್ಳಿಯಿಂದ ಕೊಗಾರುವರೆಗಿನ ರಸ್ತೆಯು ಕಿರಿದಾಗಿದ್ದು, ಸೇತುವೆಯ ಶಿಥಿಲಾವಸ್ಥೆಯಲ್ಲಿದೆ, ತಿರುವಿನಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿಯು ಇದೇ ರೀತಿಯ ಅಪಘಾತವೊಂದು ಇಲ್ಲಿ ಸಂಭವಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಇನ್ನೂ ಕೆಎಸ್ಆರ್ಟಿಸಿ ಬಸ್ನಲ್ಲಿ ಸಾಗುತ್ತಿದ್ದ ಪ್ರಯಾಣಿಕರಿಗೆ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ. ಚಾಲನಕ ನಿಯಂತ್ರಣ ಬಸ್, ರಸ್ತೆಯಂಚಿನ ಬದಿಯಲ್ಲಿ ಒಂದು ಸೈಡ್ ವಾಲಿಕೊಂಡು ನಿಂತಿತ್ತು. ಸ್ಥಳಕ್ಕೆ ಬಂದ ಸ್ಥಳೀಯರು ಪೊಲೀಸರು ಬಸ್ನಲ್ಲಿದ್ದವರಿಗೆ ನೆರವಾದರು
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!