ಮಾರಿಜಾತ್ರೆಯ ರಶ್​ ನಡುವೆ, ಮಗುವಿನ ತುರ್ತುಚಿಕಿತ್ಸೆ ದಾರಿಮಾಡಿಕೊಟ್ಟ ಸಾಗರದ ಜನತೆ! ಏನಿದು ಘಟನೆ ವಿವರ ಇಲ್ಲಿದೆ

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ಜಾತ್ರೆಯ (Maari jatre) ನಡುವೆ ಮಾನವೀಯತೆ ಮೆರೆಯುವಂತಹ ಘಟನೆಯೊಂದು ನಡೆದಿದೆ.ಮಗುವೊಂದರ ತುರ್ತು ಚಿಕಿತ್ಸೆಗಾಗಿ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ಸಾಗರಿಕರು ಜೀರೋ ಟ್ರಾಫಿಕ್ ಮಾದರಿಯಲ್ಲಿ ದಾರಿ ಬಿಟ್ಟು ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. 

*ಪ್ರೀತಿಸಿದ್ದಕ್ಕೆ ಬಿತ್ತು ಕೇಸ್​! ಮದ್ಯ ಸೇವಿಸಲು ಹೋದವ ಆಕ್ಸಿಡೆಂಟ್​ನಲ್ಲಿ ಸಾವು! ತುಂಗಾನದಿಯಲ್ಲಿ ಬಾಲಕನ ದುರ್ಮರಣ! ಶಿವಮೊಗ್ಗ ಕ್ರೈಂ ನ್ಯೂಸ್​*

ನಡೆದಿದ್ದೇನು? 

ನಿನ್ನೆ ಭಾನುವಾರ ಜನರ ಸಂತೆಯೇ ಮಾರಿಜಾತ್ರೆಯಲ್ಲಿ ನೆರದಿತ್ತು. ಇದರ ನಡುವೆ ಶಿರಸಿಯಿಂದ ಶಿವಮೊಗ್ಗಕ್ಕೆ ಮಗುವೊಂದನ್ನ ಖಾಸಗಿ ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸೇರಿದಂತೆ ಸ್ಥಳೀಯರು ಹಾಗೂ ಆ್ಯಂಬುಲೆನ್ಸ್ (Ambulance)​ ಡ್ರೈವರ್​ಗಳು ಹೈವೆ ರಸ್ತೆಯಲ್ಲಿ ನಿಂತು ಸಂಚಾರ ಕ್ಲೀಯರ್ ಮಾಡತೊಡಗಿದರು. ಜೀರೋ ಟ್ರಾಫಿಕ್​ನ ರೀತಿಯಲ್ಲಿ ವಾಹನ ಬರುವ ಮಾರ್ಗದಲ್ಲಿ ಟ್ರಾಫಿಕ್ ಕ್ಲೀಯರ್ ಮಾಡಲಾಯ್ತು.ಹೀಗಾಗಿ ವಾಹನಗಳ ರಶ್​ನ ನಡುವೆ ಆ್ಯಂಬುಲೆನ್ಸ್ ನಿಗದಿತ ಸಮಯದಲ್ಲಿ ಶಿವಮೊಗ್ಗ ತಲುಪಿತು.ಶಿರಸಿ ಮೂಲದ ದಂಪತಿಯ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಬಾಧಿಸುತ್ತಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗುತ್ತಿತ್ತು.  

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

Share This Article