ಶಿವಮೊಗ್ಗದಲ್ಲಿ ಇನ್ನೂ ನಡೀತಿದ್ಯಾ ಸೆಕೆಂಡ್ಸ್, ಥರ್ಡ್ಸ್ ಎಣ್ಣೆ ವಹಿವಾಟು/ ಗೃಹಸಚಿವರ ಜಿಲ್ಲೆಯಲ್ಲಿ ನಕಲಿ ಮದ್ಯಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಿಲ್ವಾ?
ಈ ಘಟನೆಯನ್ನು ಸ್ಥಳೀಯರು ಅಕ್ರಮ ಹಾಗೂ ನಕಲಿ ಮದ್ಯ ಮಾರಾಟಕ್ಕೆ ಲಿಂಕ್ ಮಾಡಿ ಆರೋಪಿಸಿದ್ಧಾರೆ. ತುಂಗಾನಗರದಲ್ಲಿ ತಡರಾತ್ರಿಯವರೆಗೂ ಮದ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟೆ ಅಲ್ಲದೆ ಇದೇ ರೀತಿ ಇನ್ನಿಬ್ಬರು ಸಹ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಪಾನಮತ್ತನಾಗಿದ್ದ ಯುವಕನೊಬ್ಬ ಸಾವನ್ನಪ್ಪಿದ್ದ ಕೇಸ್ ದಾಖಲಾಗಿದೆ.
ತುಂಗಾನಗರದ ನಿವಾಸಿಯಾದ ಯುವಕ, ಮಂಗಳವಾರ ರಾತ್ರಿ ಹೊಟ್ಟೆ ತುಂಬ ಕುಡಿದು ಮನೆಗೆ ಬಂದಿದ್ದ. ಆನಂತರ ಆತನ ಆರೋಗ್ಯದಲ್ಲಿ ವತ್ಯಾಸವಾಗಿ, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆತ ಮೃತಪಟ್ಟಿದ್ದಾನೆ.
ಇದನ್ನು ಸಹ ಓದಿ : NIA NEWS / ಸತ್ಯ ಬಾಯ್ಬಿಟ್ಟ ಮಾಜ್/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್ ಏನು?
ಈ ಘಟನೆಯನ್ನು ಸ್ಥಳೀಯರು ಅಕ್ರಮ ಹಾಗೂ ನಕಲಿ ಮದ್ಯ ಮಾರಾಟಕ್ಕೆ ಲಿಂಕ್ ಮಾಡಿ ಆರೋಪಿಸಿದ್ಧಾರೆ. ತುಂಗಾನಗರದಲ್ಲಿ ತಡರಾತ್ರಿಯವರೆಗೂ ಮದ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟೆ ಅಲ್ಲದೆ ಇದೇ ರೀತಿ ಇನ್ನಿಬ್ಬರು ಸಹ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಫೆಬ್ರವರಿಗೆ ಪ್ರಧಾನಿ ಮೋದಿ ಆಗಮನ/ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ಫಿಕ್ಸ್? ಏನಿದು ಅಪ್ಡೇಟ್ಸ್
ಗೃಹಸಚಿವರು ಈ ಹಿಂದೆ ಶಾಸಕರಿದ್ದಾಗಲೇ ಅಕ್ರಮ ಮದ್ಯ ಮಾರಾಟದ ವಿರುದ್ಧ ಗುಡುಗಿದ್ದರು, ಅಲ್ಲದೆ ಅಕ್ರಮವಾಗಿ ಮಾರಾಟ ಮಾಡುವುದನ್ನ ತಪ್ಪಿಸಲು ಸಾಧ್ಯವಾಗದಿರುವ ಹತಾಶೆಯನ್ನು ಸಹ ವ್ಯಕ್ತಪಡಿಸಿದ್ದರು. ಇದೀಗ ಅವರ ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ಸಾವಿಗೆ ಕಾರಣವಾಗಿರುವ ಆರೋಪ ಕೇಳಿಬಂದಿದೆ.
ಮೃತ ವ್ಯಕ್ತಿಯ ಸಾವಿಗೆ ಅಸಲಿ ಕಾರಣ ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಲಿದೆ. ಆದಾಗ್ಯು ಶಿವಮೊಗ್ಗದಲ್ಲಿ ಅಕ್ರಮ ಮದ್ಯಮಾರಾಟ ತಡೆಯಬೇಕಿದ್ದ ಅಬಕಾರಿ ಇಲಾಖೆಯು, ಸೇಲ್ಸ್ನಲ್ಲಿ ಹೆಚ್ಚು ತೊಡಗಿಸಿಕೊಂಡಂತಿದೆ.
BREAKING NEWS / ಎನ್ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ
ಇನ್ನೊಂದಡೆ ದರ ಹೆಚ್ಚುತ್ತಿರುವುದರಿಂದ ಸೆಕೆಂಡ್ಸ್, ಥರ್ಡ್ಸ್ ಮದ್ಯಗಳ ಮಾರಾಟವೂ ಚುರುಕಾಗಿದ್ಯಾ ಎಂಬ ಶಂಕೆ ಮೂಡುತ್ತಿದೆ. ಅಬಕಾರಿ ಇಲಾಖೆ ಅಕ್ರಮ ತಡೆಯುವ ಕೆಲಸವನ್ನು ಪೊಲೀಸ್ ಇಲಾಖೆಯ ಹೆಗಲಿಗೆ ಹಾಕಿ ಸುಮ್ಮನಾಯಿತೆ ಎಂಬ ಅನುಮಾನ ಮೂಡುತ್ತಿದೆ.
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ