NIA NEWS / ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

ಎನ್​ಐಎ ತಂಡ ಇಬ್ಬರನ್ನು ಅರೆಸ್ಟ್​ ತೋರಿಸಿದೆ. ಆ ಪೈಕಿ ಓರ್ವ ಶಿವಮೊಗ್ಗದವನು. ಇನ್ನೊಬ್ಬ ಕರಾವಳಿ ಕಡೆಯವನು ಎಲ್ಳಾ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ರೆಶಾನ್​ ತಾಜುದ್ದೀನ್​ ಶೇಖ್​ ಮತ್ತು ಹಜೈಗ್​ ಫರ್ಹಾನ್​ ಬೇಗ್​ ಬಂಧಿತರು.

NIA NEWS /  ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA  ಹೇಳಿದ  ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

ಶಿವಮೊಗ್ಗ (shivamogga)  ಮತ್ತು ದಕ್ಷಿಣಕನ್ನಡ (daksina kannada) ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಬುಧವಾರದ ದಿನ ಹಾಗೂ ಅದರ ಹಿಂದಿನ ರಾತ್ರಿ ಎನ್​ಐಎ ನಡೆಸಿದ ದಾಳಿಯ ಇನ್ನೊಂದಿಷ್ಟು ಅಪ್​ಡೇಟ್ಸ್​ ಸಿಕ್ಕಿದೆ. 

ಈ ಸಂಬಂದ ದೆಹಲಿ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಎನ್​ಐಎ ತಂಡ ಇಬ್ಬರನ್ನು ಅರೆಸ್ಟ್​ ತೋರಿಸಿದೆ. ಆ ಪೈಕಿ ಓರ್ವ ಶಿವಮೊಗ್ಗದವನು. ಇನ್ನೊಬ್ಬ ಕರಾವಳಿ ಕಡೆಯವನು ಎಲ್ಳಾ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ರೆಶಾನ್​ ತಾಜುದ್ದೀನ್​ ಶೇಖ್​ ಮತ್ತು  ಹಜೈಗ್​ ಫರ್ಹಾನ್​ ಬೇಗ್​ ಬಂಧಿತರು. 

ಫೆಬ್ರವರಿಗೆ ಪ್ರಧಾನಿ ಮೋದಿ ಆಗಮನ/ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ಫಿಕ್ಸ್​? ಏನಿದು ಅಪ್​ಡೇಟ್ಸ್​

ಎನ್​ಐಎ ಮೂಲಗಳು ದೆಹಲಿಯ ರಾಷ್ಟ್ರೀಯ ಮಾಧ್ಯಮಗಳಿಗೆ ಬಿಟ್ಟುಕೊಟ್ಟಿರುವ ಸುದ್ದಿಯ ಪ್ರಕಾರ, ಈ ಇಬ್ಬರ ಬಂಧನ ಶಿವಮೊಗ್ಗದಲ್ಲಿ ಕಳೆದ ವರ್ಷ ಸೆಪ್ಟೆಂಬರ್​ 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ (shivamogga rural police station) ದಾಖಲಾದ ಕೇಸ್​ನ ಹಿನ್ನೆಲೆಯಲ್ಲಿ ಆಗಿದೆ. ಇದೇ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳ (NIA ) ಕಳೆದ ವರ್ಷದ ನವೆಂಬರ್​ 15 ರಂದು ಕೇಸ್​ ದಾಖಲಿಸಿತ್ತು. 

BREKING NEWS/ ಇವತ್ತು ದಾವಣೆಗೆರೆ/7 ನೇ ತಾರೀಖು ಶಿವಮೊಗ್ಗ ಮತ್ತು ಭದ್ರಾವತಿಗೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ/ ಕಾರಣವೇನು ಗೊತ್ತಾ? ಇಲ್ಲಿದೆ ವಿವರ

ಈ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್​ರು ಅಂದಿನ ಎಸ್​ಪಿ ಲಕ್ಷ್ಮೀಪ್ರಸಾದ್​​ ನೇತೃತ್ವದಲ್ಲಿ  ಮುನೀರ್ ಮಾಜ್ ಮತ್ತು ಯಾಸೀನ್​ನನ್ನ ಬಂಧಿಸಿತ್ತು. ಆ ವೇಳೇ ತೀರ್ಥಹಳ್ಳಿ ಶಾರೀಕ್​ ತಪ್ಪಿಸಿಕೊಂಡಿದ್ದ. ಈ ಆರೋಪಿಗಳು ತುಂಗಾತೀರದಲ್ಲಿ ಟ್ರಯಲ್​ ಬ್ಲಾಸ್ಟ್​ ಮಾಡಿರುವ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು. 

ಶಿವಮೊಗ್ಗದ ಈ ಭಾಗದಲ್ಲಿಂದು ಮೆಸ್ಕಾಂ ಕಾಮಗಾರಿ/ ಪವರ್​ ಕಟ್​/ ಎಲ್ಲೆಲ್ಲಿ? ವಿವರ ಇಲ್ಲಿದೆ

ಇದೇ ಪ್ರಕರಣ ಸಂಬಂಧ ಎನ್​ಐಎ ನಿನ್ನೆ ಆರು ಕಡೆಗಳಲ್ಲಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಎನ್​ಐಎ ಕೆಲವು ದಾಖಲೆಗಳು ಸೇರಿದಂತೆ, ಇಬ್ಬರು ಪರ್ಸನ್​ಗಳನ್ನು ಲಿಫ್ಟ್ ಮಾಡಿದೆ. ಈ ಸಂಬಂಧ ನ್ಯೂಸ್​ ಏಜೆನ್ಸಿಯೊಂದು ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ, ಬಂಧಿತರನ್ನು ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹುಜೈರ್ ಫರ್ಹಾನ್ ಬೇಗ್ ಎಂದು ಗುರುತಿಸಲಾಗಿದೆ.  ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲು ಮತ್ತು ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟುಮಾಡಲು ಆರೋಪಿಗಳಿಂದ ಪಿತೂರಿ ನಡೆದಿರುವ ಆರೋಪದಡಿಯಲ್ಲಿ ಬಂಧಿಸಲಾಗಿದೆ.  

BREAKING NEWS / ಎನ್​ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ

ಗುಟ್ಟು ಬಿಟ್ಟುಕೊಟ್ಟನಾ ಮಾಜ್​ 

ಇನ್ನೂ ಈ ಇಬ್ಬರ ಬಂಧನ ಕೂಡ ಮಾಜ್​ನ ಬೆನ್ನಿಗೆ ಅಂಟಿಕೊಳ್ಳುತ್ತಿದ್ದು, ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಆರೋಪಿ ಮಾಜ್​ ತನ್ನ ವಿಚಾರಣೆ ವೇಳೇ ಇಬ್ಬರು ಸಹಪಾಠಿಗಳ ಹೆಸರನ್ನು ಬಾಯ್ಬಿಟ್ಟಿದ್ಧಾನೆ. ತನ್ನ ಸಹಪಾಠಿಗಳಿಬ್ಬರನ್ನು ಈ ಕೃತ್ಯಗಳಿಗೆ ಮಾಜ್ ಪ್ರೇರಪಿಸಿದ್ದಾಗಿ ಎನ್​ಐಎ ವಿಚಾರಣೆಯಲ್ಲಿ ಗೊತ್ತಾಗಿದೆ. ಮುಖ್ಯವಾಗಿ  ರಶಾನ್  ಮತ್ತು ಫರ್ಹಾನ್, ಐಸಿಸ್​ ಚಟುವಟಿಕೆಗಳಿಗಾಗಿ, ಐಸಿಸ್​ ಹ್ಯಾಂಡ್ಲರ್​ನಿಂದಲೇ ಹಣವನ್ನು ಕ್ರಿಪ್ರೋ ಕರೆನ್ಸಿ ಮೂಲಕ ಪಡೆದುಕೊಳ್ಳುತ್ತಿದ್ದರು ಎಂದು ಎನ್​ಐಎ ಮೂಲಗಳು ನ್ಯೂಸ್ ಏಜೆನ್ಸಿಗೆ ತಿಳಿಸಿದೆಯಂತೆ. ಇನ್ನೂ ಭಯೋತ್ಪಾದನೆಯ ಕೃತ್ಯದ ಉದ್ದೇಶದೊಂದಿಗೆ. ಈ ಆರೋಪಿಗಳು, ವಿವಿಧ ವಾಹನಗಳು, ಮದ್ಯದ ಅಂಗಡಿಗಳು , ಗೋಡೌನ್​ಗಳು ಹಾಗೂ ವಿದ್ಯುತ್ ಟ್ರಾನ್ಸಫಾರ್ಮ್​​ಗಳಿಗೆ ಬೆಂಕಿ ಹಚ್ಚುವ ಕುಕೃತ್ಯವೆಸಗುತ್ತಿದ್ದರು ಎಂಬ ಮಾಹಿತಿ ವಿಚಾರಣೆಯಲ್ಲಿ ಲಭ್ಯವಾಗಿದೆಯಂತೆ. 

SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ