NIA NEWS / ಸತ್ಯ ಬಾಯ್ಬಿಟ್ಟ ಮಾಜ್/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್ ಏನು?
ಎನ್ಐಎ ತಂಡ ಇಬ್ಬರನ್ನು ಅರೆಸ್ಟ್ ತೋರಿಸಿದೆ. ಆ ಪೈಕಿ ಓರ್ವ ಶಿವಮೊಗ್ಗದವನು. ಇನ್ನೊಬ್ಬ ಕರಾವಳಿ ಕಡೆಯವನು ಎಲ್ಳಾ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹಜೈಗ್ ಫರ್ಹಾನ್ ಬೇಗ್ ಬಂಧಿತರು.
ಶಿವಮೊಗ್ಗ (shivamogga) ಮತ್ತು ದಕ್ಷಿಣಕನ್ನಡ (daksina kannada) ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಬುಧವಾರದ ದಿನ ಹಾಗೂ ಅದರ ಹಿಂದಿನ ರಾತ್ರಿ ಎನ್ಐಎ ನಡೆಸಿದ ದಾಳಿಯ ಇನ್ನೊಂದಿಷ್ಟು ಅಪ್ಡೇಟ್ಸ್ ಸಿಕ್ಕಿದೆ.
ಈ ಸಂಬಂದ ದೆಹಲಿ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಎನ್ಐಎ ತಂಡ ಇಬ್ಬರನ್ನು ಅರೆಸ್ಟ್ ತೋರಿಸಿದೆ. ಆ ಪೈಕಿ ಓರ್ವ ಶಿವಮೊಗ್ಗದವನು. ಇನ್ನೊಬ್ಬ ಕರಾವಳಿ ಕಡೆಯವನು ಎಲ್ಳಾ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹಜೈಗ್ ಫರ್ಹಾನ್ ಬೇಗ್ ಬಂಧಿತರು.
ಫೆಬ್ರವರಿಗೆ ಪ್ರಧಾನಿ ಮೋದಿ ಆಗಮನ/ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ಫಿಕ್ಸ್? ಏನಿದು ಅಪ್ಡೇಟ್ಸ್
ಎನ್ಐಎ ಮೂಲಗಳು ದೆಹಲಿಯ ರಾಷ್ಟ್ರೀಯ ಮಾಧ್ಯಮಗಳಿಗೆ ಬಿಟ್ಟುಕೊಟ್ಟಿರುವ ಸುದ್ದಿಯ ಪ್ರಕಾರ, ಈ ಇಬ್ಬರ ಬಂಧನ ಶಿವಮೊಗ್ಗದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ (shivamogga rural police station) ದಾಖಲಾದ ಕೇಸ್ನ ಹಿನ್ನೆಲೆಯಲ್ಲಿ ಆಗಿದೆ. ಇದೇ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳ (NIA ) ಕಳೆದ ವರ್ಷದ ನವೆಂಬರ್ 15 ರಂದು ಕೇಸ್ ದಾಖಲಿಸಿತ್ತು.
ಈ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ರು ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಮುನೀರ್ ಮಾಜ್ ಮತ್ತು ಯಾಸೀನ್ನನ್ನ ಬಂಧಿಸಿತ್ತು. ಆ ವೇಳೇ ತೀರ್ಥಹಳ್ಳಿ ಶಾರೀಕ್ ತಪ್ಪಿಸಿಕೊಂಡಿದ್ದ. ಈ ಆರೋಪಿಗಳು ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿರುವ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು.
ಶಿವಮೊಗ್ಗದ ಈ ಭಾಗದಲ್ಲಿಂದು ಮೆಸ್ಕಾಂ ಕಾಮಗಾರಿ/ ಪವರ್ ಕಟ್/ ಎಲ್ಲೆಲ್ಲಿ? ವಿವರ ಇಲ್ಲಿದೆ
ಇದೇ ಪ್ರಕರಣ ಸಂಬಂಧ ಎನ್ಐಎ ನಿನ್ನೆ ಆರು ಕಡೆಗಳಲ್ಲಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಎನ್ಐಎ ಕೆಲವು ದಾಖಲೆಗಳು ಸೇರಿದಂತೆ, ಇಬ್ಬರು ಪರ್ಸನ್ಗಳನ್ನು ಲಿಫ್ಟ್ ಮಾಡಿದೆ. ಈ ಸಂಬಂಧ ನ್ಯೂಸ್ ಏಜೆನ್ಸಿಯೊಂದು ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ, ಬಂಧಿತರನ್ನು ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹುಜೈರ್ ಫರ್ಹಾನ್ ಬೇಗ್ ಎಂದು ಗುರುತಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲು ಮತ್ತು ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟುಮಾಡಲು ಆರೋಪಿಗಳಿಂದ ಪಿತೂರಿ ನಡೆದಿರುವ ಆರೋಪದಡಿಯಲ್ಲಿ ಬಂಧಿಸಲಾಗಿದೆ.
BREAKING NEWS / ಎನ್ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ
ಗುಟ್ಟು ಬಿಟ್ಟುಕೊಟ್ಟನಾ ಮಾಜ್
ಇನ್ನೂ ಈ ಇಬ್ಬರ ಬಂಧನ ಕೂಡ ಮಾಜ್ನ ಬೆನ್ನಿಗೆ ಅಂಟಿಕೊಳ್ಳುತ್ತಿದ್ದು, ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಆರೋಪಿ ಮಾಜ್ ತನ್ನ ವಿಚಾರಣೆ ವೇಳೇ ಇಬ್ಬರು ಸಹಪಾಠಿಗಳ ಹೆಸರನ್ನು ಬಾಯ್ಬಿಟ್ಟಿದ್ಧಾನೆ. ತನ್ನ ಸಹಪಾಠಿಗಳಿಬ್ಬರನ್ನು ಈ ಕೃತ್ಯಗಳಿಗೆ ಮಾಜ್ ಪ್ರೇರಪಿಸಿದ್ದಾಗಿ ಎನ್ಐಎ ವಿಚಾರಣೆಯಲ್ಲಿ ಗೊತ್ತಾಗಿದೆ. ಮುಖ್ಯವಾಗಿ ರಶಾನ್ ಮತ್ತು ಫರ್ಹಾನ್, ಐಸಿಸ್ ಚಟುವಟಿಕೆಗಳಿಗಾಗಿ, ಐಸಿಸ್ ಹ್ಯಾಂಡ್ಲರ್ನಿಂದಲೇ ಹಣವನ್ನು ಕ್ರಿಪ್ರೋ ಕರೆನ್ಸಿ ಮೂಲಕ ಪಡೆದುಕೊಳ್ಳುತ್ತಿದ್ದರು ಎಂದು ಎನ್ಐಎ ಮೂಲಗಳು ನ್ಯೂಸ್ ಏಜೆನ್ಸಿಗೆ ತಿಳಿಸಿದೆಯಂತೆ. ಇನ್ನೂ ಭಯೋತ್ಪಾದನೆಯ ಕೃತ್ಯದ ಉದ್ದೇಶದೊಂದಿಗೆ. ಈ ಆರೋಪಿಗಳು, ವಿವಿಧ ವಾಹನಗಳು, ಮದ್ಯದ ಅಂಗಡಿಗಳು , ಗೋಡೌನ್ಗಳು ಹಾಗೂ ವಿದ್ಯುತ್ ಟ್ರಾನ್ಸಫಾರ್ಮ್ಗಳಿಗೆ ಬೆಂಕಿ ಹಚ್ಚುವ ಕುಕೃತ್ಯವೆಸಗುತ್ತಿದ್ದರು ಎಂಬ ಮಾಹಿತಿ ವಿಚಾರಣೆಯಲ್ಲಿ ಲಭ್ಯವಾಗಿದೆಯಂತೆ.
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ