ಹಿಂದುತ್ವಕ್ಕಾಗಿ ಮಡಿದವರಿಗೆಲ್ಲಾ ಟಿಕೆಟ್ ಕೊಡುತ್ತಾ ಹೋದರೆ ಬಹಳ ಜನರಿಗೆ ಟಿಕೆಟ್ ಕೊಡಬೇಕಾಗುತ್ತೆ: ಕೆಎಸ್​ ಈಶ್ವರಪ್ಪ

Malenadu Today

KARNATAKA NEWS/ ONLINE / Malenadu today/ Apr 26, 2023 GOOGLE NEWS


ಬಾಗಲಕೋಟೆ  / ಕರ್ನಾಟಕ ವಿಧಾನಸಭಾ ಚುನಾವಣೆ / ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವ ಮಾಜಿ ಸಚಿವ ಕೆಎಸ್​ ಈಶ್ವರಪ್ಪನವರಿಗೆ (KS Eshwarappa) ಎಲ್ಲೆ ಹೋಗಲಿ ಅವರಿಗೆ ಹಿಂದುತ್ವಕ್ಕಾಗಿ ಮಡಿದವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿಲ್ಲವೇಕೆ ಎಂಬ ಪ್ರಶ್ನೆಯೊಂದು ಎದುರಾಗುತ್ತಿದೆ. 

 ಹುಬ್ಬಳ್ಳಿ-ಧಾರವಾಡ ದಲ್ಲಿಯು  ಅವರಿಗೆ ಇದೆ ಪ್ರಶ್ನೆ ಎದುರಾಗಿತ್ತು. ಹಿಂದೂ ಹರ್ಷ ನ ಕುಟುಂಬಕ್ಕೆ ಟಿಕೆಟ್ ನೀಡದಿರುವ ಬಗ್ಗೆ ಪ್ರಶ್ನಿಸಲಾಗ ಮಾಜಿ ಸಚಿವರು ಸಿಟ್ಟಾಗಿದ್ದರು. ಅಲ್ಲದೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೆ ಗೊತ್ತಿದೆ ಎಂದಿದ್ದರು. 

 

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 

ಇದೀಗ ಅಂತಹುದ್ದೆ ಸನ್ನಿವೇಶ ನಿನ್ನೆ ಬಾಗಲಕೋಟೆಯಲ್ಲಿ ಈಶ್ವರಪ್ಪನವರಿಗೆ ಎದುರಾಗಿತ್ತು. ಹಿಂದೂತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡದಿರುವ ಬಗ್ಗೆ ಪ್ರಶ್ನೆ ಕೇಳಿಬಂದಾಗ ಅವರು,  ಹಿಂದುತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡುತ್ತಾ ಹೋದ್ರೆ, ಬಹಳ ಜನರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂದಿದ್ಧಾರೆ. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

 

ಪ್ರಾಣ ಕಳೆದುಕೊಂಡ ಹಿಂದು ಹೋರಾಟಗಾರರಿಗೆ ಟಿಕೆಟ್ ಕೊಡೋದು ಅಂತಾದರೆ, ಬಹಳಷ್ಟು ಜನರಿಗೆ ಟಿಕೆಟ್ ಕೊಡಬೇಕಾಗುತ್ತದೆ. ಅದು ಆಗದ ಮಾತು.

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಹಾಗಂತ, ಹೋರಾಟಕ್ಕೆ ಬೆಲೆ ಇಲ್ಲ ಎಂದಲ್ಲ. ಟಿಕೆಟ್ ಕೊಡಬೇಕಾದರೆ ಅವರ ಗೆಲುವಿನ ಸಾಧ್ಯತೆ ಹಾಗೂ ಸಂಘಟನೆಗೆ ಅವರು ಮಾಡಿದ ಕೆಲಸಗಳನ್ನು ಗಮನಿಸಬೇಕಾಗುತ್ತದೆ ಎಂದಿದ್ದಾರೆ.  

 

Malenadutoday.com Social media

Share This Article