ನೀರಿಳಿದ ಹೊಳೆಯಲ್ಲಿ ಉದ್ಭವಿಸಿದ ಶಿವ, ನಂದಿ , ಗಣೇಶ! ಏನಿದು ವೈಚಿತ್ರ್ಯ?

Idols of Lord Shiva, Nandi and Lord Ganesha found in bhadra river

ನೀರಿಳಿದ ಹೊಳೆಯಲ್ಲಿ ಉದ್ಭವಿಸಿದ ಶಿವ, ನಂದಿ , ಗಣೇಶ! ಏನಿದು ವೈಚಿತ್ರ್ಯ?

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS 

ಸದ್ಯ ಮಲೆನಾಡಿನಲ್ಲಿ ಮಳೆಯಾಗುತ್ತಿದೆ. ಆದರೆ ವರ್ಷಧಾರೆಯ ಮುದ ನೋಡುವುದಕ್ಕೂ ಮೊದಲೂ ಹೊಳೆಗಳೆಲ್ಲಾ ಖಾಲಿಯಾಗಿ ಬರದ ಆಹ್ವಾನ ನೀಡುತ್ತಿದ್ದವು. ಈ ಮಧ್ಯೆ ಹೊಳೆಗಳಲ್ಲಿ ಮುಳುಗಿದ್ದ ದೇವಾಲಯಗಳು ಸಹ ಪ್ರತ್ಯಕ್ಷವಾಗಿದ್ದವು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕಗ್ಗನಳ್ಳ ಎಂಬಲ್ಲಿ ಮೂರು ಮೂರ್ತಿಗಳು ಹೊಳೆಯಲ್ಲಿ ಘೋಚರಿಸಿದ್ದು ಅಚ್ಚರಿ ಮೂಡಿಸಿದೆ. 

ಭದ್ರಾ ನದಿಯಲ್ಲಿ ಶಿವ, ನಂದಿ ಹಾಗೂ ಗಣೇಶನ ಮೂರ್ತಿಗಳು ಘೋಚರಿಸಿವೆ. ನೀರಿನಲ್ಲಿ ಮೂರ್ತಿಗಳು ಕೊಚ್ಚಿಕೊಂಡು ಬಂದಿರುವಂತೆ ಕಾಣುತ್ತಿವೆ. ಅಲ್ಲದೆ ಮೂರು ಮೂರ್ತಿಗಳು ಒಂದೆ ಕಡೆಯಲ್ಲಿದ್ದು ಎದುರುಬದುರು ಇಟ್ಟಂತಿವೆ. ಇನ್ನೂ ಸುತ್ತಮುತ್ತ ಯಾವುದೇ ಶಿವನ ದೇವಾಲಯಗಳು ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಕಾಡಿನಲ್ಲಿರುವ ಯಾವುದೋ ದೇವಾಲಯದ ಭದ್ರೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರಬಹುದು ಎಂದು ಊಹಿಸಿದ್ಧಾರೆ.  


ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ ಮಾಡ್ತಿರುವುದನ್ನ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್!

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂವತ್ತನೇ ತಾರೀಖು ನಡೆದ ಘಟನೆಯಲ್ಲಿ ಪೆಟ್ರೋಲ್ ಬಂಕ್ ವೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವುದನ್ನ ತಪ್ಪಿಸಲು ಹೋದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತುಂಗಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

ನಡೆದಿದ್ದೇನು? 

ಗೋಪಾಳದಲ್ಲಿರುವ ಪೆಟ್ರೋಲ್​ ಬಂಕ್​ವೊಂದರ ಸಮೀಪ ಇರುವ ಜಿಮ್​ವೊಂದರಲ್ಲಿ ದೂರುದಾರ ಯುವಕ ಕೋಚ್ ಆಗಿ ಕೆಲಸ ಮಾಡುತ್ತಿದ್ಧಾನೆ. ಘಟನೆ ದಿನ ಕೆಲಸ ಮುಗಿಸಿ ಮನೆಗೆ ಹೊರಟ ಸಂದರ್ಭದಲ್ಲಿ ಪೆಟ್ರೋಲ್​ ಬಂಕ್​ನಲ್ಲಿರುವ ಸಿಬ್ಬಂದಿಗೆ ಕೆಲವರು ಹಲ್ಲೆ ಮಾಡುತ್ತಿರುವುದನ್ನ ನೋಡಿದ್ದಾರೆ. ತಕ್ಷಣವೇ ಅಲ್ಲಿಗೆ ಹೋಗಿ ಯಾಕೆ ಹಲ್ಲೆ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ದಾಂಧಲೆ ನಡೆಸ್ತಿದ್ದ ದುಷ್ಕರ್ಮಿಗಳ ಗುಂಪು, ದೂರುದಾರ ಯುವಕನ ಮೇಲೂ ಹಲ್ಲೆ ಮಾಡಿ, ಕೈಯಲ್ಲಿದ್ದ ಮಾರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ಧಾರೆ.