ಬಿಜೆಪಿ-ಜೆಡಿಎಸ್​ ಮೈತ್ರಿ! ಮಾಜಿ ಸಿಎಂ ಕುಮಾರಸ್ವಾಮಿಯವರನ್ನ ಭೇಟಿಯಾದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ! ಟೀ ಟೇಬಲ್ ಮೀಟಿಂಗ್​ ನಲ್ಲಿ ಏನೇನೆಲ್ಲಾ ಆಯ್ತು!

Malenadu Today

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಬಿಜೆಪಿ, ಜೆಡಿಎಸ್​ ಮೈತ್ರಿ ಮಾತುಕತೆ ನಡುವೆ ಮಾಜಿ ಸಚಿವ  ಕೆಎಸ್​. ಈಶ್ವರಪ್ಪ ನಿನ್ನೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ತೆರಳಿದ ಕೆ.ಎಸ್​.ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ. 

Malenadu Today

ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆಎಸ್​ಈಶ್ವರಪ್ಪ ನವರು ಮಾಜಿ ಸಿಎಂ ಕುಮಾರಸ್ವಾಮಿಯವರು ಅನಾರೋಗ್ಯದಿಂದ ಇದ್ದಾಗ ಅವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕಳೆದ 10 ರಂದು ಬಳ್ಳಾರಿಯಲ್ಲಿ ಮನೆದೇವರ ಸನ್ನಿಧಿಯಲ್ಲಿ ಹೋಮ ನಡೆಸ್ತಿದ್ದಾಗ , ಮಾಜಿ ಸಿಎಂ ಕುಮಾರಸ್ವಾಮಿಯವರು ಫೋನ್ ಮಾಡಿದ್ದರು. ಆಗ ಮೈತ್ರಿ ಮಾತುಕತೆ ಬಗ್ಗೆ ಮಾತನಾಡಿದ್ದರು, ಅಲ್ಲದೆ ಮನೆಗೆ ಬಂದು ಹೋಗಿ ಎಂದಿದ್ದರು. ಈ ನಿಟ್ಟಿನಲ್ಲಿ  ಕುಮಾರಸ್ವಾಮಿಯವರನ್ನ ಭೇಟಿಯಾಗಿ ಕುಶಲ ಕ್ಷೇಮ ವಿಚಾರಿಸಿದ್ದೇನೆ ಎಂದಿದ್ಧಾರೆ. 

Malenadu Today

ಈಶ್ವರಪ್ಪನವರ ಭೇಟಿ ವೇಳೆ,  ಜೆಡಿಎಸ್ ಪಕ್ಷದ  ಮಾಜಿ ಸಚಿವ ಸಾ.ರಾ.ಮಹೇಶ್ ಕೂಡ ಉಪಸ್ಥಿತರಿದ್ದರು

Malenadu Today


ಇನ್ನಷ್ಟು ಸುದ್ದಿಗಳು 

 


 

Share This Article