ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್ಗೆ ಸಿಲುಕಿ ಕೈ ಕಳೆದುಕೊಂಡ ರೈತ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು : ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು : ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ.
ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ
ಕೆಲಸಕ್ಕೆ ಹೋಗಿದ್ಧಾಗ ಘಟನೆ : ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ. ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್ ರವರು, ಇಲ್ಲಿನ ಮಹೇಶ್ ಗೌಡ ಎಂಬವರ ಜಮೀನಿನಲ್ಲಿ ಒಕ್ಕಲು ಕೆಲಸಕ್ಕೆ ಬಂದಿದ್ರು. ಈ ವೇಳೆ ಆಕಸ್ಮಿಕವಾಗಿ ಭತ್ತದ ಮಷಿನ್ಗೆ ಅವರ ಕೈ ಸಿಲುಕಿದೆ.
ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ
ಚಿಕಿತ್ಸೆಗೆ ಪ್ರಯತ್ನಿಸಿದರೂ ಆಗದ ಪ್ರಯೋಜನ : ಪರಿಣಾಮ ಬಲಗೈ ಕಟ್ ಆಗಿದೆ. ತಕ್ಷಣ ಅವರನ್ನು ತುಂಡಾದ ಕೈನಾ ಸಮೇತ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆದಾಗ್ಯು, ತುಂಡಾದ ಕೈ ಜೋಡಣೆ ಸಾಧ್ಯವಾಗಲಿಲ್ಲ. ಸದ್ಯ ಬಡ ರೈತನ ಪಾಡು ಮುಂದೇಗೆ ಎಂಬುದೇ ಪ್ರಶ್ನೆಯಾಗಿದೆ.
BREAKING NEWS : ಶಿವಮೊಗ್ಗ KSRTC ಬಸ್ಸ್ಟಾಂಡ್ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link